ಸೋಮವಾರ ಶಬರಿಮಲೆ ಹತ್ತಲುಬಂದಮಹಿಳೆಯರನ್ನು ತಡೆದ ಪ್ರಕರಣದಲ್ಲಿ ಕಂಡರೆ ಗುರುತು ಪತ್ತೆ ಮಾಡಬಹುದಾದ 150 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.ಮಲಪ್ಪುರಂ ಅಂಞಾಡಿಪ್ಪುರಂ ನಿವಾಸಿ ಕನಕದುರ್ಗಾ, ಕೋಯಿಕ್ಕೋಡ್ ಕೊಯಿಲಾಂಡಿ ನಿವಾಸಿ ಬಿಂದು ಎಂಬವರು ಶಬರಿಮಲೆಹತ್ತಲು ಯತ್ನಿಸಿದ್ದರು. ಅಪ್ಪಾಚ್ಚಿಮೇಡುವಿನಿಂದಲೇ ಇವರ ವಿರುದ್ಧ ಪ್ರತಿಭಟನೆ ನಡೆದಿತ್ತು, ಆದರೆ ಪ್ರತಿಭಟನಾಕಾರರನ್ನು ಬಲವಂತವಾಗಿನೂಕಿದ ಪೊಲೀಸರು ಮಹಿಳೆಯರನ್ನು ಮರಕ್ಕೂಟಂವರೆಗೆ ತಲುಪಿಸಿದ್ದರು. ಮರಕ್ಕೂಟಂನಲ್ಲಿ ಪ್ರತಿಭಟನಾಕಾರರು ತಡೆಯೊಡ್ಡಿದಾಗ ಕನಕದುರ್ಗಾ ಅವರು ಅಸ್ವಸ್ಥರಾದರು. ಹಾಗಾಗಿ ಮಲೆ ಹತ್ತದೆ ವಾಪಸ್ ಮರಳಿದರು. ಆನಂತರ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ಬಂದಿದ್ದರು.