ಭಾನುವಾರ ಕುಶಿನಗರದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, '2017ಕ್ಕೂ ಮುನ್ನ ಈಗಿನಂತೆ ಜನರಿಗೆ ಪಡಿತರ ಸಿಗುತ್ತಿರಲಿಲ್ಲ. ಏಕೆಂದರೆ, ಆಗ ‘ಅಬ್ಬಾ ಜಾನ್ ಎಂದು ಕರೆಯಲಾಗುವ ಈ ಜನರು’ ಪಡಿತರವನ್ನು ಜೀರ್ಣಿಸಿಕೊಳ್ಳುತ್ತಿದ್ದರು. ಕುಶಿನಗರದಲ್ಲಿ ನೀಡಲಾಗುತ್ತಿದ್ದ ಪಡಿತರಗಳು ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಹೋಗುತ್ತಿದ್ದವು. ಇಂದು ಯಾರಾದರೂ ಬಡ ಜನರಿಗೆ ನೀಡಲಾಗುವ ಪಡಿತರವನ್ನು ನುಂಗಲು ಪ್ರಯತ್ನಿಸಿದರೆ, ಅಂಥವರು ಜೈಲಿನಲ್ಲಿ ಇರುತ್ತಾರೆ' ಮುಖ್ಯಮಂತ್ರಿ ಯೋಗಿ ಹೇಳಿದ್ದರು.