ಕೆಲ ದಿನದ ಹಿಂದೆನಡೆದ ಕೋಮುಗಲಭೆಯಿಂದಾಗಿ ಹೈಲಾಕಂಡಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲೇ ರಾಜ್ಯೇಶ್ವರ್ಪುರ್ ಪಾರ್ಟ್ 1 ವಿಲೇಜ್ ನಿವಾಸಿ ರೂಬನ್ ದಾಸ್ಎಂಬಾತತುಂಬು ಗರ್ಭಿಣಿಯಾದ ತನ್ನ ಪತ್ನಿ ನಂದಿತಳನ್ನು ಆಸ್ಪತ್ರೆಗೆ ಸೇರಿಸಲು ತನ್ನ ಕುಟುಂಬ ಸದಸ್ಯರಿಗೆ ಹಾಗೂ ಆಂಬುಲೆನ್ಸ್ಗೆ ಕರೆ ಮಾಡುತ್ತಿದ್ದ. ಕರ್ಫ್ಯೂ ಕಾರಣದಿಂದಾಗಿ ಸೂಕ್ತ ಪ್ರತಿಕ್ರಿಯೆ ದೊರೆತಿರಲಿಲ್ಲ. ಈ ಸಂದರ್ಭದಲ್ಲಿ ಅವರ ನೆರೆಹೊರೆಯಲ್ಲಿ ವಾಸಿಸುತ್ತಿರುವ ಆಟೋ ರಿಕ್ಷಾ ಚಾಲಕ ಮಕ್ಬೂಲ್ ಸಹಾಯಕ್ಕೆ ಧಾವಿಸಿದ್ದು, ಆಟೋದಲ್ಲೇ ಗರ್ಭಿಣಿಯನ್ನು ಕರೆದೊಯ್ದು ಎಸ್.ಕೆ.ರಾಯ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.