ಥಾಣೆಯ ಕಲ್ಯಾಣ ನಿವಾಸಿಯಾಗಿರುವ ಮನೀಶಾ ಭೋರ್ ಎಂಬವರು ತಮ್ಮ ಪತಿಯೊಂದಿಗೆ ಮನೆಯತ್ತ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.ಬೈಕ್ನಲ್ಲಿ ಹಿಂಬದಿ ಸವಾರಳಾಗಿದ್ದ ಮನೀಶಾ ಕೊಡೆ ಹಿಡಿದುಕೊಂಡು ಕುಳಿತಿದ್ದರು.
ಕಲ್ಯಾಣ್ನ ಶಿವಾಜಿ ಚೌಕ್ ತಲುಪಿದಾಗ ರಸ್ತೆ ಗುಂಡಿಯಿಂದಾಗಿ ಬೈಕ್ ವಾಲಿಕೊಂಡಿದ್ದು, ಮನೀಶಾ ಬೈಕ್ ಸೀಟಿನಿಂದ ಜಾರಿ ಬಿದ್ದಿದ್ದಾರೆ. ಆ ಹೊತ್ತಿಗೆ ವೇಗವಾಗಿ ಬರುತ್ತಿದ್ದ ಬಸ್ ಮನೀಶಾ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.