<p><strong>ಮುಂಬೈ</strong>: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗಟ್ಪುರಿ ಪ್ರದೇಶದಲ್ಲಿ ಗೋರಕ್ಷಕರಿಂದ ಶುಕ್ರವಾರ ಮತ್ತೊಂದು ದಾಳಿ ನಡೆದಿದ್ದು, ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ತಿಂಗಳ 10ರಂದು ಇಂಥದ್ದೇ ಘಟನೆ ಜಿಲ್ಲೆಯಲ್ಲಿ ನಡೆದಿತ್ತು. </p>.<p>ಅಫಾನ್ ಅಬ್ದುಲ್ ಮಾಜಿದ್ ಅನ್ಸಾರಿ ಮತ್ತು ನಾಸಿರ್ ಶೇಕ್ ಎಂಬುವವರು ಅಹಮದ್ನಗರ ಜಿಲ್ಲೆಯಿಂದ ಮುಂಬೈಗೆ ಮಾಂಸ ಸಾಗಣೆ ಮಾಡುತ್ತಿದ್ದರು. ಈ ವೇಳೆ ಇಗಟ್ಪುರಿಯ ಘೋಟಿ– ಸಿನ್ನಾರ್ ರಸ್ತೆಯಲ್ಲಿ ಗುಂಪೊಂದು ಅವರನ್ನು ಅಡ್ಡಗಟ್ಟಿ ಥಳಿಸಿದೆ. ಅನ್ಸಾರಿ ಸ್ಥಳದಲ್ಲೇ ಮೃತಪಟ್ಟರೆ, ಶೇಕ್ ಗಂಭೀರವಾಗಿ ಗಾಯಗೊಂಡರು.</p>.<p>ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.</p>.<p>ಜೂನ್ 10ರ ಘಟನೆಯಲ್ಲಿ ಗೋವು ಸಾಗಾಟ ಮಾಡುತ್ತಿದ್ದ ಮೂವರನ್ನು ಗುಂಪೊಂದು ಥಳಿಸಿತ್ತು. ಮೂವರಲ್ಲಿ ಮೂವರಲ್ಲಿ ಒಬ್ಬ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. </p>.<p>ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ರೀತಿಯ ಘಟನೆಗಳ ಕಡೆಗೆ ಸರ್ಕಾರ ಏಕೆ ಕಣ್ಮುಚ್ಚಿ ಕುಳಿತಿದೆ ಎಂದು ಪ್ರಶ್ನಿಸಿದೆ.</p>.<p>‘ಥಳಿತದ ಎರಡೂ ಪ್ರಕರಣಗಳು ಆಘಾತ ತರಿಸಿವೆ. ಎರಡೂ ಘಟನೆಗಳು ಒಂದೇ ಜಿಲ್ಲೆಯಲ್ಲಿ ನಡೆದಿವೆ. ಶಿಂದೆ ಸರ್ಕಾರದಲ್ಲಿ ರಾಜ್ಯವು ಕಾನೂನಾತ್ಮಕ ಆಡಳಿತ ಹೊಂದಿದೆಯೇ ಅಥವಾ ಗೂಂಡಾ ರಾಜ್ ಹೊಂದಿದೆಯೇ’ ಎಂದು ಕಾಂಗ್ರೆಸ್ ಹಿರಿಯ ನಾಯಕ ನಸೀಮ್ ಖಾನ್ ಅವರು ಪ್ರಶ್ನಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗಟ್ಪುರಿ ಪ್ರದೇಶದಲ್ಲಿ ಗೋರಕ್ಷಕರಿಂದ ಶುಕ್ರವಾರ ಮತ್ತೊಂದು ದಾಳಿ ನಡೆದಿದ್ದು, ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ತಿಂಗಳ 10ರಂದು ಇಂಥದ್ದೇ ಘಟನೆ ಜಿಲ್ಲೆಯಲ್ಲಿ ನಡೆದಿತ್ತು. </p>.<p>ಅಫಾನ್ ಅಬ್ದುಲ್ ಮಾಜಿದ್ ಅನ್ಸಾರಿ ಮತ್ತು ನಾಸಿರ್ ಶೇಕ್ ಎಂಬುವವರು ಅಹಮದ್ನಗರ ಜಿಲ್ಲೆಯಿಂದ ಮುಂಬೈಗೆ ಮಾಂಸ ಸಾಗಣೆ ಮಾಡುತ್ತಿದ್ದರು. ಈ ವೇಳೆ ಇಗಟ್ಪುರಿಯ ಘೋಟಿ– ಸಿನ್ನಾರ್ ರಸ್ತೆಯಲ್ಲಿ ಗುಂಪೊಂದು ಅವರನ್ನು ಅಡ್ಡಗಟ್ಟಿ ಥಳಿಸಿದೆ. ಅನ್ಸಾರಿ ಸ್ಥಳದಲ್ಲೇ ಮೃತಪಟ್ಟರೆ, ಶೇಕ್ ಗಂಭೀರವಾಗಿ ಗಾಯಗೊಂಡರು.</p>.<p>ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.</p>.<p>ಜೂನ್ 10ರ ಘಟನೆಯಲ್ಲಿ ಗೋವು ಸಾಗಾಟ ಮಾಡುತ್ತಿದ್ದ ಮೂವರನ್ನು ಗುಂಪೊಂದು ಥಳಿಸಿತ್ತು. ಮೂವರಲ್ಲಿ ಮೂವರಲ್ಲಿ ಒಬ್ಬ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. </p>.<p>ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ರೀತಿಯ ಘಟನೆಗಳ ಕಡೆಗೆ ಸರ್ಕಾರ ಏಕೆ ಕಣ್ಮುಚ್ಚಿ ಕುಳಿತಿದೆ ಎಂದು ಪ್ರಶ್ನಿಸಿದೆ.</p>.<p>‘ಥಳಿತದ ಎರಡೂ ಪ್ರಕರಣಗಳು ಆಘಾತ ತರಿಸಿವೆ. ಎರಡೂ ಘಟನೆಗಳು ಒಂದೇ ಜಿಲ್ಲೆಯಲ್ಲಿ ನಡೆದಿವೆ. ಶಿಂದೆ ಸರ್ಕಾರದಲ್ಲಿ ರಾಜ್ಯವು ಕಾನೂನಾತ್ಮಕ ಆಡಳಿತ ಹೊಂದಿದೆಯೇ ಅಥವಾ ಗೂಂಡಾ ರಾಜ್ ಹೊಂದಿದೆಯೇ’ ಎಂದು ಕಾಂಗ್ರೆಸ್ ಹಿರಿಯ ನಾಯಕ ನಸೀಮ್ ಖಾನ್ ಅವರು ಪ್ರಶ್ನಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>