<p><strong>ರಾಂಚಿ: </strong>ಇಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ವಿದ್ಯಾಲಯದ ಕಿರಿಯ ವೈದ್ಯ, ರೋಗಿಯೊಬ್ಬರ ಜೊತೆಯಲ್ಲಿದ್ದವನನ್ನು ಅಟ್ಟಾಡಿಸಿಕೊಂಡು ಥಳಿಸಿರುವದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಈ ಘಟನೆ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯ ಆಡಳಿತ ಮಂಡಳಿ ಆದೇಶಿಸಿದೆ.</p>.<p><strong>ವಿಡಿಯೊದಲ್ಲಿ ಏನಿದೆ?</strong></p>.<p>ಆಸ್ಪತ್ರೆ ನಿಯಮಗಳಬಗ್ಗೆಕಿರಿಯ ವೈದ್ಯ ಹಾಗೂ ರೋಗಿಯೊಂದಿಗೆ ಇದ್ದ ವ್ಯಕ್ತಿ ಯ ನಡುವೆ ಪರಸ್ಪರವಾಗ್ವಾದ ನಡೆದಿದೆ.ಈ ಜಗಳವನ್ನು ವೀಕ್ಷಿಸುತ್ತಿದ್ದ ಜನರಿಗೆ ಕಿರಿಯ ವೈದ್ಯ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಸಿದ್ದಾನೆ,ನಂತರವ್ಯಕ್ತಿಯ ಕತ್ತುಪಟ್ಟಿ ಹಿಡಿದು ಥಳಿಸಿ, ತುರ್ತು ಚಿಕಿತ್ಸಾ ಘಟಕದ ಗೇಟ್ ಬಳಿ ಎಳೆದಾಡಿದ್ದಾರೆ. ಈದೃಶ್ಯ ವೈರಲ್ ಆಗಿರುವವಿಡಿಯೊದಲ್ಲಿದೆ.</p>.<p>ರೋಗಿಯೊಬ್ಬರನ್ನು ಭಾನುವಾರ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿತ್ತು. ರೋಗಿಯ ಸ್ನೇಹಿತರು ವೈದ್ಯರೊಂದಿಗೆ ಆಸ್ಪತ್ರೆಯ ನಿಯಮಗಳ ಕುರಿತು ವಾಗ್ವಾದ ನಡೆಸಿದ್ದರು. ಎಂದು ಮೂಲಗಳು ತಿಳಿಸಿವೆ.</p>.<p><strong>ಆರಂಭಗೊಂಡ ತನಿಖೆ</strong></p>.<p>ಆಸ್ಪತ್ರೆಯ ಆಡಳಿತವು ಘಟನೆ ಕುರಿತು ತನಿಖೆ ನಡೆಸಲು ಇಬ್ಬರು ಅಧಿಕಾರಿಗಳಸಮಿತಿಯೊಂದನ್ನು ರಚಿಸಿದ್ದು, 48 ಗಂಟೆಯೊಳಗೆ ವರದಿ ನೀಡಬೇಕೆಂದು ಆದೇಶಿಸಿದೆ.</p>.<p>‘ನಾವು ಈಗಾಗಲೇ ಉಪ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ್ ಕುಮಾರ್ ಮತ್ತು ಉಪ ನಿರ್ದೇಶಕ ಗಿರಿಜಾ ಶಂಕರ್ ನೇತೃತ್ವದ ಸಮಿತಿ ರಚಿಸಿದ್ದು, ಅವರು ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದು,48 ಗಂಟೆಯೊಳಗೆ ವರದಿಯನ್ನು ಸಲ್ಲಿಸುತ್ತಾರೆ’ ಎಂದು ಆರ್ಐಎಂಎಸ್ನ ನಿರ್ದೇಶಕ ಡಾ.ಆರ್.ಕೆ.ಶ್ರೀವಾಸ್ತವ ತಿಳಿಸಿದ್ದಾರೆ</p>.<p>‘ಆರ್ಐಎಂಎಸ್ ನಿರ್ದೇಶಕರು ವೈದ್ಯನ ಹೆಸರನ್ನು ಬಹಿರಂಗ ಪಡಿಸುವವರೆಗೂ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಗಾಯಗೊಂಡ ವ್ಯಕ್ತಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ: </strong>ಇಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ವಿದ್ಯಾಲಯದ ಕಿರಿಯ ವೈದ್ಯ, ರೋಗಿಯೊಬ್ಬರ ಜೊತೆಯಲ್ಲಿದ್ದವನನ್ನು ಅಟ್ಟಾಡಿಸಿಕೊಂಡು ಥಳಿಸಿರುವದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಈ ಘಟನೆ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯ ಆಡಳಿತ ಮಂಡಳಿ ಆದೇಶಿಸಿದೆ.</p>.<p><strong>ವಿಡಿಯೊದಲ್ಲಿ ಏನಿದೆ?</strong></p>.<p>ಆಸ್ಪತ್ರೆ ನಿಯಮಗಳಬಗ್ಗೆಕಿರಿಯ ವೈದ್ಯ ಹಾಗೂ ರೋಗಿಯೊಂದಿಗೆ ಇದ್ದ ವ್ಯಕ್ತಿ ಯ ನಡುವೆ ಪರಸ್ಪರವಾಗ್ವಾದ ನಡೆದಿದೆ.ಈ ಜಗಳವನ್ನು ವೀಕ್ಷಿಸುತ್ತಿದ್ದ ಜನರಿಗೆ ಕಿರಿಯ ವೈದ್ಯ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಸಿದ್ದಾನೆ,ನಂತರವ್ಯಕ್ತಿಯ ಕತ್ತುಪಟ್ಟಿ ಹಿಡಿದು ಥಳಿಸಿ, ತುರ್ತು ಚಿಕಿತ್ಸಾ ಘಟಕದ ಗೇಟ್ ಬಳಿ ಎಳೆದಾಡಿದ್ದಾರೆ. ಈದೃಶ್ಯ ವೈರಲ್ ಆಗಿರುವವಿಡಿಯೊದಲ್ಲಿದೆ.</p>.<p>ರೋಗಿಯೊಬ್ಬರನ್ನು ಭಾನುವಾರ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿತ್ತು. ರೋಗಿಯ ಸ್ನೇಹಿತರು ವೈದ್ಯರೊಂದಿಗೆ ಆಸ್ಪತ್ರೆಯ ನಿಯಮಗಳ ಕುರಿತು ವಾಗ್ವಾದ ನಡೆಸಿದ್ದರು. ಎಂದು ಮೂಲಗಳು ತಿಳಿಸಿವೆ.</p>.<p><strong>ಆರಂಭಗೊಂಡ ತನಿಖೆ</strong></p>.<p>ಆಸ್ಪತ್ರೆಯ ಆಡಳಿತವು ಘಟನೆ ಕುರಿತು ತನಿಖೆ ನಡೆಸಲು ಇಬ್ಬರು ಅಧಿಕಾರಿಗಳಸಮಿತಿಯೊಂದನ್ನು ರಚಿಸಿದ್ದು, 48 ಗಂಟೆಯೊಳಗೆ ವರದಿ ನೀಡಬೇಕೆಂದು ಆದೇಶಿಸಿದೆ.</p>.<p>‘ನಾವು ಈಗಾಗಲೇ ಉಪ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ್ ಕುಮಾರ್ ಮತ್ತು ಉಪ ನಿರ್ದೇಶಕ ಗಿರಿಜಾ ಶಂಕರ್ ನೇತೃತ್ವದ ಸಮಿತಿ ರಚಿಸಿದ್ದು, ಅವರು ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದು,48 ಗಂಟೆಯೊಳಗೆ ವರದಿಯನ್ನು ಸಲ್ಲಿಸುತ್ತಾರೆ’ ಎಂದು ಆರ್ಐಎಂಎಸ್ನ ನಿರ್ದೇಶಕ ಡಾ.ಆರ್.ಕೆ.ಶ್ರೀವಾಸ್ತವ ತಿಳಿಸಿದ್ದಾರೆ</p>.<p>‘ಆರ್ಐಎಂಎಸ್ ನಿರ್ದೇಶಕರು ವೈದ್ಯನ ಹೆಸರನ್ನು ಬಹಿರಂಗ ಪಡಿಸುವವರೆಗೂ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಗಾಯಗೊಂಡ ವ್ಯಕ್ತಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>