‘ಕೇರಳದಲ್ಲಿ ತೃತೀಯ ಲಿಂಗಿಗಳ ಕುರಿತಾದ ನೀತಿ ಜಾರಿಯಾಗಿದ್ದರೂ ಈ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮುಂದುವರಿದಿವೆ. ಇಂತಹ ಸನ್ನಿವೇಶದಲ್ಲಿ ಈ ವಿವಾಹ ಮಾದರಿಯಾಗಿದ್ದು, ಹೊಸ ಸಂದೇಶ ನೀಡಿದೆ. ಇಷಾನ್ ಮತ್ತು ಸೂರ್ಯ ಅವರು ತಾವು ಸಹ ಕೌಟುಂಬಿಕ ಜೀವನ ಸಾಗಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಡಲಿದ್ದಾರೆ. ಇಬ್ಬರ ಕುಟುಂಬಗಳು ಸಹ ಈ ವಿವಾಹವನ್ನು ಬೆಂಬಲಿಸಿವೆ’ ಎಂದು ಎಲ್ಜಿಬಿಟಿ ಸಂಘಟನೆಯ ಅಧ್ಯಕ್ಷರಾಗಿರುವ ಪಿ.ಕೆ. ಪ್ರಿಜೀಥ್ ಹೇಳಿದರು.