<p><strong>ನಾಗ್ಪುರ</strong>: ಮಹಿಳೆಯೊಬ್ಬರು ಗಂಡನ ಜೊತೆಗಿನ ಜಗಳದಲ್ಲಿ ಮಗುವನ್ನು ಕೊಂದು, ಮೃತದೇಹವನ್ನು ಎತ್ತಿಕೊಂಡು 4 ಕಿ.ಮೀ ಅಲೆದಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಬಳಿಕ, ಆಕೆ ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.</p><p>ಸೋಮವಾರ ಸಂಜೆ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. </p><p>23 ವರ್ಷದ ಆರೋಪಿ ಮಹಿಳೆ ಟ್ವಿಂಕಲ್ ರಾವುತ್, ಆಕೆಯ ಪತಿ 24 ವರ್ಷದ ರಾಮ ಲಕ್ಷಣ ರಾವುತ್ ನಡುವೆ ಜಗಳದಲ್ಲಿ ಈ ದುರಂತ ನಡೆದಿದೆ. </p><p>ಉದ್ಯೋಗಕ್ಕಾಗಿ ನಾಗ್ಪುರಕ್ಕೆ ಬಂದಿದ್ದ ದಂಪತಿ, ಕಾಗದ ಉತ್ಪನ್ನಗಳ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂಐಡಿಸಿ ಪ್ರದೇಶದ ಹಿಂಗ್ನಾ ರಸ್ತೆಯ ಬಳಿ ಕಂಪನಿ ನೀಡಿದ್ದ ಕೊಠಡಿಯಲ್ಲಿ ಅವರು ವಾಸವಿದ್ದರು.</p><p>ಪರಸ್ಪರ ಅಪನಂಬಿಕೆಯಿಂದಾಗಿ ಅವರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಸೋಮವಾರ ಸಂಜೆ ದಂಪತಿ ಯಾವುದೋ ವಿಷಯಕ್ಕೆ ಜಗಳ ಆಡಿದ್ದಾರೆ. ಈ ಸಂದರ್ಭ 4 ವರ್ಷದ ಹೆಣ್ಣು ಮಗು ಅಳಲು ಆರಂಭಿಸಿದೆ. ಇದರಿಂದ ತೀವ್ರ ಕೋಪಗೊಂಡ ಮಹಿಳೆ, ಮಗುವನ್ನು ಮನೆಯಿಂದ ಹೊರಗೆ ಕರೆದೊಯ್ದು ಮರದ ಕೆಳಗೆ ಕುತ್ತಿಗೆ ಬಿಗಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p> <p>ಮಗುವನ್ನು ಕೊಂದ ತಾಯಿ, ಮೃತದೇಹವನ್ನು ಎತ್ತಿಕೊಂಡು 4 ಕಿ.ಮೀ ಅಲೆದಾಡಿದ್ದಾಳೆ. ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸ್ ಗಸ್ತು ವಾಹನ ಕಂಡು, ಅದನ್ನು ನಿಲ್ಲಿಸಿ ಹತ್ಯೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಎಂಐಡಿಸಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ(ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p><p>ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 24ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ</strong>: ಮಹಿಳೆಯೊಬ್ಬರು ಗಂಡನ ಜೊತೆಗಿನ ಜಗಳದಲ್ಲಿ ಮಗುವನ್ನು ಕೊಂದು, ಮೃತದೇಹವನ್ನು ಎತ್ತಿಕೊಂಡು 4 ಕಿ.ಮೀ ಅಲೆದಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಬಳಿಕ, ಆಕೆ ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.</p><p>ಸೋಮವಾರ ಸಂಜೆ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. </p><p>23 ವರ್ಷದ ಆರೋಪಿ ಮಹಿಳೆ ಟ್ವಿಂಕಲ್ ರಾವುತ್, ಆಕೆಯ ಪತಿ 24 ವರ್ಷದ ರಾಮ ಲಕ್ಷಣ ರಾವುತ್ ನಡುವೆ ಜಗಳದಲ್ಲಿ ಈ ದುರಂತ ನಡೆದಿದೆ. </p><p>ಉದ್ಯೋಗಕ್ಕಾಗಿ ನಾಗ್ಪುರಕ್ಕೆ ಬಂದಿದ್ದ ದಂಪತಿ, ಕಾಗದ ಉತ್ಪನ್ನಗಳ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂಐಡಿಸಿ ಪ್ರದೇಶದ ಹಿಂಗ್ನಾ ರಸ್ತೆಯ ಬಳಿ ಕಂಪನಿ ನೀಡಿದ್ದ ಕೊಠಡಿಯಲ್ಲಿ ಅವರು ವಾಸವಿದ್ದರು.</p><p>ಪರಸ್ಪರ ಅಪನಂಬಿಕೆಯಿಂದಾಗಿ ಅವರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಸೋಮವಾರ ಸಂಜೆ ದಂಪತಿ ಯಾವುದೋ ವಿಷಯಕ್ಕೆ ಜಗಳ ಆಡಿದ್ದಾರೆ. ಈ ಸಂದರ್ಭ 4 ವರ್ಷದ ಹೆಣ್ಣು ಮಗು ಅಳಲು ಆರಂಭಿಸಿದೆ. ಇದರಿಂದ ತೀವ್ರ ಕೋಪಗೊಂಡ ಮಹಿಳೆ, ಮಗುವನ್ನು ಮನೆಯಿಂದ ಹೊರಗೆ ಕರೆದೊಯ್ದು ಮರದ ಕೆಳಗೆ ಕುತ್ತಿಗೆ ಬಿಗಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p> <p>ಮಗುವನ್ನು ಕೊಂದ ತಾಯಿ, ಮೃತದೇಹವನ್ನು ಎತ್ತಿಕೊಂಡು 4 ಕಿ.ಮೀ ಅಲೆದಾಡಿದ್ದಾಳೆ. ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸ್ ಗಸ್ತು ವಾಹನ ಕಂಡು, ಅದನ್ನು ನಿಲ್ಲಿಸಿ ಹತ್ಯೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಎಂಐಡಿಸಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ(ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p><p>ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 24ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>