<p><span style="font-size: 26px;"><strong>ವಾಷಿಂಗ್ಟನ್ (ಪಿಟಿಐ): </strong>ಉತ್ತರಾಖಂಡ ಮತ್ತಿತರ ಕಡೆ ಪ್ರವಾಹದಿಂದ ಉಂಟಾಗಿರುವ ಸಂಕಷ್ಟಮಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಅಗತ್ಯ ನೆರವು ನೀಡಲು ಸಿದ್ಧವಿರುವುದಾಗಿ ಅಮೆರಿಕ ತಿಳಿಸಿದೆ.</span><br /> <br /> <strong>ಹೆಲಿಪ್ಯಾಡ್ಗಳ ನಿರ್ಮಾಣ</strong><br /> ನವದೆಹಲಿ (ಪಿಟಿಐ): ಉತ್ತರಾಖಂಡದಲ್ಲಿ ನಡೆಸಲಾಗುತ್ತಿರುವ ಪರಿಹಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ಇನ್ನಷ್ಟು ಹೆಲಿಪ್ಯಾಡ್ಗಳನ್ನು ನಿರ್ಮಿಸಲು ಗಮನ ನೀಡಲಾಗುತ್ತಿದೆ ಎಂದು ಐಟಿಬಿಪಿ ಮುಖ್ಯಸ್ಥ ಅಜಯ್ ಛಡ್ಡಾ ಹೇಳಿದ್ದಾರೆ.<br /> <br /> <strong>ಹೆಲಿಕಾಪ್ಟರ್ ಪತನ: ಪೈಲಟ್ಗೆ ಗಾಯ</strong><br /> ಡೆಹ್ರಾಡೂನ್ (ಪಿಟಿಐ): ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಗೌರಿಕುಂಡ್ ಜಿಲ್ಲೆಯಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಪೈಲಟ್ ಗಾಯಗೊಂಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.<br /> <br /> <strong>ತಿಹಾರ್ ಕೈದಿಗಳಿಂದ ನೆರವು</strong><br /> ನವದೆಹಲಿ (ಪಿಟಿಐ): ಉತ್ತರಾಖಂಡದ ನೆರೆ ಸಂತ್ರಸ್ತರಿಗೆ ತಿಹಾರ್ ಜೈಲಿನ ಕೈದಿಗಳು ನೆರವಿನ ಹಸ್ತ ಚಾಚಲಿದ್ದಾರೆ.<br /> ಜೈಲಿನ ಸಿಬ್ಬಂದಿಯ ಜೊತೆಗೆ ಕೆಲವು ಕೈದಿಗಳು ಕೂಡ ಸೇರಿ ್ಙ 13 ಲಕ್ಷವನ್ನು ಪರಿಹಾರ ಕಾರ್ಯಕ್ಕಾಗಿ ನೀಡಲಿದ್ದಾರೆ.<br /> <br /> <strong>3 ದಿನದಲ್ಲಿ ಟವರ್-ಬಿಎಸ್ಎನ್ಎಲ್</strong><br /> ನವದೆಹಲಿ (ಪಿಟಿಐ): ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಸಂತ್ರಸ್ತರು ಸಿಲುಕಿಕೊಂಡಿದ್ದ ಪ್ರಮುಖ ಸ್ಥಳಗಳಲ್ಲಿ ಮೂರು ದಿನಗಳ ಒಳಗಾಗಿ ಮೊಬೈಲ್ ಟವರ್ಗಳನ್ನು ಸ್ಥಾಪಿಸುವುದಾಗಿ ಬಿಎಸ್ಎನ್ಎಲ್ ಹೇಳಿದೆ.<br /> <br /> <strong>`ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ'</strong><br /> ನವದೆಹಲಿ (ಪಿಟಿಐ): ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಲ್ಲಿ ಮಳೆ ಸೃಷ್ಟಿಸಿರುವ ಅನಾಹುತವನ್ನು `ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಗೃಹ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ಸರ್ವಾನುಮತದಿಂದ ಶಿಫಾರಸು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ವಾಷಿಂಗ್ಟನ್ (ಪಿಟಿಐ): </strong>ಉತ್ತರಾಖಂಡ ಮತ್ತಿತರ ಕಡೆ ಪ್ರವಾಹದಿಂದ ಉಂಟಾಗಿರುವ ಸಂಕಷ್ಟಮಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಅಗತ್ಯ ನೆರವು ನೀಡಲು ಸಿದ್ಧವಿರುವುದಾಗಿ ಅಮೆರಿಕ ತಿಳಿಸಿದೆ.</span><br /> <br /> <strong>ಹೆಲಿಪ್ಯಾಡ್ಗಳ ನಿರ್ಮಾಣ</strong><br /> ನವದೆಹಲಿ (ಪಿಟಿಐ): ಉತ್ತರಾಖಂಡದಲ್ಲಿ ನಡೆಸಲಾಗುತ್ತಿರುವ ಪರಿಹಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ಇನ್ನಷ್ಟು ಹೆಲಿಪ್ಯಾಡ್ಗಳನ್ನು ನಿರ್ಮಿಸಲು ಗಮನ ನೀಡಲಾಗುತ್ತಿದೆ ಎಂದು ಐಟಿಬಿಪಿ ಮುಖ್ಯಸ್ಥ ಅಜಯ್ ಛಡ್ಡಾ ಹೇಳಿದ್ದಾರೆ.<br /> <br /> <strong>ಹೆಲಿಕಾಪ್ಟರ್ ಪತನ: ಪೈಲಟ್ಗೆ ಗಾಯ</strong><br /> ಡೆಹ್ರಾಡೂನ್ (ಪಿಟಿಐ): ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಗೌರಿಕುಂಡ್ ಜಿಲ್ಲೆಯಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಪೈಲಟ್ ಗಾಯಗೊಂಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.<br /> <br /> <strong>ತಿಹಾರ್ ಕೈದಿಗಳಿಂದ ನೆರವು</strong><br /> ನವದೆಹಲಿ (ಪಿಟಿಐ): ಉತ್ತರಾಖಂಡದ ನೆರೆ ಸಂತ್ರಸ್ತರಿಗೆ ತಿಹಾರ್ ಜೈಲಿನ ಕೈದಿಗಳು ನೆರವಿನ ಹಸ್ತ ಚಾಚಲಿದ್ದಾರೆ.<br /> ಜೈಲಿನ ಸಿಬ್ಬಂದಿಯ ಜೊತೆಗೆ ಕೆಲವು ಕೈದಿಗಳು ಕೂಡ ಸೇರಿ ್ಙ 13 ಲಕ್ಷವನ್ನು ಪರಿಹಾರ ಕಾರ್ಯಕ್ಕಾಗಿ ನೀಡಲಿದ್ದಾರೆ.<br /> <br /> <strong>3 ದಿನದಲ್ಲಿ ಟವರ್-ಬಿಎಸ್ಎನ್ಎಲ್</strong><br /> ನವದೆಹಲಿ (ಪಿಟಿಐ): ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಸಂತ್ರಸ್ತರು ಸಿಲುಕಿಕೊಂಡಿದ್ದ ಪ್ರಮುಖ ಸ್ಥಳಗಳಲ್ಲಿ ಮೂರು ದಿನಗಳ ಒಳಗಾಗಿ ಮೊಬೈಲ್ ಟವರ್ಗಳನ್ನು ಸ್ಥಾಪಿಸುವುದಾಗಿ ಬಿಎಸ್ಎನ್ಎಲ್ ಹೇಳಿದೆ.<br /> <br /> <strong>`ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ'</strong><br /> ನವದೆಹಲಿ (ಪಿಟಿಐ): ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಲ್ಲಿ ಮಳೆ ಸೃಷ್ಟಿಸಿರುವ ಅನಾಹುತವನ್ನು `ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಗೃಹ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ಸರ್ವಾನುಮತದಿಂದ ಶಿಫಾರಸು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>