<p>ಪಣಜಿ (ಐಎಎನ್ಎಸ್): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ವಿವಾದಾತ್ಮಕ ವಿಷಯವು ಗೋವಾದಲ್ಲಿ ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಲಿರುವ ಆದ್ಯತೆಯ ವಿಷಯವಾಗಿರುವುದಿಲ್ಲ ಎಂದು ಪಕ್ಷದ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರ ಇಲ್ಲಿ ಹೇಳಿದರು.<br /> <br /> ಪಕ್ಷದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿರುವ ರಾಜ್ಯದ ರಾಜಧಾನಿ ಪಣಜಿಯಲ್ಲಿ ನಖ್ವಿ ಅವರು ವರದಿಗಾರರ ಜೊತೆ ಮಾತನಾಡುತ್ತಿದ್ದರು.<br /> <br /> ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಹಾಲಿ ಸರ್ಕಾರದ ದುರಾಡಳಿತ - ಇವು ಪಕ್ಷದ ಮುಂದೆ ಇರುವ ಆದ್ಯತೆಯ ವಿಚಾರಗಳು ಎಂದು ನಖ್ವಿ ನುಡಿದರು. ಪಕ್ಷ ನಾಯಕರು ಅಯೋಧ್ಯಾ ದೇಗುಲ ವಿಚಾರದ ಬಗ್ಗೆ ಮೌನವಾಗಿರುವುದೇಕೆ? ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.<br /> <br /> ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು 2014ರ ಬದಲಿಗೆ 2013ರಲ್ಲೇ ನಡೆಯಬಹುದೆಂದು ನಿರೀಕ್ಷಿಸಲಾಗಿರುವ ಮುಂಬರುವ ಮಹಾ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ವ್ಯೂಹ ರೂಪಿಸಬಲ್ಲ ನಾಯಕತ್ವ ಬಗ್ಗೆ ಗಮನ ಹರಿಸುವುದು.<br /> <br /> 1980-90ರ ದಶಕದಲ್ಲಿ ರಾಷ್ಟ್ರೀಯ ರಾಜಕಾರಣದಲ್ಲಿ ಪಕ್ಷವನ್ನು ಕೇಂದ್ರ ಬಿಂದುವಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಷಯಗಳಲ್ಲಿ ಒಂದಾದ ಅಯೋಧ್ಯಾ ದೇಗುಲ ನಿರ್ಮಾಣದ ಸೈದ್ಧಾಂತಿಕ ಬದ್ಧತೆ ವಿಚಾರದಲ್ಲಿ ಬಿಜೆಪಿಯ ದೃಢ ನಿಲುವು ಹೊಂದಿದೆ ಎಂದೂ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಣಜಿ (ಐಎಎನ್ಎಸ್): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ವಿವಾದಾತ್ಮಕ ವಿಷಯವು ಗೋವಾದಲ್ಲಿ ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಲಿರುವ ಆದ್ಯತೆಯ ವಿಷಯವಾಗಿರುವುದಿಲ್ಲ ಎಂದು ಪಕ್ಷದ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರ ಇಲ್ಲಿ ಹೇಳಿದರು.<br /> <br /> ಪಕ್ಷದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿರುವ ರಾಜ್ಯದ ರಾಜಧಾನಿ ಪಣಜಿಯಲ್ಲಿ ನಖ್ವಿ ಅವರು ವರದಿಗಾರರ ಜೊತೆ ಮಾತನಾಡುತ್ತಿದ್ದರು.<br /> <br /> ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಹಾಲಿ ಸರ್ಕಾರದ ದುರಾಡಳಿತ - ಇವು ಪಕ್ಷದ ಮುಂದೆ ಇರುವ ಆದ್ಯತೆಯ ವಿಚಾರಗಳು ಎಂದು ನಖ್ವಿ ನುಡಿದರು. ಪಕ್ಷ ನಾಯಕರು ಅಯೋಧ್ಯಾ ದೇಗುಲ ವಿಚಾರದ ಬಗ್ಗೆ ಮೌನವಾಗಿರುವುದೇಕೆ? ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.<br /> <br /> ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು 2014ರ ಬದಲಿಗೆ 2013ರಲ್ಲೇ ನಡೆಯಬಹುದೆಂದು ನಿರೀಕ್ಷಿಸಲಾಗಿರುವ ಮುಂಬರುವ ಮಹಾ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ವ್ಯೂಹ ರೂಪಿಸಬಲ್ಲ ನಾಯಕತ್ವ ಬಗ್ಗೆ ಗಮನ ಹರಿಸುವುದು.<br /> <br /> 1980-90ರ ದಶಕದಲ್ಲಿ ರಾಷ್ಟ್ರೀಯ ರಾಜಕಾರಣದಲ್ಲಿ ಪಕ್ಷವನ್ನು ಕೇಂದ್ರ ಬಿಂದುವಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಷಯಗಳಲ್ಲಿ ಒಂದಾದ ಅಯೋಧ್ಯಾ ದೇಗುಲ ನಿರ್ಮಾಣದ ಸೈದ್ಧಾಂತಿಕ ಬದ್ಧತೆ ವಿಚಾರದಲ್ಲಿ ಬಿಜೆಪಿಯ ದೃಢ ನಿಲುವು ಹೊಂದಿದೆ ಎಂದೂ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>