ನವದೆಹಲಿ: ಅಯೋಧ್ಯೆಯ ಜಮೀನನ್ನು ಶಿಯಾ ವಕ್ಫ್ ಮಂಡಳಿಗೆ ನೀಡಿದರೆ, ಶಿಯಾಗಳು ಇಮಾಮ್-ಎ-ಹಿಂದ್ ಶ್ರೀರಾಮನ ನೆನಪಿನಲ್ಲಿ ಭವ್ಯ ಕಟ್ಟಡವನ್ನು ಕಟ್ಟಿಸುತ್ತಾರೆ ಎಂದು ಶಿಯಾ ವಕ್ಫ್ ಮಂಡಳಿ ಪರ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಹೇಳಿರುವುದು ಈಗ ವೈರಲ್ ಆಗಿದೆ.
ಸುಪ್ರೀಂ ಕೋರ್ಟ್ ಶನಿವಾರದಂದು ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮುನ್ನ ವಕ್ಫ್ ಶಿಯಾ ಮಂಡಳಿಯ ಪರ ವಕೀಲರು ಈ ಹೇಳಿಕೆ ನೀಡಿದ್ದರು.
ಕಾನೂನಿನ ಪ್ರಕಾರ, ಜಮೀನನ್ನು ಶಿಯಾ ವಕ್ಫ್ ಮಂಡಳಿಗೆ ನೀಡಬೇಕು. ಯಾಕೆಂದರೆ ಮಸೀದಿಯನ್ನು ನಿರ್ಮಿಸಿದ್ದು ಶಿಯಾ ಪಂಥದವರು. ಕಾನೂನಿನ ಪ್ರಕಾರ ಶಿಯಾಗಳಿಗೆ ಈ ಜಮೀನು ಸಿಕ್ಕರೆ, ಅವರು ಅಲ್ಲಿ ಶ್ರೀರಾಮನ ಸ್ಮರಣೆಗಾಗಿ ಭವ್ಯ ಕಟ್ಟಡವೊಂದನ್ನು ನಿರ್ಮಿಸುತ್ತಾರೆ ಎಂದು ಅಶ್ವಿನಿ ಉಪಾಧ್ಯಾಯ ಹೇಳಿದ್ದಾರೆ.