‘ಮುಚ್ಚಿದ್ದ ವೈನ್ಶಾಪ್ ಅನ್ನು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ತೆಗೆಸಿದ ಮೂವರು ಯುವಕರು, ಮದ್ಯ ಮಾರಾಟ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಅಂಗಡಿಯ ಕೆಲಸಗಾರ ಒಪ್ಪದಿದ್ದಾಗ, ಅವರ ನಡುವೆ ಜಗಳ ನಡೆದಿದೆ. ಆಗ ಈ ಮೂವರಲ್ಲಿ ಒಬ್ಬನು, ತನ್ನ ಬಳಿ ಇದ್ದ ದೇಶಿ ನಿರ್ಮಿತ ಪಿಸ್ತೂಲ್ನಿಂದ ಕೆಲಸಗಾರನಿಗೆ ಗುಂಡು ಹಾರಿಸಿದನು. ಬಳಿಕ ಎಲ್ಲರೂ ಪರಾರಿಯಾದರು. ಗಾಯಗೊಂಡಿದ್ದ ಹರಿ ಓಂ ಅವರನ್ನು ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಬದುಕಲಿಲ್ಲ’ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರೀಯ ನೋಯ್ಡಾ) ಸುನಿತಿ ತಿಳಿಸಿದರು.