<p><strong>ತಿರುವನಂತಪುರ (ಐಎಎನ್ಎಸ್): </strong>ಇಲ್ಲಿನ ಐತಿಹಾಸಿಕ ಅನಂತಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿರುವ ಚಿನ್ನಾಭರಣಗಳು ಮತ್ತು ಅಪರೂಪದ ಲೋಹಗಳ ಎಣಿಕೆ ಹಾಗೂ ಮೌಲ್ಯ ನಿಗದಿಗೊಳಿಸುವ ಕಾರ್ಯ ಗುರುವಾರದಿಂದ ಆರಂಭವಾಗಿದೆ.<br /> <br /> ಸುಪ್ರೀಂ ಕೋರ್ಟ್ ನೇಮಿಸಿರುವ ಎರಡು ಸಮಿತಿಗಳು ಈ ಕಾರ್ಯಕ್ಕೆ ಚಾಲನೆ ನೀಡಿವೆ. ಬುಧವಾರ ದೇವಾಲಯಕ್ಕೆ ಆಗಮಿಸಿದ ಸಮಿತಿಯ ಸದಸ್ಯರು, ನೆಲಮಾಳಿಗೆಯಲ್ಲಿರುವ `ಎ~ ಕೋಣೆಯೊಳಗಿನ ವಸ್ತುಗಳ ಎಣಿಕೆ ಹಾಗೂ ಮೌಲ್ಯ ನಿಗದಿಪಡಿಸುವ ಪ್ರಕ್ರಿಯೆಗೆ ಯೋಜನೆ ರೂಪಿಸಿದ್ದರು. ನೆಲಮಾಳಿಕೆಯಲ್ಲಿ ಒಟ್ಟು ಆರು ಕೋಣೆಗಳಿವೆ.<br /> <br /> ವಸ್ತುಗಳ ಮೌಲ್ಯನಿಗದಿಪಡಿಸಲು ಸಮಿತಿಯ ಸದಸ್ಯರಿಗೆ ಹರಳು ತಜ್ಞರು ನೆರವು ನೀಡುತ್ತಿದ್ದಾರೆ. ಈ ಪ್ರಕ್ರಿಯೆಗಾಗಿ ಜರ್ಮನಿಯಿಂದ ಯಂತ್ರಗಳನ್ನು ತರಿಸಲಾಗಿದೆ.<br /> <br /> `ಸಮಿತಿಯು ತಮ್ಮ ದಾಸ್ತಾನು ತಪಾಸಣೆಯ ಮಧ್ಯಂತರ ವರದಿಯನ್ನು ಆಗಸ್ಟ್ 8ರಂದು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ~ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ. ಎಂ.ವಿ. ನಾಯರ್ ಮತ್ತು ನಿವೃತ್ತ ನ್ಯಾಯಮೂರ್ತಿ ಎಂ.ಎನ್.ಕೃಷ್ಣನ್ ಸುಪ್ರೀಂ ಕೋರ್ಟ್ ನೇಮಿಸಿರುವ ಈ ಸಮಿತಿಗಳ ನೇತೃತ್ವ ವಹಿಸಿದ್ದಾರೆ. ಈ ಸಮಿತಿಗಳಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು, ತಿರುವಾಂಕೂರು ರಾಜವಂಶದ ಕುಟುಂಬದ ಸದಸ್ಯರು, ದೇವಾಲಯದ ಉಸ್ತುವಾರಿಗಳು ಹಾಗೂ ತಜ್ಞರು ಸದಸ್ಯರಾಗಿದ್ದಾರೆ.<br /> <br /> ಕಳೆದ ವರ್ಷ ಜುಲೈನಲ್ಲಿ ಈ ದೇಗುಲದ ನೆಲಮಾಳಿಗೆಯಲ್ಲಿ ಆರು ಕೋಣೆಗಳು ಪತ್ತೆಯಾಗಿದ್ದವು. `ಬಿ~ ಕೋಣೆಯೊಂದನ್ನು ಹೊರತುಪಡಿಸಿ ಉಳಿದ ಐದು ಕೋಣೆಗಳನ್ನು ತೆರೆದ ಸಮಿತಿಯ ಸದಸ್ಯರು, ಅದರೊಳಗಿನ ವಸ್ತುಗಳ ಮೌಲ್ಯವನ್ನು ಅಂದಾಜಿಸಿದ್ದರು.ಆ ಪ್ರಕಾರ ವಸ್ತುಗಳ ಮೌಲ್ಯ ಒಂದು ಲಕ್ಷ ಕೋಟಿ ರೂಪಾಯಿಯಾಗಿತ್ತು.<br /> <br /> ಇತರೆ ಕೋಣೆಗಳಿಗೆ ಹೋಲಿಸಿದರೆ, `ಎ~ ಕೋಣೆಯಲ್ಲಿರುವ ವಸ್ತುಗಳ ಅತ್ಯಂತ ಮಹತ್ವದಾಗಿದ್ದವು. ಕಳೆದ ವರ್ಷ `ಎ~ ಕೋಣೆಯನ್ನು ತೆರೆದಾಗ, ವಜ್ರ, ವೈಢೂರ್ಯ, ಅಮೂಲ್ಯ ದೇವರ ವಿಗ್ರಹಗಳು ಮತ್ತು ಚಿನ್ನದ ನಾಣ್ಯಗಳು ಕೊಠಡಿಯಲ್ಲಿ ಪತ್ತೆಯಾಗಿದ್ದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ (ಐಎಎನ್ಎಸ್): </strong>ಇಲ್ಲಿನ ಐತಿಹಾಸಿಕ ಅನಂತಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿರುವ ಚಿನ್ನಾಭರಣಗಳು ಮತ್ತು ಅಪರೂಪದ ಲೋಹಗಳ ಎಣಿಕೆ ಹಾಗೂ ಮೌಲ್ಯ ನಿಗದಿಗೊಳಿಸುವ ಕಾರ್ಯ ಗುರುವಾರದಿಂದ ಆರಂಭವಾಗಿದೆ.<br /> <br /> ಸುಪ್ರೀಂ ಕೋರ್ಟ್ ನೇಮಿಸಿರುವ ಎರಡು ಸಮಿತಿಗಳು ಈ ಕಾರ್ಯಕ್ಕೆ ಚಾಲನೆ ನೀಡಿವೆ. ಬುಧವಾರ ದೇವಾಲಯಕ್ಕೆ ಆಗಮಿಸಿದ ಸಮಿತಿಯ ಸದಸ್ಯರು, ನೆಲಮಾಳಿಗೆಯಲ್ಲಿರುವ `ಎ~ ಕೋಣೆಯೊಳಗಿನ ವಸ್ತುಗಳ ಎಣಿಕೆ ಹಾಗೂ ಮೌಲ್ಯ ನಿಗದಿಪಡಿಸುವ ಪ್ರಕ್ರಿಯೆಗೆ ಯೋಜನೆ ರೂಪಿಸಿದ್ದರು. ನೆಲಮಾಳಿಕೆಯಲ್ಲಿ ಒಟ್ಟು ಆರು ಕೋಣೆಗಳಿವೆ.<br /> <br /> ವಸ್ತುಗಳ ಮೌಲ್ಯನಿಗದಿಪಡಿಸಲು ಸಮಿತಿಯ ಸದಸ್ಯರಿಗೆ ಹರಳು ತಜ್ಞರು ನೆರವು ನೀಡುತ್ತಿದ್ದಾರೆ. ಈ ಪ್ರಕ್ರಿಯೆಗಾಗಿ ಜರ್ಮನಿಯಿಂದ ಯಂತ್ರಗಳನ್ನು ತರಿಸಲಾಗಿದೆ.<br /> <br /> `ಸಮಿತಿಯು ತಮ್ಮ ದಾಸ್ತಾನು ತಪಾಸಣೆಯ ಮಧ್ಯಂತರ ವರದಿಯನ್ನು ಆಗಸ್ಟ್ 8ರಂದು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ~ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ. ಎಂ.ವಿ. ನಾಯರ್ ಮತ್ತು ನಿವೃತ್ತ ನ್ಯಾಯಮೂರ್ತಿ ಎಂ.ಎನ್.ಕೃಷ್ಣನ್ ಸುಪ್ರೀಂ ಕೋರ್ಟ್ ನೇಮಿಸಿರುವ ಈ ಸಮಿತಿಗಳ ನೇತೃತ್ವ ವಹಿಸಿದ್ದಾರೆ. ಈ ಸಮಿತಿಗಳಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು, ತಿರುವಾಂಕೂರು ರಾಜವಂಶದ ಕುಟುಂಬದ ಸದಸ್ಯರು, ದೇವಾಲಯದ ಉಸ್ತುವಾರಿಗಳು ಹಾಗೂ ತಜ್ಞರು ಸದಸ್ಯರಾಗಿದ್ದಾರೆ.<br /> <br /> ಕಳೆದ ವರ್ಷ ಜುಲೈನಲ್ಲಿ ಈ ದೇಗುಲದ ನೆಲಮಾಳಿಗೆಯಲ್ಲಿ ಆರು ಕೋಣೆಗಳು ಪತ್ತೆಯಾಗಿದ್ದವು. `ಬಿ~ ಕೋಣೆಯೊಂದನ್ನು ಹೊರತುಪಡಿಸಿ ಉಳಿದ ಐದು ಕೋಣೆಗಳನ್ನು ತೆರೆದ ಸಮಿತಿಯ ಸದಸ್ಯರು, ಅದರೊಳಗಿನ ವಸ್ತುಗಳ ಮೌಲ್ಯವನ್ನು ಅಂದಾಜಿಸಿದ್ದರು.ಆ ಪ್ರಕಾರ ವಸ್ತುಗಳ ಮೌಲ್ಯ ಒಂದು ಲಕ್ಷ ಕೋಟಿ ರೂಪಾಯಿಯಾಗಿತ್ತು.<br /> <br /> ಇತರೆ ಕೋಣೆಗಳಿಗೆ ಹೋಲಿಸಿದರೆ, `ಎ~ ಕೋಣೆಯಲ್ಲಿರುವ ವಸ್ತುಗಳ ಅತ್ಯಂತ ಮಹತ್ವದಾಗಿದ್ದವು. ಕಳೆದ ವರ್ಷ `ಎ~ ಕೋಣೆಯನ್ನು ತೆರೆದಾಗ, ವಜ್ರ, ವೈಢೂರ್ಯ, ಅಮೂಲ್ಯ ದೇವರ ವಿಗ್ರಹಗಳು ಮತ್ತು ಚಿನ್ನದ ನಾಣ್ಯಗಳು ಕೊಠಡಿಯಲ್ಲಿ ಪತ್ತೆಯಾಗಿದ್ದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>