ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸರ್ಕಾರಿ ನೌಕರರು ಬಿಜೆಪಿ ಕಾರ್ಯಕರ್ತರಿಗೆ ಗೌರವ ಕೊಡದಿದ್ರೆ ಶೂಗಳಿಂದ ಹೊಡೆಯಿರಿ'

ಬಿಜೆಪಿ ಶಾಸಕ ಕುಶ್ವಾಹ ಎಡವಟ್ಟು ಹೇಳಿಕೆ
Last Updated 6 ಜೂನ್ 2019, 13:32 IST
ಅಕ್ಷರ ಗಾತ್ರ

ಲಲಿತಪುರ್: ಬಿಜೆಪಿಕಾರ್ಯಕರ್ತರಿಗೆ ಸರ್ಕಾರಿ ನೌಕರರು ಗೌರವ, ಮರ್ಯಾದೆ ಕೊಡದಿದ್ದರೆ, ನಿಮ್ಮ ಕಾಲಲ್ಲಿರುವ ಶೂಗಳಿಂದ ಅವರಿಗೆ ಹೊಡೆಯಿರಿ ಎಂಬ ವಿವಾದಾದ್ಮಕ ಹೇಳಿಕೆಯನ್ನು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

ಪಕ್ಷದ ಜಿಲ್ಲಾಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿನ ಬಿಜೆಪಿಯ ಶಾಸಕ ರಾಮರತನ್ ಕುಶ್ವಾಹ ಈ ಹೇಳಿಕೆ ನೀಡಿದ್ದಾರೆ.

ಸರ್ಕಾರಿ ನೌಕರರು ನಮ್ಮ ಪಕ್ಷದ ಕಾರ್ಯಕರ್ತರಿಗೆ ಮರ್ಯಾದೆ ಕೊಡದಿದ್ದರೆ ಕಾಲಿನಲ್ಲಿ ಇರುವ ಶೂತೆಗೆದುಕೊಂಡು ಹೊಡೆಯಿರಿ, ಯಾಕೆಂದರೆ, ತಾಳ್ಮೆಗೂ ಒಂದು ಮಿತಿಯಿದೆ ಎಂದಿದ್ದಾರೆ.

ಇತ್ತೀಚೆಗೆ ಬಿಜೆಪಿ ಶಾಸಕರೊಬ್ಬರು ಮಹಿಳೆಯೊಬ್ಬರಿಗೆ ಕಾಲಿನಿಂದ ಒದ್ದು ಆಕೆಯನ್ನು ತಳ್ಳಿದ್ದ ವಿಡಿಯೋ ವೈರಲ್ ಆಗಿತ್ತು. ನಂತರ ಶಾಸಕ ಕ್ಷಮೆಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT