<p><strong>ನವದೆಹಲಿ (ಪಿಟಿಐ): </strong>ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ನಲ್ಲಿ ಸರ್ಕಾರಿ ಸ್ವಾಮ್ಯದ ಟ್ರೇಡಿಂಗ್ ಸಂಸ್ಥೆ ‘ಪಿಇಎಸ್’ನ ಹೂಡಿಕೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ದೇಶದಾದ್ಯಂತ 15 ಕಡೆ ಶೋಧ ನಡೆಸಿದೆ.<br /> <br /> ಈ ಅವ್ಯವಹಾರದಿಂದ ಕೇಂದ್ರದ ಬೊಕ್ಕಸಕ್ಕೆ ₨ 120 ಕೋಟಿ ನಷ್ಟ ಆಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಅಪರಾಧ ಸಂಚು, ನಕಲಿ ದಾಖಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈನಲ್ಲಿ ನಾಲ್ಕು, ಹರಿಯಾಣದ ಕರ್ನಲ್ನಲ್ಲಿ ಎರಡು ಹಾಗೂ ದೆಹಲಿಯ ಒಂಬತ್ತು ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಿದೆ.<br /> <br /> <strong>ಹೂಡಿಕೆದಾರರಿಗೆ ವಂಚನೆ: </strong>ಹಲವು ಬಗೆಯ ಸರಕುಗಳಿಗೆ ಸಂಬಂಧಿಸಿ ವಾಯಿದಾ ವಹಿವಾಟನ್ನು ವಿದ್ಯುನ್ಮಾನ ಸ್ವರೂಪದ ಪದ್ಧತಿಯಲ್ಲಿ ನಡೆಸುವ ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್, ಸಾಮಾನ್ಯರೂ ಸೇರಿದಂತೆ ಒಟ್ಟು 13 ಸಾವಿರ ಹೂಡಿಕೆದಾರರಿಗೆ ₨ 5,600 ಕೋಟಿ ವಂಚಿಸಿದ ಆರೋಪಕ್ಕೆ ಗುರಿಯಾಗಿದೆ. ಇದೇ ಕಾರಣಕ್ಕೆ, ಧಾನ್ಯ, ಬೆಳೆ, ಚಿನ್ನ, ಬೆಳ್ಳಿ, ತಾಮ್ರ ಮುಂತಾದ ಅಮೂಲ್ಯ ಲೋಹಗಳ ಇ-–ಟ್ರೇಡಿಂಗ್ ನಡೆಸುವ ಸಂಸ್ಥೆಯ ವಹಿವಾಟನ್ನು ಕೇಂದ್ರ ಸರ್ಕಾರ ಕಳೆದ ವರ್ಷದ ಜುಲೈನಲ್ಲಿಯೇ ಸ್ಥಗಿತಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ನಲ್ಲಿ ಸರ್ಕಾರಿ ಸ್ವಾಮ್ಯದ ಟ್ರೇಡಿಂಗ್ ಸಂಸ್ಥೆ ‘ಪಿಇಎಸ್’ನ ಹೂಡಿಕೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ದೇಶದಾದ್ಯಂತ 15 ಕಡೆ ಶೋಧ ನಡೆಸಿದೆ.<br /> <br /> ಈ ಅವ್ಯವಹಾರದಿಂದ ಕೇಂದ್ರದ ಬೊಕ್ಕಸಕ್ಕೆ ₨ 120 ಕೋಟಿ ನಷ್ಟ ಆಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಅಪರಾಧ ಸಂಚು, ನಕಲಿ ದಾಖಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈನಲ್ಲಿ ನಾಲ್ಕು, ಹರಿಯಾಣದ ಕರ್ನಲ್ನಲ್ಲಿ ಎರಡು ಹಾಗೂ ದೆಹಲಿಯ ಒಂಬತ್ತು ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಿದೆ.<br /> <br /> <strong>ಹೂಡಿಕೆದಾರರಿಗೆ ವಂಚನೆ: </strong>ಹಲವು ಬಗೆಯ ಸರಕುಗಳಿಗೆ ಸಂಬಂಧಿಸಿ ವಾಯಿದಾ ವಹಿವಾಟನ್ನು ವಿದ್ಯುನ್ಮಾನ ಸ್ವರೂಪದ ಪದ್ಧತಿಯಲ್ಲಿ ನಡೆಸುವ ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್, ಸಾಮಾನ್ಯರೂ ಸೇರಿದಂತೆ ಒಟ್ಟು 13 ಸಾವಿರ ಹೂಡಿಕೆದಾರರಿಗೆ ₨ 5,600 ಕೋಟಿ ವಂಚಿಸಿದ ಆರೋಪಕ್ಕೆ ಗುರಿಯಾಗಿದೆ. ಇದೇ ಕಾರಣಕ್ಕೆ, ಧಾನ್ಯ, ಬೆಳೆ, ಚಿನ್ನ, ಬೆಳ್ಳಿ, ತಾಮ್ರ ಮುಂತಾದ ಅಮೂಲ್ಯ ಲೋಹಗಳ ಇ-–ಟ್ರೇಡಿಂಗ್ ನಡೆಸುವ ಸಂಸ್ಥೆಯ ವಹಿವಾಟನ್ನು ಕೇಂದ್ರ ಸರ್ಕಾರ ಕಳೆದ ವರ್ಷದ ಜುಲೈನಲ್ಲಿಯೇ ಸ್ಥಗಿತಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>