<p><strong>ಪುಣೆ (ಪಿಟಿಐ/ಐಎಎನ್ಎಸ್):</strong> ನಟ ಸಂಜಯ್ ದತ್ ಅವರಿಗೆ ಪೆರೋಲ್ ನೀಡಿರುವುದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.<br /> <br /> ‘ಜಿಲ್ಲಾಧಿಕಾರಿಗಳು ಪೆರೋಲ್ಗೆ ಆದೇಶ ನೀಡಿದ್ದಾರೆ. ಈ ವಿಷಯವನ್ನು ನಾವು ಗಮನಿಸುತ್ತಿದ್ದೇವೆ ಮತ್ತು ಪೆರೋಲ್ ನೀಡಲು ಆಧಾರವಾಗಿಟ್ಟುಕೊಂಡಿರುವ ದಾಖಲೆಗಳನ್ನು ಕೇಳಲಾಗಿದೆ’ ಎಂದು ರಾಜ್ಯದ ಗೃಹ ಸಚಿವ ಆರ್.ಆರ್. ಪಾಟೀಲ ತಿಳಿಸಿದರು.<br /> <br /> ಜೈಲಿಗೆ ಬಂದು ಅತಿ ಕಡಿಮೆ ಅವಧಿಯಲ್ಲೇ ಎರಡು ಬಾರಿ ದತ್ಗೆ ಜೈಲಿನಿಂದ ತೆರಳಲು ಅನುಮತಿ ನೀಡಿರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಯೆರವಾಡಾ ಜೈಲಿನಲ್ಲಿ ಎದುರು ಪ್ರತಿಭಟನೆ ನಡೆಸಿದ ರಿಪಬ್ಲಿಕನ್ ಪಾರ್ಟಿ ಇಂಡಿಯಾದ ಕಾರ್ಯಕರ್ತರು ಆಗ್ರಹಿಸಿದ್ದಾರೆ.<br /> <br /> ಜೈಲಿನ ಹೊರಗೆ ಕಪ್ಪು ಬಾವುಟ ಪ್ರದರ್ಶಿಸಿ, ಜೈಲು ಆಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಪೆರೋಲ್ ರದ್ದತಿಗೆ ಆಗ್ರಹಿಸಿದರು.<br /> <br /> ಪತ್ನಿ ಮಾನ್ಯತಾ ಅನಾರೋಗ್ಯದ ಕಾರಣ ಪೆರೋಲ್ ಮೇಲೆ ತೆರಳಲು ಅನುಮತಿ ನೀಡುವಂತೆ ದತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.<br /> <br /> ಮನವಿ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಧಿಕಾರಿ ಪ್ರಭಾಕರ ದೇಶಮುಖ್ ಅವರು ನಟ ದತ್ಗೆ ಪೆರೋಲ್ ಮೇಲೆ ಮನೆಗೆ ತೆರಳುವಂತೆ ಸೂಚಿಸಿದ್ದರು.<br /> <br /> ಏತನ್ಮಧ್ಯೆ, ಚಲನಚಿತ್ರ ವೀಕ್ಷಣೆ ಮತ್ತು ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಛಾಯಾಚಿತ್ರಗಳನ್ನು ಸ್ಥಳೀಯ ಪತ್ರಿಕೆಯೊಂದು ಪ್ರಕಟಿಸಿದ್ದು, ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ದತ್ ಕೇಳಿರುವ ಪೆರೋಲ್ ಈಗ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.<br /> ‘ಪೆರೋಲ್ ಮೇಲೆ ದತ್ ಬಿಡುಗಡೆ ಮಾಡುವುದು ಇನ್ನೂ ನಿರ್ಧಾರವಾಗಿಲ್ಲ’ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ನಾಗಪುರ ವರದಿ (ಐಎಎನ್ಎಸ್):</strong> ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವರದಿ ಕೇಳಿರುವುದರಿಂದ ನಟ ದತ್ಗೆ ಪೆರೋಲ್ ನೀಡಿರುವುದರ ಮೇಲೆ ಅನಿಶ್ಚಿತತೆ ಎದುರಾಗಿದೆ.<br /> <br /> <strong>ಪತ್ನಿ ಮಾನ್ಯತಾ ಯಕೃತ್ತಿನಲ್ಲಿ ಗೆಡ್ಡೆ</strong><br /> ಮುಂಬೈ (ಪಿಟಿಐ): ನಟ ದತ್ ಪತ್ನಿ ಮಾನ್ಯತಾ ಅವರ ಯಕೃತ್ತಿನ ಮೇಲೆ ಗೆಡ್ಡೆ ಇದೆ ಎಂದು ಅವರಿಗೆ ತಪಾಸಣೆ ನಡೆಸಿದ ವೈದ್ಯ ಅಜಯ್ ಚೌಗುಲೆ ಹೇಳಿದ್ದಾರೆ. ‘ಮಾನ್ಯತಾ ಅವರಿಗೆ ಎದೆ ನೋವೂ ಇದೆ. ಇದರಿಂದಾಗಿ 15–20 ದಿನದಲ್ಲಿ ಹತ್ತು ಕೆ.ಜಿ. ತೂಕ ಕಡಿಮೆ ಆಗಿದೆ.<br /> <br /> ಎದೆ ನೋವಿಗೆ ಸಂಬಂಧಿಸಿದಂತೆ ವಿವರವಾದ ಪರೀಕ್ಷೆ ನಡೆಸಬೇಕು ಎನ್ನುವ ಸಲಹೆ ನೀಡಿದ್ದೇವೆ. ಈ ಪರೀಕ್ಷೆ ನಡೆಸಿದ ನಂತರವೇ ಶಸ್ತ್ರಚಿಕಿತ್ಸೆ ಮಾಡಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ (ಪಿಟಿಐ/ಐಎಎನ್ಎಸ್):</strong> ನಟ ಸಂಜಯ್ ದತ್ ಅವರಿಗೆ ಪೆರೋಲ್ ನೀಡಿರುವುದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.<br /> <br /> ‘ಜಿಲ್ಲಾಧಿಕಾರಿಗಳು ಪೆರೋಲ್ಗೆ ಆದೇಶ ನೀಡಿದ್ದಾರೆ. ಈ ವಿಷಯವನ್ನು ನಾವು ಗಮನಿಸುತ್ತಿದ್ದೇವೆ ಮತ್ತು ಪೆರೋಲ್ ನೀಡಲು ಆಧಾರವಾಗಿಟ್ಟುಕೊಂಡಿರುವ ದಾಖಲೆಗಳನ್ನು ಕೇಳಲಾಗಿದೆ’ ಎಂದು ರಾಜ್ಯದ ಗೃಹ ಸಚಿವ ಆರ್.ಆರ್. ಪಾಟೀಲ ತಿಳಿಸಿದರು.<br /> <br /> ಜೈಲಿಗೆ ಬಂದು ಅತಿ ಕಡಿಮೆ ಅವಧಿಯಲ್ಲೇ ಎರಡು ಬಾರಿ ದತ್ಗೆ ಜೈಲಿನಿಂದ ತೆರಳಲು ಅನುಮತಿ ನೀಡಿರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಯೆರವಾಡಾ ಜೈಲಿನಲ್ಲಿ ಎದುರು ಪ್ರತಿಭಟನೆ ನಡೆಸಿದ ರಿಪಬ್ಲಿಕನ್ ಪಾರ್ಟಿ ಇಂಡಿಯಾದ ಕಾರ್ಯಕರ್ತರು ಆಗ್ರಹಿಸಿದ್ದಾರೆ.<br /> <br /> ಜೈಲಿನ ಹೊರಗೆ ಕಪ್ಪು ಬಾವುಟ ಪ್ರದರ್ಶಿಸಿ, ಜೈಲು ಆಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಪೆರೋಲ್ ರದ್ದತಿಗೆ ಆಗ್ರಹಿಸಿದರು.<br /> <br /> ಪತ್ನಿ ಮಾನ್ಯತಾ ಅನಾರೋಗ್ಯದ ಕಾರಣ ಪೆರೋಲ್ ಮೇಲೆ ತೆರಳಲು ಅನುಮತಿ ನೀಡುವಂತೆ ದತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.<br /> <br /> ಮನವಿ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಧಿಕಾರಿ ಪ್ರಭಾಕರ ದೇಶಮುಖ್ ಅವರು ನಟ ದತ್ಗೆ ಪೆರೋಲ್ ಮೇಲೆ ಮನೆಗೆ ತೆರಳುವಂತೆ ಸೂಚಿಸಿದ್ದರು.<br /> <br /> ಏತನ್ಮಧ್ಯೆ, ಚಲನಚಿತ್ರ ವೀಕ್ಷಣೆ ಮತ್ತು ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಛಾಯಾಚಿತ್ರಗಳನ್ನು ಸ್ಥಳೀಯ ಪತ್ರಿಕೆಯೊಂದು ಪ್ರಕಟಿಸಿದ್ದು, ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ದತ್ ಕೇಳಿರುವ ಪೆರೋಲ್ ಈಗ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.<br /> ‘ಪೆರೋಲ್ ಮೇಲೆ ದತ್ ಬಿಡುಗಡೆ ಮಾಡುವುದು ಇನ್ನೂ ನಿರ್ಧಾರವಾಗಿಲ್ಲ’ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ನಾಗಪುರ ವರದಿ (ಐಎಎನ್ಎಸ್):</strong> ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವರದಿ ಕೇಳಿರುವುದರಿಂದ ನಟ ದತ್ಗೆ ಪೆರೋಲ್ ನೀಡಿರುವುದರ ಮೇಲೆ ಅನಿಶ್ಚಿತತೆ ಎದುರಾಗಿದೆ.<br /> <br /> <strong>ಪತ್ನಿ ಮಾನ್ಯತಾ ಯಕೃತ್ತಿನಲ್ಲಿ ಗೆಡ್ಡೆ</strong><br /> ಮುಂಬೈ (ಪಿಟಿಐ): ನಟ ದತ್ ಪತ್ನಿ ಮಾನ್ಯತಾ ಅವರ ಯಕೃತ್ತಿನ ಮೇಲೆ ಗೆಡ್ಡೆ ಇದೆ ಎಂದು ಅವರಿಗೆ ತಪಾಸಣೆ ನಡೆಸಿದ ವೈದ್ಯ ಅಜಯ್ ಚೌಗುಲೆ ಹೇಳಿದ್ದಾರೆ. ‘ಮಾನ್ಯತಾ ಅವರಿಗೆ ಎದೆ ನೋವೂ ಇದೆ. ಇದರಿಂದಾಗಿ 15–20 ದಿನದಲ್ಲಿ ಹತ್ತು ಕೆ.ಜಿ. ತೂಕ ಕಡಿಮೆ ಆಗಿದೆ.<br /> <br /> ಎದೆ ನೋವಿಗೆ ಸಂಬಂಧಿಸಿದಂತೆ ವಿವರವಾದ ಪರೀಕ್ಷೆ ನಡೆಸಬೇಕು ಎನ್ನುವ ಸಲಹೆ ನೀಡಿದ್ದೇವೆ. ಈ ಪರೀಕ್ಷೆ ನಡೆಸಿದ ನಂತರವೇ ಶಸ್ತ್ರಚಿಕಿತ್ಸೆ ಮಾಡಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>