<p>ಅಹಮದಾಬಾದ್ (ಪಿಟಿಐ): ಗುಜರಾತಿನಲ್ಲಿ ನಡೆದ ಉಪಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಜಯಭೇರಿ ಭಾರಿಸಿದ್ದು ಎರಡು ಲೋಕಸಭಾ ಸ್ಥಾನಗಳು ಮತ್ತು ಮೂರು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿದೆ. ಇನ್ನೂ ಮತ ಎಣಿಕೆ ಮುಂದುವರೆದಿರುವ ಧೋರಜಿ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ.<br /> <br /> ಪೋರ್ ಬಂದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹತ್ವದ ಜಯ ಸಾಧಿಸಿದ್ದು ಪಕ್ಷದ ವಿಠ್ಠಲ್ ರಡಾಡಿಯಾ ಅವರು 1,28,000 ಮತಗಳನ್ನು ಗಳಿಸಿ ಜಯ ಗಳಿಸಿದ್ದಾರೆ. ವಿಠ್ಠಲ್ ಅವರು ಕಳೆದ ವರ್ಷ ಕಾಂಗ್ರೆಸ್ ಸಂಸದರಾಗಿದ್ದಾಗ ಮತಗಟ್ಟೆ ಬಳಿ ಬಂದೂಕು ಪ್ರದರ್ಶಿಸಿ ಬಂಧಿತರಾಗಿದ್ದು. ಆ ನಂತರ ಅವರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು.<br /> <br /> ಕಾಂಗ್ರೆಸ್ ಸಂಸದ ಮುಖೇಶ ಗಢವಿ ನಿಧನದಿಂದ ತೆರವಾಗಿದ್ದ ಸಬರ್ಕಾಂತ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಹರಿಭಾಯಿ ಚೌಧರಿ ಅವರು 71,000 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕೃಷ್ಣಾ ಗಢವಿ ಅವರನ್ನು ಸೋಲಿಸಿ ಗೆದ್ದುಕೊಂಡರು.<br /> <br /> <strong>ಛಪ್ರಾ (ಬಿಹಾರ) ವರದಿ</strong>: ಬಿಹಾರಿನ ಮಹಾರಾಜಗಂಜ್ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾದಳವು (ಆರ್ ಜೆ ಡಿ) 1.37 ಲಕ್ಷ ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದೆ. ಆದರೆ ಸಿವಾನ್ ನ ಗೋರಿಯಾಕೋಥಿಯಲ್ಲಿನ 118ನೇ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಇಲ್ಲಿ ಮತ ಎಣಿಕೆ ನಡೆಯದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.<br /> <br /> ಆರ್ ಜೆಡಿಯ ಪ್ರಭುನಾಥ ಸಿಂಗ್ ಅವರು 3,81,436 ಮತಗಳನ್ನು ಪಡೆದರೆ ಜನತಾದಳ (ಯು) ಅಭ್ಯರ್ಥಿ ಪಿ.ಕೆ. ಶಾಹಿ ಅವರು 2,44,324 ಹಾಗೂ ಕಾಂಗ್ರೆಸ್ಸಿನ ಜಿತೇಂದ್ರ ಸ್ವಾಮಿ ಅವರು 33,905 ಮತಗಳನ್ನು ಗಳಿಸಿದರು.<br /> <br /> <strong>ಅಲಹಾಬಾದ್ ವರದಿ:</strong> ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷವು ಪ್ರತಿಸ್ಪರ್ಧಿ ಬಿಎಸ್ ಪಿ ಅಭ್ಯರ್ಥಿಯನ್ನು 26,000 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಹಂಡಿಯಾ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದೆ.<br /> <br /> ಜೂನ್ 2ರಂದು ನಡೆದಿದ್ದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮಹೇಶ ನಾರಾಯಣ ಸಿಂಗ್ ಅವರು 81,655 ಮತಗಳಿಸಿ, ಬಿಎಸ್ ಪಿಯ ಪಂಕಜ್ ತ್ರಿಪಾಠಿ (54838 ಮತಗಳು) ಅವರನ್ನು ಪರಾಭವಗೊಳಿಸಿದರು.<br /> <br /> <strong>ಕೋಲ್ಕತ್ತಾ ವರದಿ:</strong> ಹೌರಾ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸುನ್ ಬ್ಯಾನರ್ಜಿ ಅವರು ಸಮೀಪ ಸ್ಪರ್ಧಿ ಸಿಪಿಎಂನ ಶ್ರೀದಿಪ್ ಭಟ್ಟಾಚಾರ್ಜಿ ಅವರನ್ನು 27,000 ಮತಗಳ ಅಂತರದಿಂದ ಸೋಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಹಮದಾಬಾದ್ (ಪಿಟಿಐ): ಗುಜರಾತಿನಲ್ಲಿ ನಡೆದ ಉಪಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಜಯಭೇರಿ ಭಾರಿಸಿದ್ದು ಎರಡು ಲೋಕಸಭಾ ಸ್ಥಾನಗಳು ಮತ್ತು ಮೂರು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿದೆ. ಇನ್ನೂ ಮತ ಎಣಿಕೆ ಮುಂದುವರೆದಿರುವ ಧೋರಜಿ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ.<br /> <br /> ಪೋರ್ ಬಂದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹತ್ವದ ಜಯ ಸಾಧಿಸಿದ್ದು ಪಕ್ಷದ ವಿಠ್ಠಲ್ ರಡಾಡಿಯಾ ಅವರು 1,28,000 ಮತಗಳನ್ನು ಗಳಿಸಿ ಜಯ ಗಳಿಸಿದ್ದಾರೆ. ವಿಠ್ಠಲ್ ಅವರು ಕಳೆದ ವರ್ಷ ಕಾಂಗ್ರೆಸ್ ಸಂಸದರಾಗಿದ್ದಾಗ ಮತಗಟ್ಟೆ ಬಳಿ ಬಂದೂಕು ಪ್ರದರ್ಶಿಸಿ ಬಂಧಿತರಾಗಿದ್ದು. ಆ ನಂತರ ಅವರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು.<br /> <br /> ಕಾಂಗ್ರೆಸ್ ಸಂಸದ ಮುಖೇಶ ಗಢವಿ ನಿಧನದಿಂದ ತೆರವಾಗಿದ್ದ ಸಬರ್ಕಾಂತ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಹರಿಭಾಯಿ ಚೌಧರಿ ಅವರು 71,000 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕೃಷ್ಣಾ ಗಢವಿ ಅವರನ್ನು ಸೋಲಿಸಿ ಗೆದ್ದುಕೊಂಡರು.<br /> <br /> <strong>ಛಪ್ರಾ (ಬಿಹಾರ) ವರದಿ</strong>: ಬಿಹಾರಿನ ಮಹಾರಾಜಗಂಜ್ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾದಳವು (ಆರ್ ಜೆ ಡಿ) 1.37 ಲಕ್ಷ ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದೆ. ಆದರೆ ಸಿವಾನ್ ನ ಗೋರಿಯಾಕೋಥಿಯಲ್ಲಿನ 118ನೇ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಇಲ್ಲಿ ಮತ ಎಣಿಕೆ ನಡೆಯದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.<br /> <br /> ಆರ್ ಜೆಡಿಯ ಪ್ರಭುನಾಥ ಸಿಂಗ್ ಅವರು 3,81,436 ಮತಗಳನ್ನು ಪಡೆದರೆ ಜನತಾದಳ (ಯು) ಅಭ್ಯರ್ಥಿ ಪಿ.ಕೆ. ಶಾಹಿ ಅವರು 2,44,324 ಹಾಗೂ ಕಾಂಗ್ರೆಸ್ಸಿನ ಜಿತೇಂದ್ರ ಸ್ವಾಮಿ ಅವರು 33,905 ಮತಗಳನ್ನು ಗಳಿಸಿದರು.<br /> <br /> <strong>ಅಲಹಾಬಾದ್ ವರದಿ:</strong> ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷವು ಪ್ರತಿಸ್ಪರ್ಧಿ ಬಿಎಸ್ ಪಿ ಅಭ್ಯರ್ಥಿಯನ್ನು 26,000 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಹಂಡಿಯಾ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದೆ.<br /> <br /> ಜೂನ್ 2ರಂದು ನಡೆದಿದ್ದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮಹೇಶ ನಾರಾಯಣ ಸಿಂಗ್ ಅವರು 81,655 ಮತಗಳಿಸಿ, ಬಿಎಸ್ ಪಿಯ ಪಂಕಜ್ ತ್ರಿಪಾಠಿ (54838 ಮತಗಳು) ಅವರನ್ನು ಪರಾಭವಗೊಳಿಸಿದರು.<br /> <br /> <strong>ಕೋಲ್ಕತ್ತಾ ವರದಿ:</strong> ಹೌರಾ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸುನ್ ಬ್ಯಾನರ್ಜಿ ಅವರು ಸಮೀಪ ಸ್ಪರ್ಧಿ ಸಿಪಿಎಂನ ಶ್ರೀದಿಪ್ ಭಟ್ಟಾಚಾರ್ಜಿ ಅವರನ್ನು 27,000 ಮತಗಳ ಅಂತರದಿಂದ ಸೋಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>