<p>ನವದೆಹಲಿ (ಐಎಎನ್ಎಸ್): ತಮ್ಮ ಮೂರು ದಿನಗಳ ನಿರಶನ ಯಾವುದೇ ~ನಿರ್ದಿಷ್ಟ ಸಮುದಾಯ ಅಥವಾ ಧರ್ಮವನ್ನು~ ಸೆಳೆಯುವ ಗುರಿಯದ್ದಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಷ್ಪಷ್ಟ ಪಡಿಸಿದರು. ಆದರೆ 2002ರಲ್ಲಿ 1000 ಜೀವಗಳನ್ನು, ಬಹುತೇಕ ಮುಸ್ಲಿಮರನ್ನು ಬಲಿ ತೆಗೆದುಕೊಂಡ ಕೋಮು ಗಲಭೆಗಳು ಸಂಭವಿಸಿದ ಗುಜರಾತಿನಲ್ಲಿ ಜನತೆ ~ತೀವ್ರ ದುಃಖ ಅನುಭವಿಸಿದ್ದು ನಿಜ~ ಎಂದು ಅವರು ಒಪ್ಪಿಕೊಂಡರು.<br /> <br /> ~ಸದ್ಭಾವನಾ ನಿರಶನ ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದು ಗುಜರಾತ್ ಜನತೆಗೆ ಸಂಬಂಧಿಸಿದ್ದು. ಗುಜರಾತಿನ ಪ್ರಗತಿ ಭವಿಷ್ಯದ ದಾರಿಯನ್ನು ತೋರಿಸಿದೆ~ ಎಂದು ಮೋದಿ ತಮ್ಮ ನಿರಶನದ ಎರಡನೇ ದಿನ ಹೇಳಿದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕರು ಈ ಸದ್ಭಾವನಾ ನಿರಶನವನ್ನು ವ್ಯಾಪಕವಾಗಿ ಸ್ವಾಗತಿಸಿದ್ದಾರೆ.<br /> <br /> ~ಗುಜರಾತಿನ ಜನ ತೀವ್ರ ನೋವು ಅನುಭವಿಸಿದ್ದಾರೆ. ನೋವು ಅನುಭವಿಸಿದ ಕುಟುಂಬಗಳ ಬಗ್ಗೆ ನನಗೆ ಅನುಕಂಪವಿದೆ. ನಾನು ಈಗಲೂ ನೋವು ಅನುಭವಿಸುತ್ತಿದ್ದೇನೆ~ ಎಂದು ಮೋದಿ 2002ರ ಗುಜರಾತ್ ಕೋಮು ಹಿಂಸಾಚಾರವನ್ನು ಪ್ರಸ್ತಾಪಿಸುತ್ತಾ ಹೇಳಿದರು.<br /> <br /> ~ನಮ್ಮ ಗುರಿ ಒಗ್ಗಟ್ಟಿನ ಸಾಧನೆ, ವಿಭಜಿಸುವುದಲ್ಲ. ಗುಜರಾತ್ ನನ್ನ ಕುಟುಂಬ. ಆರು ಕೋಟಿ ಗುಜರಾತಿಗಳ ಸಂತಸ, ದುಃಖ, ಕನಸುಗಳು ಮತ್ತು ಆಶಯಗಳು ನನ್ನವು~ ಎಂದು ಮೋದಿ ದೃಢ ಪಡಿಸಿದರು. <br /> <br /> ಗುಜರಾತ್ ವಿಶ್ವ ವಿದ್ಯಾಲಯ ಆವರಣದಲ್ಲಿ ಮೋದಿ ನಿರಶನ ನಡೆಯುತ್ತಿದ್ದು, ಎರಡನೇ ದಿನಕ್ಕೆ ಪ್ರವೇಶಿಸಿದೆ. ಇದು ಅಲ್ಪಸಂಖ್ಯಾತರನ್ನು ಓಲೈಸುವ ಯತ್ನ ಎಂದು ಹೇಳಲಾಗುತ್ತಿದೆ.<br /> <br /> ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕಾಗಿ ನಡೆಸುತ್ತಿರುವ ನಿರಶನ ವೇಳೆ ತಮ್ಮ ದಶಕದ ಆಡಳಿತದ ಸಾಧನೆಗಳನ್ನು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ತಮ್ಮ ಮೂರು ದಿನಗಳ ನಿರಶನ ಯಾವುದೇ ~ನಿರ್ದಿಷ್ಟ ಸಮುದಾಯ ಅಥವಾ ಧರ್ಮವನ್ನು~ ಸೆಳೆಯುವ ಗುರಿಯದ್ದಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಷ್ಪಷ್ಟ ಪಡಿಸಿದರು. ಆದರೆ 2002ರಲ್ಲಿ 1000 ಜೀವಗಳನ್ನು, ಬಹುತೇಕ ಮುಸ್ಲಿಮರನ್ನು ಬಲಿ ತೆಗೆದುಕೊಂಡ ಕೋಮು ಗಲಭೆಗಳು ಸಂಭವಿಸಿದ ಗುಜರಾತಿನಲ್ಲಿ ಜನತೆ ~ತೀವ್ರ ದುಃಖ ಅನುಭವಿಸಿದ್ದು ನಿಜ~ ಎಂದು ಅವರು ಒಪ್ಪಿಕೊಂಡರು.<br /> <br /> ~ಸದ್ಭಾವನಾ ನಿರಶನ ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದು ಗುಜರಾತ್ ಜನತೆಗೆ ಸಂಬಂಧಿಸಿದ್ದು. ಗುಜರಾತಿನ ಪ್ರಗತಿ ಭವಿಷ್ಯದ ದಾರಿಯನ್ನು ತೋರಿಸಿದೆ~ ಎಂದು ಮೋದಿ ತಮ್ಮ ನಿರಶನದ ಎರಡನೇ ದಿನ ಹೇಳಿದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕರು ಈ ಸದ್ಭಾವನಾ ನಿರಶನವನ್ನು ವ್ಯಾಪಕವಾಗಿ ಸ್ವಾಗತಿಸಿದ್ದಾರೆ.<br /> <br /> ~ಗುಜರಾತಿನ ಜನ ತೀವ್ರ ನೋವು ಅನುಭವಿಸಿದ್ದಾರೆ. ನೋವು ಅನುಭವಿಸಿದ ಕುಟುಂಬಗಳ ಬಗ್ಗೆ ನನಗೆ ಅನುಕಂಪವಿದೆ. ನಾನು ಈಗಲೂ ನೋವು ಅನುಭವಿಸುತ್ತಿದ್ದೇನೆ~ ಎಂದು ಮೋದಿ 2002ರ ಗುಜರಾತ್ ಕೋಮು ಹಿಂಸಾಚಾರವನ್ನು ಪ್ರಸ್ತಾಪಿಸುತ್ತಾ ಹೇಳಿದರು.<br /> <br /> ~ನಮ್ಮ ಗುರಿ ಒಗ್ಗಟ್ಟಿನ ಸಾಧನೆ, ವಿಭಜಿಸುವುದಲ್ಲ. ಗುಜರಾತ್ ನನ್ನ ಕುಟುಂಬ. ಆರು ಕೋಟಿ ಗುಜರಾತಿಗಳ ಸಂತಸ, ದುಃಖ, ಕನಸುಗಳು ಮತ್ತು ಆಶಯಗಳು ನನ್ನವು~ ಎಂದು ಮೋದಿ ದೃಢ ಪಡಿಸಿದರು. <br /> <br /> ಗುಜರಾತ್ ವಿಶ್ವ ವಿದ್ಯಾಲಯ ಆವರಣದಲ್ಲಿ ಮೋದಿ ನಿರಶನ ನಡೆಯುತ್ತಿದ್ದು, ಎರಡನೇ ದಿನಕ್ಕೆ ಪ್ರವೇಶಿಸಿದೆ. ಇದು ಅಲ್ಪಸಂಖ್ಯಾತರನ್ನು ಓಲೈಸುವ ಯತ್ನ ಎಂದು ಹೇಳಲಾಗುತ್ತಿದೆ.<br /> <br /> ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕಾಗಿ ನಡೆಸುತ್ತಿರುವ ನಿರಶನ ವೇಳೆ ತಮ್ಮ ದಶಕದ ಆಡಳಿತದ ಸಾಧನೆಗಳನ್ನು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>