<p><strong>ಪುಟ್ಟಪರ್ತಿ:</strong> ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಮೇಲಿನ ಎಲ್ಲ ಆರೋಪಗಳನ್ನೂ ಶ್ರೀ ಸತ್ಯಸಾಯಿ ಕೇಂದ್ರ ಟ್ರಸ್ಟ್ ಮಂಗಳವಾರ ಸಾರಾಸಗಟಾಗಿ ತಳ್ಳಿಹಾಕಿದೆ.<br /> <br /> ಟ್ರಸ್ಟ್ನ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿಯೇ ನಡೆದುಕೊಂಡು ಬರುತ್ತಿವೆ. ಆದ ಕಾರಣ ಟ್ರಸ್ಟ್ನ ಮೇಲೆ ನಿಗಾ ಇಡಲು ಆಂಧ್ರ ಸರ್ಕಾರವು ಸಮಿತಿಯೊಂದನ್ನು ರಚಿಸುವ ಅಗತ್ಯವೇ ಇಲ್ಲ. ಟ್ರಸ್ಟ್ನ ಆಸ್ತಿ ಸಾಯಿಬಾಬಾ ಅವರಿಗೆ ಸೇರಿರದ ಕಾರಣ ಅವರು ಯಾವುದೇ `ಉಯಿಲು~ ಬರೆದಿಲ್ಲ ಎಂದು ಟ್ರಸ್ಟಿ ಶ್ರೀನಿವಾಸನ್ ಹಾಗೂ ಕಾನೂನು ಸಲಹೆಗಾರ ಎಸ್.ನಾಗಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಈ ವಿಷಯದಲ್ಲಿ ಸಾರ್ವಜನಿಕರ ಆತಂಕ ದೂರ ಮಾಡುವ ಸಲುವಾಗಿ ಟ್ರಸ್ಟ್ನ ಕಾರ್ಯಚಟುವಟಿಕೆಗಳು ಹಾಗೂ ಆಸ್ತಿ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ವಿವರ ವರದಿಯೊಂದನ್ನು ಪ್ರಕಟಿಸಲಾಗುತ್ತದೆ. ನಾವು ಯಾವುದಕ್ಕೂ ಹೆದರುತ್ತಿಲ್ಲ. ಸರ್ಕಾರದ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿಯೇ ಉತ್ತರಿಸುತ್ತೇವೆ~ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದರು.<br /> <br /> ಪುಟ್ಟಪರ್ತಿ ಆಶ್ರಮಕ್ಕೆ ಸೇರಿದ್ದು ಎನ್ನಲಾದ 35 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ಇತ್ತೀಚೆಗೆ ವಾಹನವೊಂದರಿಂದ ವಶಪಡಿಸಿಕೊಂಡ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, `ಸತ್ಯಸಾಯಿ ಬಾಬಾ ಸ್ಮಾರಕ `ಮಹಾಸಮಾಧಿ~ ನಿರ್ಮಾಣಕ್ಕೆ ಟ್ರಸ್ಟ್ ಸಮಾಲೋಚಕರೊಬ್ಬರನ್ನು ನೇಮಿಸಿತ್ತು.<br /> <br /> ಈ ಯೋಜನೆಗಾಗಿ ಭಕ್ತರೊಬ್ಬರು ನೀಡಿದ್ದ ಹಣವನ್ನು ಬೆಂಗಳೂರು ಮೂಲದ ಶಂಕರನಾರಾಯಣ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ಗೆ ಇದೇ ತಿಂಗಳ 18ರಂದು ಹಸ್ತಾಂತರಿಸಲಾಗಿದೆ.<br /> <br /> ಅದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಮಾರ್ಗದಲ್ಲಿ ಕನ್ಸಲ್ಟೆನ್ಸಿಗೆ ಸೇರಿದ ವಾಹನವನ್ನು ತಡೆದು ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಟ್ರಸ್ಟ್ಗೂ ಸಂಬಂಧವಿಲ್ಲ. ಯಾವುದೇ ಟ್ರಸ್ಟಿಯ ಬಳಿ ಈ ಹಣ ಪತ್ತೆಯಾಗಿಲ್ಲ. ಇಷ್ಟಕ್ಕೂ ಹಣ ಪತ್ತೆಯಾದ ವಾಹನವು ಟ್ರಸ್ಟ್ಗೆ ಸೇರಿದ್ದಲ್ಲ~ ಎಂದರು.<br /> <br /> `ಟ್ರಸ್ಟ್ಗೆ ಭಕ್ತಾದಿಗಳು ನೀಡಿದ ಹಣವನ್ನು ಪಾರದರ್ಶಕ ರೀತಿಯಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಒತ್ತಡ ಬರದಿದ್ದರೂ ಈಗಾಗಲೇ ಟ್ರಸ್ಟ್ 9.75 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದೆ~ ಎಂದು ವಿವರಿಸಿದರು.<br /> <br /> `ಟ್ರಸ್ಟ್ ಸದಸ್ಯರ ವಿಶ್ವಾಸಾರ್ಹತೆ ಬಗ್ಗೆ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲ~ ಎಂದು ಸಮರ್ಥಿಸಿಕೊಂಡ ಕಾನೂನು ಸಲಹೆಗಾರ ನಾಗಾನಂದ, ಆಸ್ಪತ್ರೆ ನಿರ್ದೇಶಕ ಸಫಾಯ ರಾಜೀನಾಮೆ ಕುರಿತಂತೆ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದರು.<br /> <br /> `ಬಾಬಾ ಬದುಕಿದ್ದಾಗಲೇ, 80 ವರ್ಷದ ಸಫಾಯ ರಾಜೀನಾಮೆಗೆ ಮುಂದಾಗಿದ್ದರು. ಆದರೆ ಬಾಬಾ ಮನವಿ ಮೇರೆಗೆ ಅವರು ಮುಂದುವರಿಯಬೇಕಾಯಿತು~ ಎಂದು ವಿವರಿಸಿದರು.<br /> <br /> `ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವು ಐಎಂಎ ಹಾಗೂ ಯುಜಿಸಿ ನಿಯಮಾವಳಿಗೆ ಬದ್ಧವಾಗಿವೆ. ನಾವು ಉಪನ್ಯಾಸಕರಿಗೆ ಯುಜಿಸಿ ಪ್ರಕಾರವೇ ವೇತನ ನೀಡುತ್ತಿದ್ದೇವೆ. ಅಲ್ಲದೇ ಇಲ್ಲಿನ ಬಹುತೇಕ ವೈದ್ಯರು ಹಾಗೂ ಶಿಕ್ಷಕರು ಸ್ವ ಇಚ್ಛೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ~ ಎಂದು ಹೇಳಿದರು.<br /> <br /> ಆಶ್ರಮದ ಮೂಲಗಳ ಪ್ರಕಾರ ಸುಮಾರು 46,000 ಸ್ವಯಂಸೇವಕರು ಇಲ್ಲಿ ವಿವಿಧ ವಿಭಾಗಗಳಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟ್ ನಿರಂತರವಾಗಿ ಆರ್ಬಿಐ, ಕೇಂದ್ರ ಹಣಕಾಸು ಸಚಿವಾಲಯ, ಆಂಧ್ರ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸುತ್ತಾ ಬಂದಿದೆ ಎಂದೂ ನಾಗಾನಂದ ವಿವರಿಸಿದರು.</p>.<p><strong>ರಾಜ್ಯಪಾಲರಿಗೆ ಮಾಹಿತಿ: </strong>ಈ ನಡುವೆ, ಆಂಧ್ರ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರು, ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಸಾಯಿ ಟ್ರಸ್ಟ್ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯಪಾಲ ಇ.ಎಸ್. ಎಲ್. ನರಸಿಂಹಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.<br /> <br /> ಆಡಳಿತ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರದ ಬಗ್ಗೆ ವಿವರ ಮಾಹಿತಿ ಕೇಳಿ ಟ್ರಸ್ಟ್ನ ಕಾರ್ಯದರ್ಶಿಗೆ ಸರ್ಕಾರ ಬರೆದ ಪತ್ರದ ಬಗ್ಗೆ ರೆಡ್ಡಿ, ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಟ್ಟಪರ್ತಿ:</strong> ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಮೇಲಿನ ಎಲ್ಲ ಆರೋಪಗಳನ್ನೂ ಶ್ರೀ ಸತ್ಯಸಾಯಿ ಕೇಂದ್ರ ಟ್ರಸ್ಟ್ ಮಂಗಳವಾರ ಸಾರಾಸಗಟಾಗಿ ತಳ್ಳಿಹಾಕಿದೆ.<br /> <br /> ಟ್ರಸ್ಟ್ನ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿಯೇ ನಡೆದುಕೊಂಡು ಬರುತ್ತಿವೆ. ಆದ ಕಾರಣ ಟ್ರಸ್ಟ್ನ ಮೇಲೆ ನಿಗಾ ಇಡಲು ಆಂಧ್ರ ಸರ್ಕಾರವು ಸಮಿತಿಯೊಂದನ್ನು ರಚಿಸುವ ಅಗತ್ಯವೇ ಇಲ್ಲ. ಟ್ರಸ್ಟ್ನ ಆಸ್ತಿ ಸಾಯಿಬಾಬಾ ಅವರಿಗೆ ಸೇರಿರದ ಕಾರಣ ಅವರು ಯಾವುದೇ `ಉಯಿಲು~ ಬರೆದಿಲ್ಲ ಎಂದು ಟ್ರಸ್ಟಿ ಶ್ರೀನಿವಾಸನ್ ಹಾಗೂ ಕಾನೂನು ಸಲಹೆಗಾರ ಎಸ್.ನಾಗಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಈ ವಿಷಯದಲ್ಲಿ ಸಾರ್ವಜನಿಕರ ಆತಂಕ ದೂರ ಮಾಡುವ ಸಲುವಾಗಿ ಟ್ರಸ್ಟ್ನ ಕಾರ್ಯಚಟುವಟಿಕೆಗಳು ಹಾಗೂ ಆಸ್ತಿ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ವಿವರ ವರದಿಯೊಂದನ್ನು ಪ್ರಕಟಿಸಲಾಗುತ್ತದೆ. ನಾವು ಯಾವುದಕ್ಕೂ ಹೆದರುತ್ತಿಲ್ಲ. ಸರ್ಕಾರದ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿಯೇ ಉತ್ತರಿಸುತ್ತೇವೆ~ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದರು.<br /> <br /> ಪುಟ್ಟಪರ್ತಿ ಆಶ್ರಮಕ್ಕೆ ಸೇರಿದ್ದು ಎನ್ನಲಾದ 35 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ಇತ್ತೀಚೆಗೆ ವಾಹನವೊಂದರಿಂದ ವಶಪಡಿಸಿಕೊಂಡ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, `ಸತ್ಯಸಾಯಿ ಬಾಬಾ ಸ್ಮಾರಕ `ಮಹಾಸಮಾಧಿ~ ನಿರ್ಮಾಣಕ್ಕೆ ಟ್ರಸ್ಟ್ ಸಮಾಲೋಚಕರೊಬ್ಬರನ್ನು ನೇಮಿಸಿತ್ತು.<br /> <br /> ಈ ಯೋಜನೆಗಾಗಿ ಭಕ್ತರೊಬ್ಬರು ನೀಡಿದ್ದ ಹಣವನ್ನು ಬೆಂಗಳೂರು ಮೂಲದ ಶಂಕರನಾರಾಯಣ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ಗೆ ಇದೇ ತಿಂಗಳ 18ರಂದು ಹಸ್ತಾಂತರಿಸಲಾಗಿದೆ.<br /> <br /> ಅದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಮಾರ್ಗದಲ್ಲಿ ಕನ್ಸಲ್ಟೆನ್ಸಿಗೆ ಸೇರಿದ ವಾಹನವನ್ನು ತಡೆದು ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಟ್ರಸ್ಟ್ಗೂ ಸಂಬಂಧವಿಲ್ಲ. ಯಾವುದೇ ಟ್ರಸ್ಟಿಯ ಬಳಿ ಈ ಹಣ ಪತ್ತೆಯಾಗಿಲ್ಲ. ಇಷ್ಟಕ್ಕೂ ಹಣ ಪತ್ತೆಯಾದ ವಾಹನವು ಟ್ರಸ್ಟ್ಗೆ ಸೇರಿದ್ದಲ್ಲ~ ಎಂದರು.<br /> <br /> `ಟ್ರಸ್ಟ್ಗೆ ಭಕ್ತಾದಿಗಳು ನೀಡಿದ ಹಣವನ್ನು ಪಾರದರ್ಶಕ ರೀತಿಯಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಒತ್ತಡ ಬರದಿದ್ದರೂ ಈಗಾಗಲೇ ಟ್ರಸ್ಟ್ 9.75 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದೆ~ ಎಂದು ವಿವರಿಸಿದರು.<br /> <br /> `ಟ್ರಸ್ಟ್ ಸದಸ್ಯರ ವಿಶ್ವಾಸಾರ್ಹತೆ ಬಗ್ಗೆ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲ~ ಎಂದು ಸಮರ್ಥಿಸಿಕೊಂಡ ಕಾನೂನು ಸಲಹೆಗಾರ ನಾಗಾನಂದ, ಆಸ್ಪತ್ರೆ ನಿರ್ದೇಶಕ ಸಫಾಯ ರಾಜೀನಾಮೆ ಕುರಿತಂತೆ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದರು.<br /> <br /> `ಬಾಬಾ ಬದುಕಿದ್ದಾಗಲೇ, 80 ವರ್ಷದ ಸಫಾಯ ರಾಜೀನಾಮೆಗೆ ಮುಂದಾಗಿದ್ದರು. ಆದರೆ ಬಾಬಾ ಮನವಿ ಮೇರೆಗೆ ಅವರು ಮುಂದುವರಿಯಬೇಕಾಯಿತು~ ಎಂದು ವಿವರಿಸಿದರು.<br /> <br /> `ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವು ಐಎಂಎ ಹಾಗೂ ಯುಜಿಸಿ ನಿಯಮಾವಳಿಗೆ ಬದ್ಧವಾಗಿವೆ. ನಾವು ಉಪನ್ಯಾಸಕರಿಗೆ ಯುಜಿಸಿ ಪ್ರಕಾರವೇ ವೇತನ ನೀಡುತ್ತಿದ್ದೇವೆ. ಅಲ್ಲದೇ ಇಲ್ಲಿನ ಬಹುತೇಕ ವೈದ್ಯರು ಹಾಗೂ ಶಿಕ್ಷಕರು ಸ್ವ ಇಚ್ಛೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ~ ಎಂದು ಹೇಳಿದರು.<br /> <br /> ಆಶ್ರಮದ ಮೂಲಗಳ ಪ್ರಕಾರ ಸುಮಾರು 46,000 ಸ್ವಯಂಸೇವಕರು ಇಲ್ಲಿ ವಿವಿಧ ವಿಭಾಗಗಳಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟ್ ನಿರಂತರವಾಗಿ ಆರ್ಬಿಐ, ಕೇಂದ್ರ ಹಣಕಾಸು ಸಚಿವಾಲಯ, ಆಂಧ್ರ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸುತ್ತಾ ಬಂದಿದೆ ಎಂದೂ ನಾಗಾನಂದ ವಿವರಿಸಿದರು.</p>.<p><strong>ರಾಜ್ಯಪಾಲರಿಗೆ ಮಾಹಿತಿ: </strong>ಈ ನಡುವೆ, ಆಂಧ್ರ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರು, ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಸಾಯಿ ಟ್ರಸ್ಟ್ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯಪಾಲ ಇ.ಎಸ್. ಎಲ್. ನರಸಿಂಹಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.<br /> <br /> ಆಡಳಿತ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರದ ಬಗ್ಗೆ ವಿವರ ಮಾಹಿತಿ ಕೇಳಿ ಟ್ರಸ್ಟ್ನ ಕಾರ್ಯದರ್ಶಿಗೆ ಸರ್ಕಾರ ಬರೆದ ಪತ್ರದ ಬಗ್ಗೆ ರೆಡ್ಡಿ, ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>