<p><strong>ಲಖನೌ/ನವದೆಹಲಿ: </strong>ಉತ್ತರ ಪ್ರದೇಶದ ಮುಜಫ್ಫರ್ನಗರದ ಖತೌಲಿಯಲ್ಲಿ ಶನಿವಾರ ಸಂಭವಿಸಿದ ರೈಲು ದುರಂತಕ್ಕೆ ಹಳಿಗಳ ನಿರ್ವಹಣೆ ಹೊಣೆ ಹೊತ್ತಿದ್ದ ರೈಲ್ವೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.</p>.<p>ರೈಲು ಹಳಿ ತಪ್ಪಿದ ಸ್ಥಳದಿಂದ ಕೆಲವು ಮೀಟರ್ಗಳಷ್ಟು ದೂರದಲ್ಲಿ ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ಮಾರ್ಗದಲ್ಲಿ ರೈಲುಗಳು ಕಡಿಮೆ ವೇಗದಲ್ಲಿ ಚಲಿಸಬೇಕು ಎಂಬ ಸೂಚನೆಯೂ ಇತ್ತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.</p>.<p>ಹಳಿ ತಪ್ಪಿದ ಸಂದರ್ಭದಲ್ಲಿ ರೈಲು ಪ್ರತಿ ಗಂಟೆಗೆ 100 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿತ್ತು.</p>.<p>‘ಹಳಿಗಳನ್ನು ದುರಸ್ತಿಗೊಳಿಸುತ್ತಿದ್ದುದನ್ನು ನೋಡಿದ ತಕ್ಷಣ ಚಾಲಕ ತುರ್ತು ಬ್ರೇಕ್ ಹಾಕಿರುವ ಸಾಧ್ಯತೆ ಇದೆ. ಇದರಿಂದಾಗಿ ರೈಲು ಹಳಿತಪ್ಪಿರಬಹುದು’ ಎಂದು ಮುಜಫ್ಫರ್ನಗರ ರೈಲ್ವೆ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ದುರಸ್ತಿ ಮಾಡುತ್ತಿರುವ ಬಗ್ಗೆ ಹಳಿ ನಿರ್ವಹಣಾ ಜವಾಬ್ದಾರಿ ಹೊತ್ತಿರುವವರು ಯಾವುದೇ ಮಾಹಿತಿ ನೀಡಿರಲಿಲ್ಲ. ಹಳಿಗಳ ರಿಪೇರಿ ಕೆಲಸ ನಡೆಯುತ್ತಿತ್ತು ಎಂದು ಸ್ಥಳೀಯರು ಕೂಡ ಹೇಳಿದ್ದಾರೆ.</p>.<p>ರೈಲ್ವೆ ಕ್ರಾಸಿಂಗ್ ಕಾವಲುಗಾರ ಮತ್ತು ರೈಲ್ವೆಯ ಮತ್ತೊಬ್ಬ ಸಿಬ್ಬಂದಿ ಹಳಿ ನಿರ್ವಹಣಾ ಕೆಲಸದ ಬಗ್ಗೆ ಮಾತನಾಡುತ್ತಿದ್ದ ಧ್ವನಿಮುದ್ರಿಕೆಯ ತುಣುಕೊಂದು ಸ್ಥಳೀಯ ಮಾಧ್ಯಮಗಳಲ್ಲಿ ಭಾನುವಾರ ಪ್ರಸಾರವಾಗಿದೆ.</p>.<p>ಹಳಿಗಳು ಹಾನಿಗೀಡಾಗಿವೆ. ಆದರೆ, ಅವನ್ನು ಸರಿಯಾಗಿ ದುರಸ್ತಿ ಮಾಡಲಾಗಿಲ್ಲ. ದುರಸ್ತಿ ಕೆಲಸದ ಬಗ್ಗೆ ರೈಲು ಚಾಲಕರಿಗೆ ಮಾಹಿತಿ ನೀಡುವ ಫಲಕವನ್ನೂ ಅಳವಡಿಸಲಾಗಿಲ್ಲ ಎಂದು ಕಾವಲು ಸಿಬ್ಬಂದಿ ಹೇಳುತ್ತಿರುವ ಮಾತುಗಳು ಈ ಧ್ವನಿಮುದ್ರಿಕೆಯಲ್ಲಿವೆ.</p>.<p>ಅಪಘಾತ ಸಂಭವಿಸುತ್ತಲೇ, ಕರ್ತವ್ಯದಲ್ಲಿದ್ದ ಗ್ಯಾಂಗ್–ಮ್ಯಾನ್ ಮತ್ತು ಹಳಿ ನಿರ್ವಹಿಸುವ ಇತರ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮುಜಫ್ಫರ್ನಗರ ರೈಲ್ವೆ ನಿಲ್ದಾಣದ ಮೂಲಗಳು ತಿಳಿಸಿವೆ.</p>.<p>₹25 ಲಕ್ಷ ವಿತರಣೆ: ದುರ್ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಮತ್ತು ಗಾಯಾಳುಗಳಿಗೆ ಇದುವರೆಗೆ ₹ 25 ಲಕ್ಷ ಪರಿಹಾರಧನ ವಿತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಶೇ 40ರಷ್ಟು ಪ್ರಯಾಣಿಕರು ಇ–ಟಿಕೆಟ್ ಯೋಜನೆ ಅಡಿಯಲ್ಲಿ ವಿಮೆ ಹೊಂದಿದ್ದಾರೆ. ಇದಲ್ಲದೇ ರೈಲ್ವೆಯು ತನ್ನದೇ ಆದ ಪರಿಹಾರ ನೀಡುತ್ತದೆ’ ಎಂದು ರೈಲ್ವೆ ಸಂಚಾರ ವಿಭಾಗದ ಸದಸ್ಯ ಮೊಹಮ್ಮದ್ ಜಮ್ಶೆದ್ ಹೇಳಿದ್ದಾರೆ.</p>.<p>ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹3.5 ಲಕ್ಷ, ಗಂಭೀರ ಗಾಯಗೊಂಡವರಿಗೆ ₹ 50 ಸಾವಿರ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ₹25 ಸಾವಿರ ಪರಿಹಾರ ಧನವನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಘೋಷಿಸಿದ್ದರು.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ/ನವದೆಹಲಿ: </strong>ಉತ್ತರ ಪ್ರದೇಶದ ಮುಜಫ್ಫರ್ನಗರದ ಖತೌಲಿಯಲ್ಲಿ ಶನಿವಾರ ಸಂಭವಿಸಿದ ರೈಲು ದುರಂತಕ್ಕೆ ಹಳಿಗಳ ನಿರ್ವಹಣೆ ಹೊಣೆ ಹೊತ್ತಿದ್ದ ರೈಲ್ವೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.</p>.<p>ರೈಲು ಹಳಿ ತಪ್ಪಿದ ಸ್ಥಳದಿಂದ ಕೆಲವು ಮೀಟರ್ಗಳಷ್ಟು ದೂರದಲ್ಲಿ ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ಮಾರ್ಗದಲ್ಲಿ ರೈಲುಗಳು ಕಡಿಮೆ ವೇಗದಲ್ಲಿ ಚಲಿಸಬೇಕು ಎಂಬ ಸೂಚನೆಯೂ ಇತ್ತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.</p>.<p>ಹಳಿ ತಪ್ಪಿದ ಸಂದರ್ಭದಲ್ಲಿ ರೈಲು ಪ್ರತಿ ಗಂಟೆಗೆ 100 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿತ್ತು.</p>.<p>‘ಹಳಿಗಳನ್ನು ದುರಸ್ತಿಗೊಳಿಸುತ್ತಿದ್ದುದನ್ನು ನೋಡಿದ ತಕ್ಷಣ ಚಾಲಕ ತುರ್ತು ಬ್ರೇಕ್ ಹಾಕಿರುವ ಸಾಧ್ಯತೆ ಇದೆ. ಇದರಿಂದಾಗಿ ರೈಲು ಹಳಿತಪ್ಪಿರಬಹುದು’ ಎಂದು ಮುಜಫ್ಫರ್ನಗರ ರೈಲ್ವೆ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ದುರಸ್ತಿ ಮಾಡುತ್ತಿರುವ ಬಗ್ಗೆ ಹಳಿ ನಿರ್ವಹಣಾ ಜವಾಬ್ದಾರಿ ಹೊತ್ತಿರುವವರು ಯಾವುದೇ ಮಾಹಿತಿ ನೀಡಿರಲಿಲ್ಲ. ಹಳಿಗಳ ರಿಪೇರಿ ಕೆಲಸ ನಡೆಯುತ್ತಿತ್ತು ಎಂದು ಸ್ಥಳೀಯರು ಕೂಡ ಹೇಳಿದ್ದಾರೆ.</p>.<p>ರೈಲ್ವೆ ಕ್ರಾಸಿಂಗ್ ಕಾವಲುಗಾರ ಮತ್ತು ರೈಲ್ವೆಯ ಮತ್ತೊಬ್ಬ ಸಿಬ್ಬಂದಿ ಹಳಿ ನಿರ್ವಹಣಾ ಕೆಲಸದ ಬಗ್ಗೆ ಮಾತನಾಡುತ್ತಿದ್ದ ಧ್ವನಿಮುದ್ರಿಕೆಯ ತುಣುಕೊಂದು ಸ್ಥಳೀಯ ಮಾಧ್ಯಮಗಳಲ್ಲಿ ಭಾನುವಾರ ಪ್ರಸಾರವಾಗಿದೆ.</p>.<p>ಹಳಿಗಳು ಹಾನಿಗೀಡಾಗಿವೆ. ಆದರೆ, ಅವನ್ನು ಸರಿಯಾಗಿ ದುರಸ್ತಿ ಮಾಡಲಾಗಿಲ್ಲ. ದುರಸ್ತಿ ಕೆಲಸದ ಬಗ್ಗೆ ರೈಲು ಚಾಲಕರಿಗೆ ಮಾಹಿತಿ ನೀಡುವ ಫಲಕವನ್ನೂ ಅಳವಡಿಸಲಾಗಿಲ್ಲ ಎಂದು ಕಾವಲು ಸಿಬ್ಬಂದಿ ಹೇಳುತ್ತಿರುವ ಮಾತುಗಳು ಈ ಧ್ವನಿಮುದ್ರಿಕೆಯಲ್ಲಿವೆ.</p>.<p>ಅಪಘಾತ ಸಂಭವಿಸುತ್ತಲೇ, ಕರ್ತವ್ಯದಲ್ಲಿದ್ದ ಗ್ಯಾಂಗ್–ಮ್ಯಾನ್ ಮತ್ತು ಹಳಿ ನಿರ್ವಹಿಸುವ ಇತರ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮುಜಫ್ಫರ್ನಗರ ರೈಲ್ವೆ ನಿಲ್ದಾಣದ ಮೂಲಗಳು ತಿಳಿಸಿವೆ.</p>.<p>₹25 ಲಕ್ಷ ವಿತರಣೆ: ದುರ್ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಮತ್ತು ಗಾಯಾಳುಗಳಿಗೆ ಇದುವರೆಗೆ ₹ 25 ಲಕ್ಷ ಪರಿಹಾರಧನ ವಿತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಶೇ 40ರಷ್ಟು ಪ್ರಯಾಣಿಕರು ಇ–ಟಿಕೆಟ್ ಯೋಜನೆ ಅಡಿಯಲ್ಲಿ ವಿಮೆ ಹೊಂದಿದ್ದಾರೆ. ಇದಲ್ಲದೇ ರೈಲ್ವೆಯು ತನ್ನದೇ ಆದ ಪರಿಹಾರ ನೀಡುತ್ತದೆ’ ಎಂದು ರೈಲ್ವೆ ಸಂಚಾರ ವಿಭಾಗದ ಸದಸ್ಯ ಮೊಹಮ್ಮದ್ ಜಮ್ಶೆದ್ ಹೇಳಿದ್ದಾರೆ.</p>.<p>ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹3.5 ಲಕ್ಷ, ಗಂಭೀರ ಗಾಯಗೊಂಡವರಿಗೆ ₹ 50 ಸಾವಿರ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ₹25 ಸಾವಿರ ಪರಿಹಾರ ಧನವನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಘೋಷಿಸಿದ್ದರು.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>