<p><strong>ಪಿಲಿಭಿತ್:</strong> ದೇಶದಲ್ಲಿ ಸುಮಾರು 1.5 ಕೋಟಿಯಷ್ಟು ಹುದ್ದೆಗಳು ಭರ್ತಿಯಾಗಬೇಕಿದ್ದರೂ, ನಿರುದ್ಯೋಗಿ ಯುವಕರು ಖಾಲಿ ಹೊಟ್ಟೆಯಲ್ಲಿಯೇ ಅಲೆದಾಡಬೇಕಾದ ಸ್ಥಿತಿ ಇದೆ ಎಂದುಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ಹೇಳಿದ್ದಾರೆ.</p>.<p>ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ 'ಪಿಲಿಭಿತ್' ಕ್ಷೇತ್ರಕ್ಕೆ ಎರಡು ದಿನಗಳ ಭೇಟಿ ಸಲುವಾಗಿ ಆಗಮಿಸಿರುವ ಅವರು, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೋಟ್ಯಂತರ ನಿರುದ್ಯೋಗಿಗಳಿಗೆ ಮುಂದೆ ಏನಾಗಲಿದೆ ಎಂಬುದರ ಅರಿವೂ ಇಲ್ಲ ಎಂದು ಹೇಳಿದ್ದಾರೆ.</p>.<p>ದೇಶದಲ್ಲಿನ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆಸಂಸದರು ನೀಡಿರುವ ಹೇಳಿಕೆಗಳನ್ನು ಅವರ (ವರುಣ್ ಗಾಂಧಿ) ವಕ್ತಾರ ಎಂ.ಆರ್.ಮಲಿಕ್ ಪ್ರಕಟಿಸಿದ್ದಾರೆ.</p>.<p>'ನಮ್ಮ ಹೋರಾಟ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆಯ ವಿರುದ್ಧ. ಪ್ರತಿಯೊಬ್ಬರಿಗೂ ಸಮಾನ ಆರ್ಥಿಕ ಅವಕಾಶಗಳು ಲಭಿಸಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಎಲ್ಲರೊಂದಿಗೆ ಕೂಡಿ ಕೆಲಸ ಮಾಡಿದಾಗ ಮಾತ್ರವೇ ಅದು ಸಾಧ್ಯವಾಗುತ್ತದೆ' ಎಂದು ವರುಣ್ ಗಾಂಧಿ ತಿಳಿಸಿದ್ದಾರೆ.</p>.<p>'ಯಾರೊಬ್ಬರ ಬ್ಯಾಂಕ್ ಖಾತೆಗೂ ಹಣ ಬಂದಿಲ್ಲ. ಆಶ್ವಾಸನೆ ನೀಡಿದ್ದ ಹಾಗೆ 2 ಕೋಟಿ ಉದ್ಯೋಗವೂ ಸೃಷ್ಟಿಯಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂಬ ಭರವಸೆಯೂ ಈಡೇರಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಅಣ್ಣಾ ಹಜಾರೆ ಅವರ ಹೋರಾಟ ಮತ್ತು ದೆಹಲಿ ಗಡಿಗಳಲ್ಲಿ ನಡೆದ ರೈತರ ಪ್ರತಿಭಟನೆ ಬಗ್ಗೆಯೂ ಉಲ್ಲೇಖಿಸಿರುವ ವರುಣ್, 'ಹೋರಾಟಗಾರರೊಂದಿಗೆ ಕುಳಿತು, ಅಣ್ಣಾ ಹಜಾರೆ ಅವರ ಹೋರಾಟವನ್ನು ಬೆಂಬಲಿಸಿದ ಮೊದಲ ಸಂಸದ ನಾನು. ರೈತರ ಪ್ರತಿಭಟನೆಗಳು ನಡೆದಾಗ, ಅಧಿಕಾರಿಗಳನ್ನು ಕರೆದು ರೈತರ ಬೇಡಿಕೆಗಳತ್ತ ಗಮನಹರಿಸುವಂತೆ ಸೂಚನೆ ನೀಡಿದ್ದೆ' ಎಂದು ಹೇಳಿಕೊಂಡಿದ್ದಾರೆ.</p>.<p>'ನಮ್ಮ ನಿಜವಾದ ಹೋರಾಟ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ. ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ದ್ವೇಷವನ್ನು ತೊರೆದು ದೇಶದ ಭವಿಷ್ಯದ ಬಗ್ಗೆ ಆಲೋಚಿಸಬೇಕು. ದೇಶದ ಭವಿಷ್ಯವನ್ನು ಭಾಷಣಗಳಿಂದ ಕಟ್ಟಲು ಸಾಧ್ಯವಿಲ್ಲ. ಅಥವಾ ಚುನಾವಣೆಗಳಲ್ಲಿನ ಗೆಲವು ಮತ್ತು ಸೋಲಿನಿಂದಲೂ ಅಲ್ಲ. ನಿಜವಾದ ಸೇವೆಯಿಂದ ದೇಶದ ಭವಿಷ್ಯ ನಿರ್ಮಿಸಬಹುದು' ಎಂದು ಹೇಳಿದ್ದಾರೆ.</p>.<p>ಮುಂದುವರಿದು,'ದೇಶದ ಭವಿಷ್ಯ ವಿಚಾರವಾಗಿ ಕಳವಳಗೊಂಡಿದ್ದೇನೆ. ಕನಸುಗಳು ದೊಡ್ಡವಿವೆ. ಆದರೆ, ಸಂಪನ್ಮೂಲಗಳು ಮಾತ್ರ ಸೀಮಿತವಾಗಿವೆ. ಯಾವಾಗ ಖಾಸಗೀಕರಣವಾಗುತ್ತದೋ, ಆಗ ಉದ್ಯೋಗಾವಕಾಶಗಳು ಸೀಮಿತಗೊಳ್ಳುತ್ತವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಇಲ್ಲಿನಖಮಾರಿಯಾ ಸೇತುವೆ ಬಳಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ವರುಣ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅವರ ಭಾಷಣ ಕೇಳಲು ಸಾವಿರಾರು ಕಾರ್ಯಕರ್ತರು ನೆರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿಲಿಭಿತ್:</strong> ದೇಶದಲ್ಲಿ ಸುಮಾರು 1.5 ಕೋಟಿಯಷ್ಟು ಹುದ್ದೆಗಳು ಭರ್ತಿಯಾಗಬೇಕಿದ್ದರೂ, ನಿರುದ್ಯೋಗಿ ಯುವಕರು ಖಾಲಿ ಹೊಟ್ಟೆಯಲ್ಲಿಯೇ ಅಲೆದಾಡಬೇಕಾದ ಸ್ಥಿತಿ ಇದೆ ಎಂದುಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ಹೇಳಿದ್ದಾರೆ.</p>.<p>ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ 'ಪಿಲಿಭಿತ್' ಕ್ಷೇತ್ರಕ್ಕೆ ಎರಡು ದಿನಗಳ ಭೇಟಿ ಸಲುವಾಗಿ ಆಗಮಿಸಿರುವ ಅವರು, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೋಟ್ಯಂತರ ನಿರುದ್ಯೋಗಿಗಳಿಗೆ ಮುಂದೆ ಏನಾಗಲಿದೆ ಎಂಬುದರ ಅರಿವೂ ಇಲ್ಲ ಎಂದು ಹೇಳಿದ್ದಾರೆ.</p>.<p>ದೇಶದಲ್ಲಿನ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆಸಂಸದರು ನೀಡಿರುವ ಹೇಳಿಕೆಗಳನ್ನು ಅವರ (ವರುಣ್ ಗಾಂಧಿ) ವಕ್ತಾರ ಎಂ.ಆರ್.ಮಲಿಕ್ ಪ್ರಕಟಿಸಿದ್ದಾರೆ.</p>.<p>'ನಮ್ಮ ಹೋರಾಟ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆಯ ವಿರುದ್ಧ. ಪ್ರತಿಯೊಬ್ಬರಿಗೂ ಸಮಾನ ಆರ್ಥಿಕ ಅವಕಾಶಗಳು ಲಭಿಸಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಎಲ್ಲರೊಂದಿಗೆ ಕೂಡಿ ಕೆಲಸ ಮಾಡಿದಾಗ ಮಾತ್ರವೇ ಅದು ಸಾಧ್ಯವಾಗುತ್ತದೆ' ಎಂದು ವರುಣ್ ಗಾಂಧಿ ತಿಳಿಸಿದ್ದಾರೆ.</p>.<p>'ಯಾರೊಬ್ಬರ ಬ್ಯಾಂಕ್ ಖಾತೆಗೂ ಹಣ ಬಂದಿಲ್ಲ. ಆಶ್ವಾಸನೆ ನೀಡಿದ್ದ ಹಾಗೆ 2 ಕೋಟಿ ಉದ್ಯೋಗವೂ ಸೃಷ್ಟಿಯಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂಬ ಭರವಸೆಯೂ ಈಡೇರಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಅಣ್ಣಾ ಹಜಾರೆ ಅವರ ಹೋರಾಟ ಮತ್ತು ದೆಹಲಿ ಗಡಿಗಳಲ್ಲಿ ನಡೆದ ರೈತರ ಪ್ರತಿಭಟನೆ ಬಗ್ಗೆಯೂ ಉಲ್ಲೇಖಿಸಿರುವ ವರುಣ್, 'ಹೋರಾಟಗಾರರೊಂದಿಗೆ ಕುಳಿತು, ಅಣ್ಣಾ ಹಜಾರೆ ಅವರ ಹೋರಾಟವನ್ನು ಬೆಂಬಲಿಸಿದ ಮೊದಲ ಸಂಸದ ನಾನು. ರೈತರ ಪ್ರತಿಭಟನೆಗಳು ನಡೆದಾಗ, ಅಧಿಕಾರಿಗಳನ್ನು ಕರೆದು ರೈತರ ಬೇಡಿಕೆಗಳತ್ತ ಗಮನಹರಿಸುವಂತೆ ಸೂಚನೆ ನೀಡಿದ್ದೆ' ಎಂದು ಹೇಳಿಕೊಂಡಿದ್ದಾರೆ.</p>.<p>'ನಮ್ಮ ನಿಜವಾದ ಹೋರಾಟ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ. ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ದ್ವೇಷವನ್ನು ತೊರೆದು ದೇಶದ ಭವಿಷ್ಯದ ಬಗ್ಗೆ ಆಲೋಚಿಸಬೇಕು. ದೇಶದ ಭವಿಷ್ಯವನ್ನು ಭಾಷಣಗಳಿಂದ ಕಟ್ಟಲು ಸಾಧ್ಯವಿಲ್ಲ. ಅಥವಾ ಚುನಾವಣೆಗಳಲ್ಲಿನ ಗೆಲವು ಮತ್ತು ಸೋಲಿನಿಂದಲೂ ಅಲ್ಲ. ನಿಜವಾದ ಸೇವೆಯಿಂದ ದೇಶದ ಭವಿಷ್ಯ ನಿರ್ಮಿಸಬಹುದು' ಎಂದು ಹೇಳಿದ್ದಾರೆ.</p>.<p>ಮುಂದುವರಿದು,'ದೇಶದ ಭವಿಷ್ಯ ವಿಚಾರವಾಗಿ ಕಳವಳಗೊಂಡಿದ್ದೇನೆ. ಕನಸುಗಳು ದೊಡ್ಡವಿವೆ. ಆದರೆ, ಸಂಪನ್ಮೂಲಗಳು ಮಾತ್ರ ಸೀಮಿತವಾಗಿವೆ. ಯಾವಾಗ ಖಾಸಗೀಕರಣವಾಗುತ್ತದೋ, ಆಗ ಉದ್ಯೋಗಾವಕಾಶಗಳು ಸೀಮಿತಗೊಳ್ಳುತ್ತವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಇಲ್ಲಿನಖಮಾರಿಯಾ ಸೇತುವೆ ಬಳಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ವರುಣ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅವರ ಭಾಷಣ ಕೇಳಲು ಸಾವಿರಾರು ಕಾರ್ಯಕರ್ತರು ನೆರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>