<p><strong>ಶ್ರೀನಗರ: </strong>ಕಳೆದ ವಾರ ಮೂವರು ಯುವಕರನ್ನು ಗುಂಡಿಕ್ಕಿ ಕೊಂದ ಆರೋಪದಡಿ ನಾಲ್ಕು ಉಗ್ರರು ಮತ್ತು ಏಳು ಸಹಾಯಕರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.</p>.<p>ಕಳೆದ ವಾರ ಬಂಧಿತ ಉಗ್ರರು ಮೂವರು ಯುವಕರನ್ನು ಜಮ್ಮುಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಹತ್ಯೆಗೈದಿದ್ದರು. ಲಷ್ಕರ್–ಎ–ತಯೆಬಾ ಸಂಘಟನಾ ಉಗ್ರರು ಈ ಹತ್ಯೆಯ ರೂವಾರಿಗಳು ಎಂಬ ಶಂಕೆ ವ್ಯಕ್ತವಾಗಿತ್ತು.</p>.<p>ಬಂಧಿತ ಉಗ್ರರನ್ನು ನಸೀರ್ ಅಹಮದ್ ಮೋಚಿ, ಬಿಲಾಲ್ ಅಹಮದ್ ನಜಾರ್, ಆಜಾಜ್ ಅಹಮದ್ ಗೋಜ್ರಿ, ನದೀಮ್ ಕಲಿಯಾ ಎಂದು ಗುರುತಿಸಲಾಗಿದೆ.</p>.<p>ಇನ್ನು ಉಗ್ರ ಸಹಾಯಕರಾದ ಓವೈಸ್ ರಶೀದ್ ಭಟ್, ಓಜಯಿರ್ ಅಹಮದ್ ಭಟ್, ಅಮೀನ್ ಭಟ್, ಮುಜಾಮಿಲ್ ಬಶೀರ್, ಶರೀಫ್ ಬಶೀರ್ ಭಟ್, ನಯೀಮ್ ಅಬ್ದುಲ್ಲಾ ಎಂದು ತಿಳಿದು ಬಂದಿದೆ.</p>.<p>ತನಿಖೆ ವೇಳೆ ಏ.30ರಂದು ನಡೆದಿದ್ದ ಮೂವರ ಯುವಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಬಹಿರಂಗಪಡಿಸಿದ್ದಾರೆ.</p>.<p>ರಾಜ್ಯ ವಿಶೇಷ ಸಶಸ್ತ್ರ ಪಡೆ 46 ಮತ್ತು 52 ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಪಡೆಯ ಜಂಟಿ ಕಾರ್ಯಾಚರಣೆ ಮೂಲಕ ವಿಭಿನ್ನ ಸ್ಥಳಗಳಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಈ ವೇಳೆ ಪಿಸ್ತೂಲ್ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ: </strong>ಕಳೆದ ವಾರ ಮೂವರು ಯುವಕರನ್ನು ಗುಂಡಿಕ್ಕಿ ಕೊಂದ ಆರೋಪದಡಿ ನಾಲ್ಕು ಉಗ್ರರು ಮತ್ತು ಏಳು ಸಹಾಯಕರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.</p>.<p>ಕಳೆದ ವಾರ ಬಂಧಿತ ಉಗ್ರರು ಮೂವರು ಯುವಕರನ್ನು ಜಮ್ಮುಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಹತ್ಯೆಗೈದಿದ್ದರು. ಲಷ್ಕರ್–ಎ–ತಯೆಬಾ ಸಂಘಟನಾ ಉಗ್ರರು ಈ ಹತ್ಯೆಯ ರೂವಾರಿಗಳು ಎಂಬ ಶಂಕೆ ವ್ಯಕ್ತವಾಗಿತ್ತು.</p>.<p>ಬಂಧಿತ ಉಗ್ರರನ್ನು ನಸೀರ್ ಅಹಮದ್ ಮೋಚಿ, ಬಿಲಾಲ್ ಅಹಮದ್ ನಜಾರ್, ಆಜಾಜ್ ಅಹಮದ್ ಗೋಜ್ರಿ, ನದೀಮ್ ಕಲಿಯಾ ಎಂದು ಗುರುತಿಸಲಾಗಿದೆ.</p>.<p>ಇನ್ನು ಉಗ್ರ ಸಹಾಯಕರಾದ ಓವೈಸ್ ರಶೀದ್ ಭಟ್, ಓಜಯಿರ್ ಅಹಮದ್ ಭಟ್, ಅಮೀನ್ ಭಟ್, ಮುಜಾಮಿಲ್ ಬಶೀರ್, ಶರೀಫ್ ಬಶೀರ್ ಭಟ್, ನಯೀಮ್ ಅಬ್ದುಲ್ಲಾ ಎಂದು ತಿಳಿದು ಬಂದಿದೆ.</p>.<p>ತನಿಖೆ ವೇಳೆ ಏ.30ರಂದು ನಡೆದಿದ್ದ ಮೂವರ ಯುವಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಬಹಿರಂಗಪಡಿಸಿದ್ದಾರೆ.</p>.<p>ರಾಜ್ಯ ವಿಶೇಷ ಸಶಸ್ತ್ರ ಪಡೆ 46 ಮತ್ತು 52 ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಪಡೆಯ ಜಂಟಿ ಕಾರ್ಯಾಚರಣೆ ಮೂಲಕ ವಿಭಿನ್ನ ಸ್ಥಳಗಳಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಈ ವೇಳೆ ಪಿಸ್ತೂಲ್ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>