<p><strong>ನವದೆಹಲಿ (ಪಿಟಿಐ):</strong> ‘ದೇಶದ ಗಡಿಯುದ್ದಕ್ಕೂ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಪ್ರಯತ್ನಗಳಿಗೂ ಅವಕಾಶ ನೀಡುವುದಿಲ್ಲ ಎಂಬ ಭಾರತೀಯ ಸೇನೆಯ ಸಂದೇಶ ಸ್ಪಷ್ಟವಾಗಿದ್ದು, ಇದರಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಶನಿವಾರ ಹೇಳಿದರು.</p>.<p>ಸೇನಾ ದಿನದ ಕವಾಯತು ಉದ್ದೇಶಿಸಿ ಮಾತನಾಡಿದ ಅವರು, ಚೀನಾದ ಗಡಿಯುದ್ದಕ್ಕೂ ಇರುವ ಸ್ಥಿತಿಯನ್ನು ಉಲ್ಲೇಖಿಸಿದ ಅವರು, ‘ಕಳೆದ ವರ್ಷ ಭಾರತೀಯ ಸೇನೆಗೆ ತೀವ್ರ ಸವಾಲಿನದಾಗಿತ್ತು’ ಎಂದು ಹೇಳಿದರು.</p>.<p>ಸ್ವಾತಂತ್ರ್ಯಾನಂತರ ಭಾರತ ಸೇನೆಯ ಮೊದಲ ಚೀಫ್ ಕಮಾಂಡರ್ ಆಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರು ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಜನವರಿ 15 ಅನ್ನು ‘ಸೇನಾ ದಿನ’ವಾಗಿ ಆಚರಿಸಲಾಗುತ್ತಿದೆ.</p>.<p>ಪೂರ್ವ ಲಡಾಖ್ನಲ್ಲಿನ ಅನಿಶ್ಚಿತತೆಯನ್ನು ಉಲ್ಲೇಖಿಸಿ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಭಾರತ–ಚೀನಾ ನಡುವೆ ಸೇನಾ ಹಂತದಲ್ಲಿ ಇತ್ತೀಚೆಗಷ್ಟೇ 14ನೇ ಸುತ್ತಿನ ಮಾತುಕತೆ ಮುಗಿದಿದೆ. ವಿವಿಧ ಹಂತದಲ್ಲಿ ನಡೆದ ಜಂಟಿ ಯತ್ನದ ಫಲವಾಗಿ ವಿವಿಧೆಡೆ ನಿಯೋಜಿಸಿದ್ದ ಸೇನೆಯ ತುಕಡಿಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.</p>.<p>ಪರಸ್ಪರ ಮತ್ತು ಸಮಾನ ಭದ್ರತೆಗಾಗಿ ಈಗಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆದಿದೆ. ಭದ್ರತೆಗಾಗಿ ಹಿಮಾವೃತ ಶಿಖರದಲ್ಲಿ ನಿಯೋಜಿಸಲಾಗಿರುವ ಸೈನಿಕರ ನೈತಿಕಶಕ್ತಿಯು ಉನ್ನತವಾದುದು ಎಂದು ಶ್ಲಾಘಿಸಿದರು.</p>.<p>‘ತಾಳ್ಮೆಯೇ ನಮ್ಮ ಆತ್ಮವಿಶ್ವಾಸದ ಪ್ರತೀಕ. ಇದನ್ನು ಪರೀಕ್ಷೆ ಮಾಡುವ ತಪ್ಪನ್ನು ಯಾರೂ ಮಾಡಬಾರದು. ಗಡಿ ವಿಷಯದಲ್ಲಿ ಭಾರತ ಸೇನೆಯ ಸಂದೇಶ ಸ್ಪಷ್ಟವಾಗಿದೆ. ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಯತ್ನಗಳಿಗೆ ಸೇನೆ ಅವಕಾಶ ನೀಡುವುದಿಲ್ಲ‘ ಎಂದೂ ಅವರು ಪರೋಕ್ಷವಾಗಿ ನೆರೆ ದೇಶಗಳಿಗೆ ಎಚ್ಚರಿಸಿದರು.</p>.<p>2020ರ ಮೇ 5ರಂದು ಭಾರತ–ಚೀನಾ ಸೇನೆಯ ನಡುವೆ ಪೂರ್ವ ಲಡಾಖ್ನ ಪಾಂಗಾಂಗ್ ಸರೋವರದ ಬಳಿ ನಡೆದಿದ್ದ ಸಂಘರ್ಷದ ಬಳಿಕ ಗಡಿಯುದ್ದಕ್ಕೂ ಅನಿಶ್ಚಿತ ಪರಿಸ್ಥಿತಿ ಇದೆ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಉಭಯ ದೇಶಗಳ ನಡುವೆ 14 ಸುತ್ತಿನ ಮಾತುಕತೆ ನಡೆದಿದೆ.</p>.<p>ಸಂಘರ್ಷದ ಬೆಳವಣಿಗೆಯ ನಂತರ ಉಭಯ ದೇಶಗಳು ಗಡಿ ಭಾಗದಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿದ್ದವು. ಆದರೆ, ಸರಣಿ ಮಾತುಕತೆಯ ಬಳಿಕ ಉಭಯ ದೇಶಗಳು ಪಾಂಗಾಂಗ್ ಮತ್ತು ಗೋಗ್ರಾ ವಲಯದಲ್ಲಿ ನಿಯೋಜಿಸಿದ್ದ ಸೇನೆಯನ್ನು ವಾಪಸು ಕರೆಸಿಕೊಂಡಿದ್ದವು.</p>.<p><strong>194 ಉಗ್ರರ ಹತ್ಯೆ: </strong>‘ಪಾಕಿಸ್ತಾನದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಕಳೆದ ವರ್ಷಕ್ಕಿಂತ ಈ ಬಾರಿ ಪರಿಸ್ಥಿತಿ ಸುಧಾರಿಸಿದೆ. ಆದರೂ ಪಾಕಿಸ್ತಾನವು ಭಯೋತ್ಪಾದಕರನ್ನು ದೇಶದೊಳಕ್ಕೆ ಕಳುಹಿಸುತ್ತಿದೆ. ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ಎನ್ಕೌಂಟರ್ಗಳಲ್ಲಿ 194 ಉಗ್ರರು ಹತರಾಗಿದ್ದಾರೆ. ಗಡಿಯಾಚೆಗಿನ ತರಬೇತಿ ಶಿಬಿರಗಳಲ್ಲಿ 300ರಿಂದ 400ರಷ್ಟು ಉಗ್ರರಿದ್ದು, ದೇಶದೊಳಗೆ ನುಗ್ಗಲು ಕಾಯುತ್ತಿದ್ದಾರೆ’ ಎಂದು ನರವಣೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ‘ದೇಶದ ಗಡಿಯುದ್ದಕ್ಕೂ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಪ್ರಯತ್ನಗಳಿಗೂ ಅವಕಾಶ ನೀಡುವುದಿಲ್ಲ ಎಂಬ ಭಾರತೀಯ ಸೇನೆಯ ಸಂದೇಶ ಸ್ಪಷ್ಟವಾಗಿದ್ದು, ಇದರಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಶನಿವಾರ ಹೇಳಿದರು.</p>.<p>ಸೇನಾ ದಿನದ ಕವಾಯತು ಉದ್ದೇಶಿಸಿ ಮಾತನಾಡಿದ ಅವರು, ಚೀನಾದ ಗಡಿಯುದ್ದಕ್ಕೂ ಇರುವ ಸ್ಥಿತಿಯನ್ನು ಉಲ್ಲೇಖಿಸಿದ ಅವರು, ‘ಕಳೆದ ವರ್ಷ ಭಾರತೀಯ ಸೇನೆಗೆ ತೀವ್ರ ಸವಾಲಿನದಾಗಿತ್ತು’ ಎಂದು ಹೇಳಿದರು.</p>.<p>ಸ್ವಾತಂತ್ರ್ಯಾನಂತರ ಭಾರತ ಸೇನೆಯ ಮೊದಲ ಚೀಫ್ ಕಮಾಂಡರ್ ಆಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರು ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಜನವರಿ 15 ಅನ್ನು ‘ಸೇನಾ ದಿನ’ವಾಗಿ ಆಚರಿಸಲಾಗುತ್ತಿದೆ.</p>.<p>ಪೂರ್ವ ಲಡಾಖ್ನಲ್ಲಿನ ಅನಿಶ್ಚಿತತೆಯನ್ನು ಉಲ್ಲೇಖಿಸಿ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಭಾರತ–ಚೀನಾ ನಡುವೆ ಸೇನಾ ಹಂತದಲ್ಲಿ ಇತ್ತೀಚೆಗಷ್ಟೇ 14ನೇ ಸುತ್ತಿನ ಮಾತುಕತೆ ಮುಗಿದಿದೆ. ವಿವಿಧ ಹಂತದಲ್ಲಿ ನಡೆದ ಜಂಟಿ ಯತ್ನದ ಫಲವಾಗಿ ವಿವಿಧೆಡೆ ನಿಯೋಜಿಸಿದ್ದ ಸೇನೆಯ ತುಕಡಿಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.</p>.<p>ಪರಸ್ಪರ ಮತ್ತು ಸಮಾನ ಭದ್ರತೆಗಾಗಿ ಈಗಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆದಿದೆ. ಭದ್ರತೆಗಾಗಿ ಹಿಮಾವೃತ ಶಿಖರದಲ್ಲಿ ನಿಯೋಜಿಸಲಾಗಿರುವ ಸೈನಿಕರ ನೈತಿಕಶಕ್ತಿಯು ಉನ್ನತವಾದುದು ಎಂದು ಶ್ಲಾಘಿಸಿದರು.</p>.<p>‘ತಾಳ್ಮೆಯೇ ನಮ್ಮ ಆತ್ಮವಿಶ್ವಾಸದ ಪ್ರತೀಕ. ಇದನ್ನು ಪರೀಕ್ಷೆ ಮಾಡುವ ತಪ್ಪನ್ನು ಯಾರೂ ಮಾಡಬಾರದು. ಗಡಿ ವಿಷಯದಲ್ಲಿ ಭಾರತ ಸೇನೆಯ ಸಂದೇಶ ಸ್ಪಷ್ಟವಾಗಿದೆ. ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಯತ್ನಗಳಿಗೆ ಸೇನೆ ಅವಕಾಶ ನೀಡುವುದಿಲ್ಲ‘ ಎಂದೂ ಅವರು ಪರೋಕ್ಷವಾಗಿ ನೆರೆ ದೇಶಗಳಿಗೆ ಎಚ್ಚರಿಸಿದರು.</p>.<p>2020ರ ಮೇ 5ರಂದು ಭಾರತ–ಚೀನಾ ಸೇನೆಯ ನಡುವೆ ಪೂರ್ವ ಲಡಾಖ್ನ ಪಾಂಗಾಂಗ್ ಸರೋವರದ ಬಳಿ ನಡೆದಿದ್ದ ಸಂಘರ್ಷದ ಬಳಿಕ ಗಡಿಯುದ್ದಕ್ಕೂ ಅನಿಶ್ಚಿತ ಪರಿಸ್ಥಿತಿ ಇದೆ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಉಭಯ ದೇಶಗಳ ನಡುವೆ 14 ಸುತ್ತಿನ ಮಾತುಕತೆ ನಡೆದಿದೆ.</p>.<p>ಸಂಘರ್ಷದ ಬೆಳವಣಿಗೆಯ ನಂತರ ಉಭಯ ದೇಶಗಳು ಗಡಿ ಭಾಗದಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿದ್ದವು. ಆದರೆ, ಸರಣಿ ಮಾತುಕತೆಯ ಬಳಿಕ ಉಭಯ ದೇಶಗಳು ಪಾಂಗಾಂಗ್ ಮತ್ತು ಗೋಗ್ರಾ ವಲಯದಲ್ಲಿ ನಿಯೋಜಿಸಿದ್ದ ಸೇನೆಯನ್ನು ವಾಪಸು ಕರೆಸಿಕೊಂಡಿದ್ದವು.</p>.<p><strong>194 ಉಗ್ರರ ಹತ್ಯೆ: </strong>‘ಪಾಕಿಸ್ತಾನದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಕಳೆದ ವರ್ಷಕ್ಕಿಂತ ಈ ಬಾರಿ ಪರಿಸ್ಥಿತಿ ಸುಧಾರಿಸಿದೆ. ಆದರೂ ಪಾಕಿಸ್ತಾನವು ಭಯೋತ್ಪಾದಕರನ್ನು ದೇಶದೊಳಕ್ಕೆ ಕಳುಹಿಸುತ್ತಿದೆ. ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ಎನ್ಕೌಂಟರ್ಗಳಲ್ಲಿ 194 ಉಗ್ರರು ಹತರಾಗಿದ್ದಾರೆ. ಗಡಿಯಾಚೆಗಿನ ತರಬೇತಿ ಶಿಬಿರಗಳಲ್ಲಿ 300ರಿಂದ 400ರಷ್ಟು ಉಗ್ರರಿದ್ದು, ದೇಶದೊಳಗೆ ನುಗ್ಗಲು ಕಾಯುತ್ತಿದ್ದಾರೆ’ ಎಂದು ನರವಣೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>