<p><strong>ಶ್ರೀನಗರ (ಐಎಎನ್ಎಸ್): </strong>`ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಪಿಡಿಪಿಯ ಮೆಹಬೂಬಾ ಮುಫ್ತಿ ಅವರಂಥ ವಿರೋಧಿಗಳೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ~ ಎಂದು ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ನೀಡಿದ ಹೇಳಿಕೆ ಇದೀಗ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಹಾಗೂ ಪ್ರತಿಪಕ್ಷ ನಾಯಕಿ ಮೆಹಬೂಬಾ ಅವರ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ.<br /> <br /> ಸೋಮವಾರ ಅಹಮದಾಬಾದ್ನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ (ಎನ್ಐಸಿ) ಸಭೆಯಲ್ಲಿ ಇಂತಹ ಹೇಳಿಕೆ ನೀಡಿದ್ದ ಸುಷ್ಮಾ, `ಇದು ನಿಜಕ್ಕೂ ಹೆಮ್ಮೆಯ ವಿಷಯ~ ಎಂದಿದ್ದರು.<br /> <br /> ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ, `ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನಾನು ಆ ರೀತಿ ಮಾತನಾಡಿಲ್ಲ. ಸರ್ಕಾರ ನಾನು ಮಾಡಿದ ಭಾಷಣದ ಪ್ರತಿಯನ್ನು ಬಿಡುಗಡೆ ಮಾಡಿದರೆ ಸತ್ಯ ಗೊತ್ತಾಗುತ್ತದೆ~ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.<br /> <br /> ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, `ತಾನು ಜಾತ್ಯತೀತ ಎನ್ನುವ ಸೋಗು ಹಾಕಲು ಬಿಜೆಪಿಗೆ ಮುಸ್ಲಿಂ ನಾಯಕರ ಅಗತ್ಯ ಬಿದ್ದರೆ ಫಾರೂಖ್ ಅಬ್ದುಲ್ಲ ಅವರನ್ನು ಸಂಪರ್ಕಿಸಲಿ. ಫಾರೂಖ್ ಅವರಿಗೆ ಮೋದಿ ಎಂದರೆ ಅಚ್ಚುಮೆಚ್ಚು. ಮೋದಿ ಅವರ ಕಣ್ಣಲ್ಲಿ ಅಲ್ಲಾನನ್ನು ಕಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ~ ಎಂದು ವ್ಯಂಗ್ಯವಾಡಿದರು. ಒಮರ್ ಅಬ್ದುಲ್ಲ ಅವರತ್ತಲೂ ಮಾತಿನ ಬಾಣ ನೆಟ್ಟ ಅವರು, `ಗುಜರಾತ್ ನರಮೇಧದ ಸಂದರ್ಭದಲ್ಲಿ ಒಮರ್ ಎನ್ಡಿಎ ಸರ್ಕಾರದ ಸಚಿವರಾಗಿದ್ದರು~ ಎಂದು ತಿವಿದರು.<br /> <br /> `ಮೆಹಬೂಬಾ ಅವರು ಮೋದಿಯನ್ನು ಹೊಗಳಿರುವುದರಲ್ಲಿ ಅಚ್ಚರಿಯೇನಿದೆ? ಅವರು ತಮಗಿಷ್ಟವಾದವರನ್ನು ಹೊಗಳಬಹುದು; ಆದರೆ ಅವರು ಇದನ್ನು ನಿರಾಕರಿಸಿದ್ದು ನನಗೆ ಅಚ್ಚರಿಯಾಗಿದೆ~ ಎಂದು ಒಮರ್, ಮೆಹಬೂಬಾ ಅವರನ್ನು ಕೆಣಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ (ಐಎಎನ್ಎಸ್): </strong>`ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಪಿಡಿಪಿಯ ಮೆಹಬೂಬಾ ಮುಫ್ತಿ ಅವರಂಥ ವಿರೋಧಿಗಳೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ~ ಎಂದು ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ನೀಡಿದ ಹೇಳಿಕೆ ಇದೀಗ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಹಾಗೂ ಪ್ರತಿಪಕ್ಷ ನಾಯಕಿ ಮೆಹಬೂಬಾ ಅವರ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ.<br /> <br /> ಸೋಮವಾರ ಅಹಮದಾಬಾದ್ನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ (ಎನ್ಐಸಿ) ಸಭೆಯಲ್ಲಿ ಇಂತಹ ಹೇಳಿಕೆ ನೀಡಿದ್ದ ಸುಷ್ಮಾ, `ಇದು ನಿಜಕ್ಕೂ ಹೆಮ್ಮೆಯ ವಿಷಯ~ ಎಂದಿದ್ದರು.<br /> <br /> ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ, `ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನಾನು ಆ ರೀತಿ ಮಾತನಾಡಿಲ್ಲ. ಸರ್ಕಾರ ನಾನು ಮಾಡಿದ ಭಾಷಣದ ಪ್ರತಿಯನ್ನು ಬಿಡುಗಡೆ ಮಾಡಿದರೆ ಸತ್ಯ ಗೊತ್ತಾಗುತ್ತದೆ~ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.<br /> <br /> ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, `ತಾನು ಜಾತ್ಯತೀತ ಎನ್ನುವ ಸೋಗು ಹಾಕಲು ಬಿಜೆಪಿಗೆ ಮುಸ್ಲಿಂ ನಾಯಕರ ಅಗತ್ಯ ಬಿದ್ದರೆ ಫಾರೂಖ್ ಅಬ್ದುಲ್ಲ ಅವರನ್ನು ಸಂಪರ್ಕಿಸಲಿ. ಫಾರೂಖ್ ಅವರಿಗೆ ಮೋದಿ ಎಂದರೆ ಅಚ್ಚುಮೆಚ್ಚು. ಮೋದಿ ಅವರ ಕಣ್ಣಲ್ಲಿ ಅಲ್ಲಾನನ್ನು ಕಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ~ ಎಂದು ವ್ಯಂಗ್ಯವಾಡಿದರು. ಒಮರ್ ಅಬ್ದುಲ್ಲ ಅವರತ್ತಲೂ ಮಾತಿನ ಬಾಣ ನೆಟ್ಟ ಅವರು, `ಗುಜರಾತ್ ನರಮೇಧದ ಸಂದರ್ಭದಲ್ಲಿ ಒಮರ್ ಎನ್ಡಿಎ ಸರ್ಕಾರದ ಸಚಿವರಾಗಿದ್ದರು~ ಎಂದು ತಿವಿದರು.<br /> <br /> `ಮೆಹಬೂಬಾ ಅವರು ಮೋದಿಯನ್ನು ಹೊಗಳಿರುವುದರಲ್ಲಿ ಅಚ್ಚರಿಯೇನಿದೆ? ಅವರು ತಮಗಿಷ್ಟವಾದವರನ್ನು ಹೊಗಳಬಹುದು; ಆದರೆ ಅವರು ಇದನ್ನು ನಿರಾಕರಿಸಿದ್ದು ನನಗೆ ಅಚ್ಚರಿಯಾಗಿದೆ~ ಎಂದು ಒಮರ್, ಮೆಹಬೂಬಾ ಅವರನ್ನು ಕೆಣಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>