<p><span style="font-size: medium"><strong>ಭುವನೇಶ್ವರ, ಒಡಿಶಾ (ಐಎಎನ್ಎಸ್):</strong> ಕೊರೆಯುವ ಚಳಿಯ ನಡುವೆಯೂ ಸೋಮವಾರ ಮೇಘ ಸಪ್ತಮಿಯ ಅಂಗವಾಗಿ ಒಡಿಶಾದ ದೇವಾಲಯ ನಗರಿ ಎಂದೇ ಹೆಸರಾಗಿರುವ ಇಲ್ಲಿನ ಕೊನಾರ್ಕ್ ದೇವಾಲಯದ ಬಳಿಯ ನದಿಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಸಾಂಪ್ರದಾಯಿಕವಾಗಿ ಸ್ನಾನ ಮಾಡುವುದರ ಮೂಲಕ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.<br /> <br /> ಮಕ್ಕಳು ಹಾಗೂ ವಯಸ್ಸಾದ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಲಕ್ಷಾಂತರ ಭಕ್ತರು ಇಲ್ಲಿನ ಚಂದ್ರಭಾಗ ನದಿಯ ಸಂಗಮದಲ್ಲಿ ಸೂರ್ಯ ಸ್ನಾನ ಮಾಡಿ, ಸೂರ್ಯ ದೇವರಿಗೆ ನಮಿಸಿದರು. <br /> <br /> ~ಮೇಘ ಸಪ್ತಮಿಯ ಸಂದರ್ಭದಲ್ಲಿ ಇಲ್ಲಿನ ನದಿಯಲ್ಲಿ ಸ್ನಾನ ಮಾಡಿ, ಸೂರ್ಯದೇವನನ್ನು ಪ್ರಾರ್ಥಿಸಿದರೆ, ರೋಗಗಳು ಗುಣವಾಗುವುದರೊಂದಿಗೆ ಮನಸ್ಸು ಉಲ್ಲಾಸವಾಗುತ್ತದೆ. ಇದರೊಂದಿಗೆ ಪಾಪ- ಕರ್ಮಗಳು ಈ ನದಿಯ ಮೂಲಕ ಬಂಗಾಳ ಕೊಲ್ಲಿಗೆ ಕೊಚ್ಚಿಕೊಂಡು ಹೋಗುತ್ತವೆ~ ಎಂಬ ನಂಬಿಕೆಯಿಂದ ಈ ದಿನದಂದು ಲಕ್ಷಾಂತರ ಭಕ್ತರು ನದಿಯಲ್ಲಿ ಮಿಂದೆದ್ದು, ಸ್ವಾಮಿಗೆ ನಮಿಸುವುದು ವಾಡಿಕೆಯಾಗಿದೆ. </span></p>.<p><span style="font-size: medium"><span class="hps">~ಸೂಕ್ತ ಭದ್ರತೆಯಲ್ಲಿ <span class="hps">ಸುಮಾರು 5ಲಕ್ಷಕ್ಕೂ ಅಧಿಕ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು~ ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ರಾಥ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. </span></span></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: medium"><strong>ಭುವನೇಶ್ವರ, ಒಡಿಶಾ (ಐಎಎನ್ಎಸ್):</strong> ಕೊರೆಯುವ ಚಳಿಯ ನಡುವೆಯೂ ಸೋಮವಾರ ಮೇಘ ಸಪ್ತಮಿಯ ಅಂಗವಾಗಿ ಒಡಿಶಾದ ದೇವಾಲಯ ನಗರಿ ಎಂದೇ ಹೆಸರಾಗಿರುವ ಇಲ್ಲಿನ ಕೊನಾರ್ಕ್ ದೇವಾಲಯದ ಬಳಿಯ ನದಿಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಸಾಂಪ್ರದಾಯಿಕವಾಗಿ ಸ್ನಾನ ಮಾಡುವುದರ ಮೂಲಕ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.<br /> <br /> ಮಕ್ಕಳು ಹಾಗೂ ವಯಸ್ಸಾದ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಲಕ್ಷಾಂತರ ಭಕ್ತರು ಇಲ್ಲಿನ ಚಂದ್ರಭಾಗ ನದಿಯ ಸಂಗಮದಲ್ಲಿ ಸೂರ್ಯ ಸ್ನಾನ ಮಾಡಿ, ಸೂರ್ಯ ದೇವರಿಗೆ ನಮಿಸಿದರು. <br /> <br /> ~ಮೇಘ ಸಪ್ತಮಿಯ ಸಂದರ್ಭದಲ್ಲಿ ಇಲ್ಲಿನ ನದಿಯಲ್ಲಿ ಸ್ನಾನ ಮಾಡಿ, ಸೂರ್ಯದೇವನನ್ನು ಪ್ರಾರ್ಥಿಸಿದರೆ, ರೋಗಗಳು ಗುಣವಾಗುವುದರೊಂದಿಗೆ ಮನಸ್ಸು ಉಲ್ಲಾಸವಾಗುತ್ತದೆ. ಇದರೊಂದಿಗೆ ಪಾಪ- ಕರ್ಮಗಳು ಈ ನದಿಯ ಮೂಲಕ ಬಂಗಾಳ ಕೊಲ್ಲಿಗೆ ಕೊಚ್ಚಿಕೊಂಡು ಹೋಗುತ್ತವೆ~ ಎಂಬ ನಂಬಿಕೆಯಿಂದ ಈ ದಿನದಂದು ಲಕ್ಷಾಂತರ ಭಕ್ತರು ನದಿಯಲ್ಲಿ ಮಿಂದೆದ್ದು, ಸ್ವಾಮಿಗೆ ನಮಿಸುವುದು ವಾಡಿಕೆಯಾಗಿದೆ. </span></p>.<p><span style="font-size: medium"><span class="hps">~ಸೂಕ್ತ ಭದ್ರತೆಯಲ್ಲಿ <span class="hps">ಸುಮಾರು 5ಲಕ್ಷಕ್ಕೂ ಅಧಿಕ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು~ ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ರಾಥ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. </span></span></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>