<p><strong>ಧರಾಲಿ(ಉತ್ತರಾಖಂಡ</strong>): ಉತ್ತರಕಾಶಿಯ ಮುಖ್ಬಾ ಗ್ರಾಮದ ಅಂಚಿನಲ್ಲಿರುವ ಮನೆಗಳ ಮುಂದೆ ಕುಳಿತಿರುವ ಮಹಿಳೆಯರಲ್ಲಿ ಈಗ ಮೌನ ಆವರಿಸಿದೆ; ದುಃಖ ಮಡುಗಟ್ಟಿದೆ. ತಮ್ಮ ಕಣ್ಣೆದುರೇ, ಪರ್ವತದಿಂದ ರಭಸದಿಂದ ನುಗ್ಗಿದ ಪ್ರವಾಹ ತನ್ನೊಟ್ಟಿಗೆ ಅಪಾರ ಪ್ರಮಾಣದ ಮಣ್ಣಿನ ರಾಶಿಯನ್ನು ತಂದು, ಧರಾಲಿ ಗ್ರಾಮವನ್ನು ಬಹುತೇಕ ಹೊಸಕಿ ಹಾಕಿದ್ದನ್ನು ನೆನಪಿಸಿಕೊಂಡು ದುಃಖಿಸುತ್ತಾರೆ...</p>.<p>ಧರಾಲಿ ಗ್ರಾಮದಿಂದ 1.5 ಕಿ.ಮೀ. ದೂರದ ಈ ಗ್ರಾಮವು ತಗ್ಗು ಪ್ರದೇಶದಲ್ಲಿದೆ. ಪ್ರವಾಹದ ರಭಸಕ್ಕೆ ಕಟ್ಟಡಗಳು ಧರೆಗೆ ಉರುಳಿತ್ತಿರುವುದು, ಜನರು ಜೀವ ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದುದನ್ನು ಮಹಿಳೆಯರು ವಿವರಿಸುತ್ತಾರೆ.</p>.<p>ಜನರು ಪ್ರಾಣ ಕಳೆದುಕೊಂಡಿರುವುದು, ಮನೆ–ಅಂಗಡಿಗಳೂ ಸೇರಿ ಅನೇಕ ಕಟ್ಟಡಗಳು ಹಾನಿಯಾಗಿದ್ದಕ್ಕಾಗಿ ಮಡುಗಟ್ಟಿರುವ ದುಃಖವನ್ನು ಅವರ ನಿಸ್ತೇಜ ಮುಖಗಳು ಹೇಳುತ್ತಿವೆ.</p>.<p>ಇದು ಧರಾಲಿ, ಮುಖ್ಬಾ ಹಾಗೂ ಇತರ ಗ್ರಾಮಗಳಲ್ಲಿ ಕಂಡು ಬರುವ ದೃಶ್ಯಗಳು. ದಿಢೀರ್ ಪ್ರವಾಹದಿಂದ ತಾವು ಅನುಭವಿಸಿದ ಆಘಾತದಿಂದ ಇಲ್ಲಿನ ಜನರು ಇನ್ನೂ ಹೊರಗೆ ಬಂದಿಲ್ಲ.</p>.<p>‘ಕ್ಷಣಾರ್ಧದಲ್ಲಿ ಈ ದುರಂತ ನಡೆದು ಹೋಯಿತು. ಯಾರೂ ಕೂಡ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಹಾಯಕ್ಕಾಗಿ ಹಲವರು ಮೊರೆ ಇಟ್ಟರಾದರೂ, ಸ್ಪಂದಿಸಲು ಅವಕಾಶವೇ ಇಲ್ಲದ ರೀತಿಯಲ್ಲಿ ಅವಘಡ ಸಂಭವಿಸಿತ್ತು’ ಎಂದು ಮುಖ್ಬಾ ಗ್ರಾಮದ ನಿವಾಸಿ ಆಶಾ ಸೆಮ್ವಾಲ್ ಹೇಳುತ್ತಾರೆ.</p>.<p>‘ನಾವು ಏನನ್ನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಜೋರಾಗಿ ಕಿರುಚಿ, ಶಿಳ್ಳೆ ಹಾಕುವ ಮೂಲಕ ಜನರನ್ನು ಎಚ್ಚರಿಸಲು ಯತ್ನಿಸಿದೆವು. ಧರಾಲಿ ನಮ್ಮ ಪಕ್ಕದ ಗ್ರಾಮ. ಆ ಗ್ರಾಮದ ಪ್ರತಿಯೊಬ್ಬರೂ ಪರಿಚಯ. ಅವರ ಪರಿಸ್ಥಿತಿ ಏನಾಗಿದೆ ಎಂಬುದು ದೇವರಿಗೇ ಗೊತ್ತು’ ಎಂದರು.</p>.<p>‘ಅದೊಂದು ದುಃಸ್ವಪ್ನ. ಕೆಲವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ’ ಎಂದು ಮಾರ್ಕಂಡೇಯ ಗ್ರಾಮದ ನಿಶಾ ಸೆಮ್ವಾಲ್ ಹೇಳುತ್ತಾರೆ.</p>.<p>ಮುಖ್ಬಾ ಗ್ರಾಮದ ಮತ್ತೊಬ್ಬ ನಿವಾಸಿ ಸುಲೋಚನಾ ದೇವಿ ಕೂಡ ಆಘಾತದಿಂದ ಹೊರಬಂದಿಲ್ಲ. ‘ಏನು ಹೇಳಬೇಕೋ ತಿಳಿಯುತ್ತಿಲ್ಲ. ಸಂತ್ರಸ್ತರಿಗೆ ಕೂಡಲೇ ನೆರವು ನೀಡಬೇಕು ಎಂದಷ್ಟೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದರು.</p>.<div><blockquote>ಈ ಪ್ರಾಕೃತಿಕ ವಿಕೋಪದೀಂದ ಧರಾಲಿಯಲ್ಲಿ ₹300 ಕೋಟಿಯಿಂದ ₹400 ಕೋಟಿಯಷ್ಟು ನಷ್ಟ ಆಗಿರಬಹುದು.</blockquote><span class="attribution">– ಸುರೇಶ್ ಸೆಮ್ವಾಲ್, ಗಂಗೋತ್ರಿ ದೇವಸ್ಥಾನ ಕಮಿಟಿ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರಾಲಿ(ಉತ್ತರಾಖಂಡ</strong>): ಉತ್ತರಕಾಶಿಯ ಮುಖ್ಬಾ ಗ್ರಾಮದ ಅಂಚಿನಲ್ಲಿರುವ ಮನೆಗಳ ಮುಂದೆ ಕುಳಿತಿರುವ ಮಹಿಳೆಯರಲ್ಲಿ ಈಗ ಮೌನ ಆವರಿಸಿದೆ; ದುಃಖ ಮಡುಗಟ್ಟಿದೆ. ತಮ್ಮ ಕಣ್ಣೆದುರೇ, ಪರ್ವತದಿಂದ ರಭಸದಿಂದ ನುಗ್ಗಿದ ಪ್ರವಾಹ ತನ್ನೊಟ್ಟಿಗೆ ಅಪಾರ ಪ್ರಮಾಣದ ಮಣ್ಣಿನ ರಾಶಿಯನ್ನು ತಂದು, ಧರಾಲಿ ಗ್ರಾಮವನ್ನು ಬಹುತೇಕ ಹೊಸಕಿ ಹಾಕಿದ್ದನ್ನು ನೆನಪಿಸಿಕೊಂಡು ದುಃಖಿಸುತ್ತಾರೆ...</p>.<p>ಧರಾಲಿ ಗ್ರಾಮದಿಂದ 1.5 ಕಿ.ಮೀ. ದೂರದ ಈ ಗ್ರಾಮವು ತಗ್ಗು ಪ್ರದೇಶದಲ್ಲಿದೆ. ಪ್ರವಾಹದ ರಭಸಕ್ಕೆ ಕಟ್ಟಡಗಳು ಧರೆಗೆ ಉರುಳಿತ್ತಿರುವುದು, ಜನರು ಜೀವ ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದುದನ್ನು ಮಹಿಳೆಯರು ವಿವರಿಸುತ್ತಾರೆ.</p>.<p>ಜನರು ಪ್ರಾಣ ಕಳೆದುಕೊಂಡಿರುವುದು, ಮನೆ–ಅಂಗಡಿಗಳೂ ಸೇರಿ ಅನೇಕ ಕಟ್ಟಡಗಳು ಹಾನಿಯಾಗಿದ್ದಕ್ಕಾಗಿ ಮಡುಗಟ್ಟಿರುವ ದುಃಖವನ್ನು ಅವರ ನಿಸ್ತೇಜ ಮುಖಗಳು ಹೇಳುತ್ತಿವೆ.</p>.<p>ಇದು ಧರಾಲಿ, ಮುಖ್ಬಾ ಹಾಗೂ ಇತರ ಗ್ರಾಮಗಳಲ್ಲಿ ಕಂಡು ಬರುವ ದೃಶ್ಯಗಳು. ದಿಢೀರ್ ಪ್ರವಾಹದಿಂದ ತಾವು ಅನುಭವಿಸಿದ ಆಘಾತದಿಂದ ಇಲ್ಲಿನ ಜನರು ಇನ್ನೂ ಹೊರಗೆ ಬಂದಿಲ್ಲ.</p>.<p>‘ಕ್ಷಣಾರ್ಧದಲ್ಲಿ ಈ ದುರಂತ ನಡೆದು ಹೋಯಿತು. ಯಾರೂ ಕೂಡ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಹಾಯಕ್ಕಾಗಿ ಹಲವರು ಮೊರೆ ಇಟ್ಟರಾದರೂ, ಸ್ಪಂದಿಸಲು ಅವಕಾಶವೇ ಇಲ್ಲದ ರೀತಿಯಲ್ಲಿ ಅವಘಡ ಸಂಭವಿಸಿತ್ತು’ ಎಂದು ಮುಖ್ಬಾ ಗ್ರಾಮದ ನಿವಾಸಿ ಆಶಾ ಸೆಮ್ವಾಲ್ ಹೇಳುತ್ತಾರೆ.</p>.<p>‘ನಾವು ಏನನ್ನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಜೋರಾಗಿ ಕಿರುಚಿ, ಶಿಳ್ಳೆ ಹಾಕುವ ಮೂಲಕ ಜನರನ್ನು ಎಚ್ಚರಿಸಲು ಯತ್ನಿಸಿದೆವು. ಧರಾಲಿ ನಮ್ಮ ಪಕ್ಕದ ಗ್ರಾಮ. ಆ ಗ್ರಾಮದ ಪ್ರತಿಯೊಬ್ಬರೂ ಪರಿಚಯ. ಅವರ ಪರಿಸ್ಥಿತಿ ಏನಾಗಿದೆ ಎಂಬುದು ದೇವರಿಗೇ ಗೊತ್ತು’ ಎಂದರು.</p>.<p>‘ಅದೊಂದು ದುಃಸ್ವಪ್ನ. ಕೆಲವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ’ ಎಂದು ಮಾರ್ಕಂಡೇಯ ಗ್ರಾಮದ ನಿಶಾ ಸೆಮ್ವಾಲ್ ಹೇಳುತ್ತಾರೆ.</p>.<p>ಮುಖ್ಬಾ ಗ್ರಾಮದ ಮತ್ತೊಬ್ಬ ನಿವಾಸಿ ಸುಲೋಚನಾ ದೇವಿ ಕೂಡ ಆಘಾತದಿಂದ ಹೊರಬಂದಿಲ್ಲ. ‘ಏನು ಹೇಳಬೇಕೋ ತಿಳಿಯುತ್ತಿಲ್ಲ. ಸಂತ್ರಸ್ತರಿಗೆ ಕೂಡಲೇ ನೆರವು ನೀಡಬೇಕು ಎಂದಷ್ಟೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದರು.</p>.<div><blockquote>ಈ ಪ್ರಾಕೃತಿಕ ವಿಕೋಪದೀಂದ ಧರಾಲಿಯಲ್ಲಿ ₹300 ಕೋಟಿಯಿಂದ ₹400 ಕೋಟಿಯಷ್ಟು ನಷ್ಟ ಆಗಿರಬಹುದು.</blockquote><span class="attribution">– ಸುರೇಶ್ ಸೆಮ್ವಾಲ್, ಗಂಗೋತ್ರಿ ದೇವಸ್ಥಾನ ಕಮಿಟಿ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>