<p class="title"><strong>ನವದೆಹಲಿ:</strong> ‘ಅಂತರರಾಷ್ಟ್ರೀಯ ಯೋಗ ದಿನ’ವನ್ನು ಭಾನುವಾರ ದೇಶದ ವಿವಿಧೆಡೆ ಆಚರಿಸಿದ್ದು, ಆರೋಗ್ಯ ರಕ್ಷಣೆಯ ಕ್ರಮವಾಗಿ ಯೋಗವನ್ನು ಪಾಲಿಸಬೇಕು ಎಂದು ಪ್ರತಿಪಾದಿಸಲಾಯಿತು.</p>.<p class="title">ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ‘ಕೊರೊನಾ ಸೋಂಕು ಬಾಧಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡಲು ಯೋಗ ಸಹಕಾರಿ ಆಗಿರಲಿದೆ’ ಎಂದು ಕರೆ ನೀಡಿದರು. ಯೋಗದಿನದ ಸಂದೇಶದಲ್ಲಿ, ‘ಯೋಗ ಎಂಬುದು ಜಗತ್ತಿಗೆ ಭಾರತದ ಅತ್ಯುತ್ತಮ ಕೊಡುಗೆ’ ಎಂದರು.</p>.<p class="title">ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ‘ಕೋವಿಡ್ ಬಿಕ್ಕಟ್ಟು ಎದುರಿಸುವಲ್ಲಿ ಜನರು ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾಗಿರುವುದು ಅಗತ್ಯ’ ಎಂದು ಪ್ರತಿಪಾದಿಸಿದರು. ನಿರೋಧಕ ಶಕ್ತಿ ಚೆನ್ನಾಗಿದ್ದರೆ ಸೋಂಕು ಎದುರಿಸುವುದು ಸಾಧ್ಯ ಎಂದು ಹೇಳಿದರು.</p>.<p>ಸೋಂಕಿನಿಂದಾಗಿ ಮನಸ್ಸಿನ ಮೇಲೆ ಮೂಡಿರುವ ಒತ್ತಡದಿಂದ ಹೊರಬರಲು ಯೋಗ ಪರಿಣಾಮಕಾರಿಯಾಗಿರುವ ಮಾರ್ಗವಾಗಿದೆ. ಕಡಿಮೆ ವೆಚ್ಚದ ಹಾಗೂ ಹೆಚ್ಚಿನ ಲಾಭದ ಕ್ರಮವಾಗಿದೆ. ಆಧುನಿಕ ಕಾಲಘಟ್ಟದ ಒತ್ತಡಗಳಿಂದಲೂ ಹೊರಬರುವುದು ಯೋಗದಿಂದ ಸಾಧ್ಯವಾಗಲಿದೆ ಎಂದರು.</p>.<p>ವಿವಿಧ ರಾಜ್ಯಗಳಲ್ಲಿಯೂ ಯೋಗ ದಿನವನ್ನು ಕೊರೊನಾ ಸೋಂಕಿನ ಕಾರಣದಿಂದ ಸರಳವಾಗಿ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ‘ಅಂತರರಾಷ್ಟ್ರೀಯ ಯೋಗ ದಿನ’ವನ್ನು ಭಾನುವಾರ ದೇಶದ ವಿವಿಧೆಡೆ ಆಚರಿಸಿದ್ದು, ಆರೋಗ್ಯ ರಕ್ಷಣೆಯ ಕ್ರಮವಾಗಿ ಯೋಗವನ್ನು ಪಾಲಿಸಬೇಕು ಎಂದು ಪ್ರತಿಪಾದಿಸಲಾಯಿತು.</p>.<p class="title">ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ‘ಕೊರೊನಾ ಸೋಂಕು ಬಾಧಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡಲು ಯೋಗ ಸಹಕಾರಿ ಆಗಿರಲಿದೆ’ ಎಂದು ಕರೆ ನೀಡಿದರು. ಯೋಗದಿನದ ಸಂದೇಶದಲ್ಲಿ, ‘ಯೋಗ ಎಂಬುದು ಜಗತ್ತಿಗೆ ಭಾರತದ ಅತ್ಯುತ್ತಮ ಕೊಡುಗೆ’ ಎಂದರು.</p>.<p class="title">ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ‘ಕೋವಿಡ್ ಬಿಕ್ಕಟ್ಟು ಎದುರಿಸುವಲ್ಲಿ ಜನರು ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾಗಿರುವುದು ಅಗತ್ಯ’ ಎಂದು ಪ್ರತಿಪಾದಿಸಿದರು. ನಿರೋಧಕ ಶಕ್ತಿ ಚೆನ್ನಾಗಿದ್ದರೆ ಸೋಂಕು ಎದುರಿಸುವುದು ಸಾಧ್ಯ ಎಂದು ಹೇಳಿದರು.</p>.<p>ಸೋಂಕಿನಿಂದಾಗಿ ಮನಸ್ಸಿನ ಮೇಲೆ ಮೂಡಿರುವ ಒತ್ತಡದಿಂದ ಹೊರಬರಲು ಯೋಗ ಪರಿಣಾಮಕಾರಿಯಾಗಿರುವ ಮಾರ್ಗವಾಗಿದೆ. ಕಡಿಮೆ ವೆಚ್ಚದ ಹಾಗೂ ಹೆಚ್ಚಿನ ಲಾಭದ ಕ್ರಮವಾಗಿದೆ. ಆಧುನಿಕ ಕಾಲಘಟ್ಟದ ಒತ್ತಡಗಳಿಂದಲೂ ಹೊರಬರುವುದು ಯೋಗದಿಂದ ಸಾಧ್ಯವಾಗಲಿದೆ ಎಂದರು.</p>.<p>ವಿವಿಧ ರಾಜ್ಯಗಳಲ್ಲಿಯೂ ಯೋಗ ದಿನವನ್ನು ಕೊರೊನಾ ಸೋಂಕಿನ ಕಾರಣದಿಂದ ಸರಳವಾಗಿ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>