<p><strong>ಪಟ್ನಾ:</strong> ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಗೆಲುವು ಸಾಧಿಸಿದ ಬಳಿಕ ಗುಲಾಮಗಿರಿಯ ಕುರುಹುಗಳನ್ನು ನಾಮಾವಶೇಷ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ತಿಳಿಸಿದ್ದಾರೆ.</p><p>ಬಿಹಾರ ಚುನಾವಣೆಯ ಮೊದಲ ಹಂತದ ಮತದಾನದ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ, ಯೋಗಿ ಆದಿತ್ಯನಾಥ ಅವರು ಮೊಹಿಯುದ್ದೀನ್ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದರು.</p><p>‘ಬಿಹಾರದ ಸಹೋದರ ಹಾಗೂ ಸಹೋದರಿಯರೇ, ಎನ್ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮೊಹಿಯುದ್ದೀನ್ನಗರದ ಹೆಸರನ್ನು ಮೋಹನ್ ನಗರ ಎಂದು ಬದಲಾಯಿಸಲಾಗುತ್ತದೆ. ಉತ್ತರ ಪ್ರದೇಶದಲ್ಲೂ ನಾವು ಗುಲಾಮಗಿರಿಯ ಕುರುಹುಗಳನ್ನು ನಾಮಾವಶೇಷ ಮಾಡಿದ್ದೇವೆ’ ಎಂದು ಹೇಳಿದ್ದಾರೆ. </p><p>ಬಿಹಾರದಲ್ಲಿರುವ ಇಂಡೋ – ಇಸ್ಲಾಮಿಕ್ ಪ್ರಭಾವಿತ ಹೆಸರುಗಳ ಬದಲಾವಣೆಯಾಗಬೇಕು. ಬಿಜೆಪಿಯು ಈ ನಿಲುವಿನ ಪರವಾಗಿದೆ ಎಂದು ಆದಿತ್ಯನಾಥ ಹೇಳಿದ್ದಾರೆ. </p><p>ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನ್ಮಸ್ಥಳ ಭಕ್ತಿಯಾರ್ಪುರ್ ಹೆಸರನ್ನು ನಿತೀಶ್ ನಗರ ಎಂದು ಬದಲಾವಣೆ ಮಾಡಬೇಕು ಎಂದು ಬಿಜೆಪಿ ನಾಯಕರು ಮಾಡಿದ್ದ ಮನವಿಯನ್ನು, ಸ್ವತಃ ನಿತೀಶ್ ಕುಮಾರ್ ಅವರೇ ತಿರಸ್ಕರಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಗೆಲುವು ಸಾಧಿಸಿದ ಬಳಿಕ ಗುಲಾಮಗಿರಿಯ ಕುರುಹುಗಳನ್ನು ನಾಮಾವಶೇಷ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ತಿಳಿಸಿದ್ದಾರೆ.</p><p>ಬಿಹಾರ ಚುನಾವಣೆಯ ಮೊದಲ ಹಂತದ ಮತದಾನದ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ, ಯೋಗಿ ಆದಿತ್ಯನಾಥ ಅವರು ಮೊಹಿಯುದ್ದೀನ್ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದರು.</p><p>‘ಬಿಹಾರದ ಸಹೋದರ ಹಾಗೂ ಸಹೋದರಿಯರೇ, ಎನ್ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮೊಹಿಯುದ್ದೀನ್ನಗರದ ಹೆಸರನ್ನು ಮೋಹನ್ ನಗರ ಎಂದು ಬದಲಾಯಿಸಲಾಗುತ್ತದೆ. ಉತ್ತರ ಪ್ರದೇಶದಲ್ಲೂ ನಾವು ಗುಲಾಮಗಿರಿಯ ಕುರುಹುಗಳನ್ನು ನಾಮಾವಶೇಷ ಮಾಡಿದ್ದೇವೆ’ ಎಂದು ಹೇಳಿದ್ದಾರೆ. </p><p>ಬಿಹಾರದಲ್ಲಿರುವ ಇಂಡೋ – ಇಸ್ಲಾಮಿಕ್ ಪ್ರಭಾವಿತ ಹೆಸರುಗಳ ಬದಲಾವಣೆಯಾಗಬೇಕು. ಬಿಜೆಪಿಯು ಈ ನಿಲುವಿನ ಪರವಾಗಿದೆ ಎಂದು ಆದಿತ್ಯನಾಥ ಹೇಳಿದ್ದಾರೆ. </p><p>ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನ್ಮಸ್ಥಳ ಭಕ್ತಿಯಾರ್ಪುರ್ ಹೆಸರನ್ನು ನಿತೀಶ್ ನಗರ ಎಂದು ಬದಲಾವಣೆ ಮಾಡಬೇಕು ಎಂದು ಬಿಜೆಪಿ ನಾಯಕರು ಮಾಡಿದ್ದ ಮನವಿಯನ್ನು, ಸ್ವತಃ ನಿತೀಶ್ ಕುಮಾರ್ ಅವರೇ ತಿರಸ್ಕರಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>