ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರ ಕುಟುಂಬಸ್ಥರಿಗೆ ನೆರವಾಗಿ ಸಂಸದರು ವೇತನದ ಅಲ್ಪ ಭಾಗ ನೀಡಲಿ: ವರುಣ್‌ ಗಾಂಧಿ

Published 3 ಜೂನ್ 2023, 22:50 IST
Last Updated 3 ಜೂನ್ 2023, 22:50 IST
ಅಕ್ಷರ ಗಾತ್ರ

ನವದೆಹಲಿ: ಒಡಿಶಾದ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನೆರವು ನೀಡಲು ಸಂಸದರೆಲ್ಲರೂ ತಮ್ಮ ವೇತನದ ಅಲ್ಪ ಭಾಗವನ್ನು ನೀಡಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ಮನವಿ ಮಾಡಿದರು.

‘ಸಂತ್ರಸ್ತರಿಗೆ ಮೊದಲಿಗೆ ಬೆಂಬಲ ನೀಡಬೇಕು ಅನಂತರ ನ್ಯಾಯ ಒದಗಿಸಬೇಕು. ಬರಸಿಡಿಲಿನಂಥ ಆಘಾತದಿಂದ ನೊಂದಿರುವ ಕುಟುಂಬಗಳೊಂದಿಗೆ ಜನರು ನಿಲ್ಲಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಸೋನಿಯಾ ಗಾಂಧಿ ಕಂಬನಿ

‘ಒಡಿಶಾದಲ್ಲಿ ನಡೆದ ಭೀಕರ ರೈಲು ಅವಘಡದ ಸುದ್ದಿ ತಿಳಿದು ಆಘಾತ ಮತ್ತು ಸಂಕಟವಾಗುತ್ತಿದೆ. ದುರಂತದಲ್ಲಿ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ’ ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT