ತಮ್ಮ ಮಳಿಗೆಯಿಂದ ಘನಶ್ಯಾಮ್ ಅವರು ₹2.67 ಲಕ್ಷ ಮೌಲ್ಯದ ಪೀಠೋಪಕರಣ ಖರೀದಿಸಿದ್ದರು. ಆದರೆ ಹಣ ಪಾವತಿಸಿರಲಿಲ್ಲ. ಹಣ ಕೊಡುವಂತೆ ಕೇಳಿದ್ದಕ್ಕೆ, ಮನೆ ಒಡೆಯಲು ಅಧಿಕಾರಿ ಆದೇಶಿಸಿದ್ದಾರೆ. ಅದರಂತೆ ಬುಲ್ಡೋಜರ್ ಬಳಸಿ ಮನೆಯ ಒಂದು ಭಾಗವನ್ನು ಧ್ವಂಸ ಮಾಡಿದ್ದಾರೆ ಎಂದು ಮಳಿಗೆಯ ವ್ಯಾಪಾರಿ ಝಹೀದ್ ಅಹ್ಮದ್, ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.