<p><strong>ಪಟ್ನಾ:</strong>ಭಾರೀ ಪ್ರವಾಹದಿಂದ ತತ್ತರಿಸಿದ ಬಿಹಾರದ ಕೆಲವು ಪ್ರದೇಶಗಳಿಗೆ ಮುಖ್ಯಮಂತ್ರಿನಿತೀಶ್ ಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಪಟ್ನಾದಲ್ಲಿ ಅವರುಸಂತ್ರಸ್ತರ ಆಕ್ರೋಶ ಎದುರಿಸಬೇಕಾಯಿತು.</p>.<p>ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಾದ ನಿತೀಶ್, ‘ದೇಶದ ಯಾವೆಲ್ಲ ಭಾಗಗಳಲ್ಲಿ, ಪ್ರಪಂಚದಾದ್ಯಂತ ಎಲ್ಲಿ ಪ್ರವಾಹ ಆಗಿಲ್ಲ ಹೇಳಿ? ಪಟ್ನಾದಲ್ಲಿ ಮಾತ್ರ ಪ್ರವಾಹವಾಗಿದೆಯೇ, ಇಲ್ಲಿ ಮಾತ್ರ ಸಮಸ್ಯೆ ಇರುವುದೇ? ಮುಂಬೈ, ಅಮೆರಿಕದಲ್ಲೇನಾಯ್ತು?’ ಎಂದು ಹರಿಹಾಯ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/karnataka-floods-flood-relief-668998.html" target="_blank">ಬಿಹಾರ ಸಂತ್ರಸ್ತರಿಗೆ ಪ್ರಧಾನಿ ಸಾಂತ್ವನ | ರಾಜ್ಯಕ್ಕೆ ಮಿಡಿಯದ ಮೋದಿ</a></p>.<p>ಪ್ರವಾಹವನ್ನು ನೈಸರ್ಗಿ ವಿಪತ್ತು ಎಂದ ಅವರು, ಭಾರೀ ಮಳೆ ಮತ್ತು ಪ್ರವಾಹ ವಾಸ್ತವ. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಪ್ರವಾಹದ ನೀರನ್ನು ನಗರದಿಂದ ಹೊರಹೋಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.</p>.<p>ಪಟ್ನಾದಲ್ಲಿ ಮಳೆ ನಿಂತು 36 ಗಂಟೆ ಕಳೆದರೂ ನಗರದ ಅನೇಕ ಪ್ರದೇಶಗಳು ಇನ್ನೂ ಮುಳುಗಡೆಯಾಗಿಯೇ ಇವೆ. ವಿದ್ಯುತ್, ಕುಡಿಯುವ ನೀರು ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ.</p>.<p>ಮಳೆ ಸಂಬಂಧಿತ ಅವಘಡಗಳಿಂದಾಗಿ ಬಿಹಾರದಲ್ಲಿ ಈವರೆಗೆ 42 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಪಟ್ನಾದ ಹನುಮಾನ್ ನಗರ, ರಾಜೇಂದ್ರ ನಗರ ಮತ್ತು ಕಾನ್ಕರ್ ಬಾಘ್ ಪ್ರದೇಶಗಳ ನಿವಾಸಿಗಳಿಗೆ ವಾಯುಪಡೆ ಹೆಲಿಕಾಪ್ಟರ್ಗಳ ಮೂಲಕ ಪರಿಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಮನೆಗಳ ತಾರಸಿಯಲ್ಲಿ ನಿಂತು ಪ್ರವಾಹದಿಂದ ರಕ್ಷಣೆ ಪಡೆಯುತ್ತಿರುವ ನಿವಾಸಿಗಳು ಸಹಾಯಕ್ಕಾಗಿ ವಾಯುಪಡೆ ಹೆಲಿಕಾಪ್ಟರ್ಗಳತ್ತ ಮೊರೆಯಿಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong>ಭಾರೀ ಪ್ರವಾಹದಿಂದ ತತ್ತರಿಸಿದ ಬಿಹಾರದ ಕೆಲವು ಪ್ರದೇಶಗಳಿಗೆ ಮುಖ್ಯಮಂತ್ರಿನಿತೀಶ್ ಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಪಟ್ನಾದಲ್ಲಿ ಅವರುಸಂತ್ರಸ್ತರ ಆಕ್ರೋಶ ಎದುರಿಸಬೇಕಾಯಿತು.</p>.<p>ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಾದ ನಿತೀಶ್, ‘ದೇಶದ ಯಾವೆಲ್ಲ ಭಾಗಗಳಲ್ಲಿ, ಪ್ರಪಂಚದಾದ್ಯಂತ ಎಲ್ಲಿ ಪ್ರವಾಹ ಆಗಿಲ್ಲ ಹೇಳಿ? ಪಟ್ನಾದಲ್ಲಿ ಮಾತ್ರ ಪ್ರವಾಹವಾಗಿದೆಯೇ, ಇಲ್ಲಿ ಮಾತ್ರ ಸಮಸ್ಯೆ ಇರುವುದೇ? ಮುಂಬೈ, ಅಮೆರಿಕದಲ್ಲೇನಾಯ್ತು?’ ಎಂದು ಹರಿಹಾಯ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/karnataka-floods-flood-relief-668998.html" target="_blank">ಬಿಹಾರ ಸಂತ್ರಸ್ತರಿಗೆ ಪ್ರಧಾನಿ ಸಾಂತ್ವನ | ರಾಜ್ಯಕ್ಕೆ ಮಿಡಿಯದ ಮೋದಿ</a></p>.<p>ಪ್ರವಾಹವನ್ನು ನೈಸರ್ಗಿ ವಿಪತ್ತು ಎಂದ ಅವರು, ಭಾರೀ ಮಳೆ ಮತ್ತು ಪ್ರವಾಹ ವಾಸ್ತವ. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಪ್ರವಾಹದ ನೀರನ್ನು ನಗರದಿಂದ ಹೊರಹೋಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.</p>.<p>ಪಟ್ನಾದಲ್ಲಿ ಮಳೆ ನಿಂತು 36 ಗಂಟೆ ಕಳೆದರೂ ನಗರದ ಅನೇಕ ಪ್ರದೇಶಗಳು ಇನ್ನೂ ಮುಳುಗಡೆಯಾಗಿಯೇ ಇವೆ. ವಿದ್ಯುತ್, ಕುಡಿಯುವ ನೀರು ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ.</p>.<p>ಮಳೆ ಸಂಬಂಧಿತ ಅವಘಡಗಳಿಂದಾಗಿ ಬಿಹಾರದಲ್ಲಿ ಈವರೆಗೆ 42 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಪಟ್ನಾದ ಹನುಮಾನ್ ನಗರ, ರಾಜೇಂದ್ರ ನಗರ ಮತ್ತು ಕಾನ್ಕರ್ ಬಾಘ್ ಪ್ರದೇಶಗಳ ನಿವಾಸಿಗಳಿಗೆ ವಾಯುಪಡೆ ಹೆಲಿಕಾಪ್ಟರ್ಗಳ ಮೂಲಕ ಪರಿಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಮನೆಗಳ ತಾರಸಿಯಲ್ಲಿ ನಿಂತು ಪ್ರವಾಹದಿಂದ ರಕ್ಷಣೆ ಪಡೆಯುತ್ತಿರುವ ನಿವಾಸಿಗಳು ಸಹಾಯಕ್ಕಾಗಿ ವಾಯುಪಡೆ ಹೆಲಿಕಾಪ್ಟರ್ಗಳತ್ತ ಮೊರೆಯಿಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>