<p><strong>ಶ್ರೀನಗರ (ಪಿಟಿಐ):</strong> ಬೇಸಿಗೆ ಸಂದರ್ಭದಲ್ಲಿ ಗಲಭೆಯಿಂದಾಗಿ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗಾದ ತೊಂದರೆಯನ್ನು ನೀಗಿಸಲು ತೆರೆಯಲಾಗಿದ್ದ ಶಾಲೆಗಳನ್ನು ಹಾಗೂ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಕಾಶ್ಮೀರ ಕಣಿವೆಯಾದ್ಯಂತ ಮಂಜು ಬಿದ್ದದ್ದರಿಂದ ಗುರುವಾರ ಮುಚ್ಚಬೇಕಾಯಿತು.<br /> <br /> ‘ಕಣಿವೆಯಲ್ಲಿ ಮಂಜು ಬೀಳುತ್ತಿರುವುದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ಮುಚ್ಚಲಾಗಿದೆ’ ಎಂದು ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಯ ಸಂಚಾಲಕ ಅಮೀರ್ ಆಲಿ ತಿಳಿಸಿದ್ದಾರೆ.<br /> <br /> ಅನಂತನಾಗ್ ಜಿಲ್ಲೆಯಲ್ಲಿ ಕಾಶ್ಮೀರ ಕಣಿವೆಯ ಹೆಬ್ಬಾಗಿಲೆನಿಸಿರುವ ಕ್ವಾಜಿಗುಂಡ್ನಲ್ಲಿ 1.25 ಅಡಿಗಳಷ್ಟು ಹಿಮ ಶೇಖರವಾಗಿತ್ತು ಎಂದು ಅವರು ತಿಳಿಸಿದ್ದಾರೆ. ‘ ರಸ್ತೆ ತೆರವು ಕಾರ್ಯ ಜಾರಿಯಲ್ಲಿದ್ದು ಹವಾಮಾನ ಸ್ಥಿತಿ ಅನುಸಾರ ವಾಹನ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ‘ ಎಂದು ಅವರು ತಿಳಿಸಿದ್ದಾರೆ. ‘ ಈವರೆಗೆ ತೆರೆಯಲಾಗಿದ್ದ ಎಲ್ಲಾ ಶಾಲೆಗಳಿಗೂ ಚಳಿಗಾಲದ ರಜೆ ನೀಡಲಾಗಿದೆ’ ಎಂದು ಕಾಶ್ಮೀರದ ಆಡಳಿತದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ (ಪಿಟಿಐ):</strong> ಬೇಸಿಗೆ ಸಂದರ್ಭದಲ್ಲಿ ಗಲಭೆಯಿಂದಾಗಿ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗಾದ ತೊಂದರೆಯನ್ನು ನೀಗಿಸಲು ತೆರೆಯಲಾಗಿದ್ದ ಶಾಲೆಗಳನ್ನು ಹಾಗೂ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಕಾಶ್ಮೀರ ಕಣಿವೆಯಾದ್ಯಂತ ಮಂಜು ಬಿದ್ದದ್ದರಿಂದ ಗುರುವಾರ ಮುಚ್ಚಬೇಕಾಯಿತು.<br /> <br /> ‘ಕಣಿವೆಯಲ್ಲಿ ಮಂಜು ಬೀಳುತ್ತಿರುವುದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ಮುಚ್ಚಲಾಗಿದೆ’ ಎಂದು ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಯ ಸಂಚಾಲಕ ಅಮೀರ್ ಆಲಿ ತಿಳಿಸಿದ್ದಾರೆ.<br /> <br /> ಅನಂತನಾಗ್ ಜಿಲ್ಲೆಯಲ್ಲಿ ಕಾಶ್ಮೀರ ಕಣಿವೆಯ ಹೆಬ್ಬಾಗಿಲೆನಿಸಿರುವ ಕ್ವಾಜಿಗುಂಡ್ನಲ್ಲಿ 1.25 ಅಡಿಗಳಷ್ಟು ಹಿಮ ಶೇಖರವಾಗಿತ್ತು ಎಂದು ಅವರು ತಿಳಿಸಿದ್ದಾರೆ. ‘ ರಸ್ತೆ ತೆರವು ಕಾರ್ಯ ಜಾರಿಯಲ್ಲಿದ್ದು ಹವಾಮಾನ ಸ್ಥಿತಿ ಅನುಸಾರ ವಾಹನ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ‘ ಎಂದು ಅವರು ತಿಳಿಸಿದ್ದಾರೆ. ‘ ಈವರೆಗೆ ತೆರೆಯಲಾಗಿದ್ದ ಎಲ್ಲಾ ಶಾಲೆಗಳಿಗೂ ಚಳಿಗಾಲದ ರಜೆ ನೀಡಲಾಗಿದೆ’ ಎಂದು ಕಾಶ್ಮೀರದ ಆಡಳಿತದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>