<p><strong>ಧಮರಾ (ಒಡಿಶಾ) (ಪಿಟಿಐ):</strong> ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 5,000 ಕಿ.ಮೀ ಕ್ರಮಿಸಬಲ್ಲ ಸ್ವದೇಶಿ ನಿರ್ಮಿತ `ಅಗ್ನಿ -5~ ಕ್ಷಿಪಣಿಯ ಪ್ರಥಮ ಪ್ರಯೋಗಾರ್ಥ ಪರೀಕ್ಷೆಯು ಒಡಿಶಾದ ಕರಾವಳಿ ತೀರದಲ್ಲಿ ಗುರುವಾರ ಯಶಸ್ವಿಯಾಗಿದೆ.<br /> <br /> ಮೂರು ಹಂತಗಳನ್ನು ಹೊಂದಿರುವ ಕ್ಷಿಪಣಿಯನ್ನು ವಿಲ್ಹರ್ ದೀಪದ ಸಮೀಪದಲ್ಲಿರುವ ಸಮಗ್ರ ಉಡಾವಣಾ ವಲಯದಲ್ಲಿ (ಐಟಿಆರ್) ಸಂಚಾರಿ ಉಡಾವಣಾ ವಾಹನದ (ಮೊಬೈಲ್ ಲಾಂಚರ್ ವೆಹಿಕಲ್) ಮೂಲಕ ಬೆಳಿಗ್ಗೆ 8 ಗಂಟೆ ಸುಮಾರಿಗೆ ಉಡಾಯಿಸಲಾಯಿತು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.<br /> <br /> `ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಯಶಸ್ವಿಯಾಗಿದ್ದು, ಕ್ಷಿಪಣಿಯು ಸಮುದ್ರದಲ್ಲಿದ್ದ ನಿಗದಿತ ಗುರಿಯನ್ನು ತಲುಪಿದೆ~ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ (ಡಿಆರ್ಡಿಓ) ಮುಖ್ಯಸ್ಥ ವಿ.ಕೆ.ಸಾರಸ್ವತ್ ಹೇಳಿದರು.<br /> <br /> <strong>ಪ್ರಧಾನಿ ಸಿಂಗ್, ಆಂಟನಿ ಶ್ಲಾಘನೆ:</strong> `ಅಗ್ನಿ -5~ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಭಾರತದ ಕ್ಷಿಪಣಿ ಯೋಜನೆಯಲ್ಲಿ ಒಂದು ಹೊಸ ಮೈಲುಗಲ್ಲು ಎಂದು ಬಣ್ಣಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಯಶಸ್ವಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಮರಾ (ಒಡಿಶಾ) (ಪಿಟಿಐ):</strong> ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 5,000 ಕಿ.ಮೀ ಕ್ರಮಿಸಬಲ್ಲ ಸ್ವದೇಶಿ ನಿರ್ಮಿತ `ಅಗ್ನಿ -5~ ಕ್ಷಿಪಣಿಯ ಪ್ರಥಮ ಪ್ರಯೋಗಾರ್ಥ ಪರೀಕ್ಷೆಯು ಒಡಿಶಾದ ಕರಾವಳಿ ತೀರದಲ್ಲಿ ಗುರುವಾರ ಯಶಸ್ವಿಯಾಗಿದೆ.<br /> <br /> ಮೂರು ಹಂತಗಳನ್ನು ಹೊಂದಿರುವ ಕ್ಷಿಪಣಿಯನ್ನು ವಿಲ್ಹರ್ ದೀಪದ ಸಮೀಪದಲ್ಲಿರುವ ಸಮಗ್ರ ಉಡಾವಣಾ ವಲಯದಲ್ಲಿ (ಐಟಿಆರ್) ಸಂಚಾರಿ ಉಡಾವಣಾ ವಾಹನದ (ಮೊಬೈಲ್ ಲಾಂಚರ್ ವೆಹಿಕಲ್) ಮೂಲಕ ಬೆಳಿಗ್ಗೆ 8 ಗಂಟೆ ಸುಮಾರಿಗೆ ಉಡಾಯಿಸಲಾಯಿತು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.<br /> <br /> `ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಯಶಸ್ವಿಯಾಗಿದ್ದು, ಕ್ಷಿಪಣಿಯು ಸಮುದ್ರದಲ್ಲಿದ್ದ ನಿಗದಿತ ಗುರಿಯನ್ನು ತಲುಪಿದೆ~ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ (ಡಿಆರ್ಡಿಓ) ಮುಖ್ಯಸ್ಥ ವಿ.ಕೆ.ಸಾರಸ್ವತ್ ಹೇಳಿದರು.<br /> <br /> <strong>ಪ್ರಧಾನಿ ಸಿಂಗ್, ಆಂಟನಿ ಶ್ಲಾಘನೆ:</strong> `ಅಗ್ನಿ -5~ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಭಾರತದ ಕ್ಷಿಪಣಿ ಯೋಜನೆಯಲ್ಲಿ ಒಂದು ಹೊಸ ಮೈಲುಗಲ್ಲು ಎಂದು ಬಣ್ಣಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಯಶಸ್ವಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>