ಬೆಳಿಗ್ಗೆ 9.45 ಗಂಟೆಗೆ ರಾಮಚಂದ್ರನ್ ಅನ್ನು ದೇವಾಲಯದ ಆವರಣಕ್ಕೆ ಲಾರಿಯಲ್ಲಿ ಕರೆತರಲಾಯಿತು. 10.45ರ ವೇಳೆಗೆ ದೇವಾಲಯದ ದಕ್ಷಿಣ ಪ್ರವೇಶದ್ವಾರದ ಮೂಲಕ ಆನೆ ದೇವರ ವಿಗ್ರಹ ಹೊತ್ತು ಹೊರ ಬಂದಿತು. ಈ ದೇವಾಲಯದ ದಕ್ಷಿಣದ ಬಾಗಿಲನ್ನು ವರ್ಷಕ್ಕೆ ಎರಡು ಬಾರಿಮಾತ್ರ (ಪೂರಂ, ಶಿವರಾತ್ರಿ) ತೆರೆಯುವುದು ವಿಶೇಷ. ಸಂಘಟಕರು ರಾಮಚಂದ್ರನ್ ಜೊತೆಗೆ ಉತ್ಸವ ಮೂರ್ತಿಯ ಇನ್ನಷ್ಟು ದೂರ ಮೆರವಣಿಗೆ ನಡೆಸಲು ಉತ್ಸುಕತೆ ತೋರಿದರು. ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನಿರಾಕರಿ
ಸಿದ ಕಾರಣ, ಬೇರೆ ಆನೆಯ ನೆರವಿನಿಂದ ಮೆರವಣಿಗೆ ಮುಂದುವರೆಸಲಾಯಿತು.