<p><strong>ರಾಯ್ಪುರ/ನವದೆಹಲಿ (ಪಿಟಿಐ):</strong> ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಬಿಡುಗಡೆಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸರ್ಕಾರ ಮತ್ತು ಮಾವೊವಾದಿಗಳ ಪರ ಸಂಧಾನಕಾರರು ಗುರುವಾರ ಮೊದಲ ಸುತ್ತಿನ ಮಾತುಕತೆ ನಡೆಸಿದರು.</p>.<p>ಅಲೆಕ್ಸ್ ಅವರಿಗೆ ಅಸ್ತಮಾ ಔಷಧಿಯನ್ನು ತಲುಪಿಸಿದ ವಿಶೇಷ ಪ್ರತಿನಿಧಿಯು ಸಂಧಾನಕಾರರಿಗೆ ಅಲೆಕ್ಸ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.</p>.<p>ಇಬ್ಬರು ಮಹಿಳೆಯರು ಸೇರಿದಂತೆ ಜೈಲಿನಲ್ಲಿರುವ ಎಂಟು ಮಂದಿ ಮಾವೊವಾದಿಗಳನ್ನು ಬಿಡುಗಡೆ ಮಾಡಬೇಕು, ನಕ್ಸಲರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಮೆನನ್ ಬಿಡುಗಡೆಗಾಗಿ ಬಸ್ತಾರ್ ವಲಯಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಬಾರದು ಎಂಬುದು ಮಾವೊವಾದಿಗಳ ಬೇಡಿಕೆ ಆಗಿದೆ.</p>.<p>ಅಪಹರಣಕಾರರ ಪರ ಸಂಧಾನಕಾರರು ಸರ್ಕಾರ ನೇಮಿಸಿರುವ ಸಂಧಾನಕಾರರನ್ನು ಇಲ್ಲಿಯ ಅತಿಥಿ ಗೃಹದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾನೂನು ತಜ್ಞರು ಸಹ ಹಾಜರಿದ್ದರು.</p>.<p>ಮಧ್ಯಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ನಿರ್ಮಲಾ ಬುಚ್ ಮತ್ತ ಛತ್ತೀಸ್ಗಡದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ಕೆ. ಮಿಶ್ರಾ ಅವರನ್ನು ಸರ್ಕಾರ ಸಂಧಾನಕಾರರನ್ನಾಗಿ ನೇಮಿಸಿದೆ. ಮಾವೊವಾದಿಗಳು ಪರಿಶಿಷ್ಟ ಜಾತಿ/ಪಂಗಡಗಳ ರಾಷ್ಟ್ರೀಯ ಆಯೋಗದ ಮಾಜಿ ಅಧ್ಯಕ್ಷ ಬಿ. ಡಿ. ಶರ್ಮಾ ಮತ್ತು ಪ್ರೊ. ಜಿ. ಹರ್ಗೋಪಾಲ್ ಅವರನ್ನು ತಮ್ಮ ಸಂಧಾನಕಾರರೆಂದು ಸೂಚಿಸಿದ್ದಾರೆ. </p>.<p>ಮೆನನ್ ಆರೋಗ್ಯ ಸ್ಥಿರವಾಗಿದ್ದು, ಶೀಘ್ರ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಆಸ್ತಮ ಔಷಧಿಯನ್ನು ತಲುಪಿಸಿ ಬಂದಿರುವ ಮನೀಷ್ ಕುಂಜಮ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ/ನವದೆಹಲಿ (ಪಿಟಿಐ):</strong> ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಬಿಡುಗಡೆಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸರ್ಕಾರ ಮತ್ತು ಮಾವೊವಾದಿಗಳ ಪರ ಸಂಧಾನಕಾರರು ಗುರುವಾರ ಮೊದಲ ಸುತ್ತಿನ ಮಾತುಕತೆ ನಡೆಸಿದರು.</p>.<p>ಅಲೆಕ್ಸ್ ಅವರಿಗೆ ಅಸ್ತಮಾ ಔಷಧಿಯನ್ನು ತಲುಪಿಸಿದ ವಿಶೇಷ ಪ್ರತಿನಿಧಿಯು ಸಂಧಾನಕಾರರಿಗೆ ಅಲೆಕ್ಸ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.</p>.<p>ಇಬ್ಬರು ಮಹಿಳೆಯರು ಸೇರಿದಂತೆ ಜೈಲಿನಲ್ಲಿರುವ ಎಂಟು ಮಂದಿ ಮಾವೊವಾದಿಗಳನ್ನು ಬಿಡುಗಡೆ ಮಾಡಬೇಕು, ನಕ್ಸಲರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಮೆನನ್ ಬಿಡುಗಡೆಗಾಗಿ ಬಸ್ತಾರ್ ವಲಯಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಬಾರದು ಎಂಬುದು ಮಾವೊವಾದಿಗಳ ಬೇಡಿಕೆ ಆಗಿದೆ.</p>.<p>ಅಪಹರಣಕಾರರ ಪರ ಸಂಧಾನಕಾರರು ಸರ್ಕಾರ ನೇಮಿಸಿರುವ ಸಂಧಾನಕಾರರನ್ನು ಇಲ್ಲಿಯ ಅತಿಥಿ ಗೃಹದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾನೂನು ತಜ್ಞರು ಸಹ ಹಾಜರಿದ್ದರು.</p>.<p>ಮಧ್ಯಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ನಿರ್ಮಲಾ ಬುಚ್ ಮತ್ತ ಛತ್ತೀಸ್ಗಡದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ಕೆ. ಮಿಶ್ರಾ ಅವರನ್ನು ಸರ್ಕಾರ ಸಂಧಾನಕಾರರನ್ನಾಗಿ ನೇಮಿಸಿದೆ. ಮಾವೊವಾದಿಗಳು ಪರಿಶಿಷ್ಟ ಜಾತಿ/ಪಂಗಡಗಳ ರಾಷ್ಟ್ರೀಯ ಆಯೋಗದ ಮಾಜಿ ಅಧ್ಯಕ್ಷ ಬಿ. ಡಿ. ಶರ್ಮಾ ಮತ್ತು ಪ್ರೊ. ಜಿ. ಹರ್ಗೋಪಾಲ್ ಅವರನ್ನು ತಮ್ಮ ಸಂಧಾನಕಾರರೆಂದು ಸೂಚಿಸಿದ್ದಾರೆ. </p>.<p>ಮೆನನ್ ಆರೋಗ್ಯ ಸ್ಥಿರವಾಗಿದ್ದು, ಶೀಘ್ರ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಆಸ್ತಮ ಔಷಧಿಯನ್ನು ತಲುಪಿಸಿ ಬಂದಿರುವ ಮನೀಷ್ ಕುಂಜಮ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>