ಲಲಿತಪುರ್: ಬಿಜೆಪಿಕಾರ್ಯಕರ್ತರಿಗೆ ಸರ್ಕಾರಿ ನೌಕರರು ಗೌರವ, ಮರ್ಯಾದೆ ಕೊಡದಿದ್ದರೆ, ನಿಮ್ಮ ಕಾಲಲ್ಲಿರುವ ಶೂಗಳಿಂದ ಅವರಿಗೆ ಹೊಡೆಯಿರಿ ಎಂಬ ವಿವಾದಾದ್ಮಕ ಹೇಳಿಕೆಯನ್ನು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.
ಪಕ್ಷದ ಜಿಲ್ಲಾಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿನ ಬಿಜೆಪಿಯ ಶಾಸಕ ರಾಮರತನ್ ಕುಶ್ವಾಹ ಈ ಹೇಳಿಕೆ ನೀಡಿದ್ದಾರೆ.
ಸರ್ಕಾರಿ ನೌಕರರು ನಮ್ಮ ಪಕ್ಷದ ಕಾರ್ಯಕರ್ತರಿಗೆ ಮರ್ಯಾದೆ ಕೊಡದಿದ್ದರೆ ಕಾಲಿನಲ್ಲಿ ಇರುವ ಶೂತೆಗೆದುಕೊಂಡು ಹೊಡೆಯಿರಿ, ಯಾಕೆಂದರೆ, ತಾಳ್ಮೆಗೂ ಒಂದು ಮಿತಿಯಿದೆ ಎಂದಿದ್ದಾರೆ.
#WATCH: Ramratan Kushwaha, BJP MLA from Lalitpur at a party event says,"If government employees don't respect our workers, then take off your shoes and hit them because there is a limit to patience." (June 4) pic.twitter.com/o889Y1Wl1q