<p><strong>ನವದೆಹಲಿ:</strong> ಮುಂದಿನ ತಿಂಗಳು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಉಭಯ ರಾಷ್ಟ್ರಗಳ ಗೃಹ ಕಾರ್ಯದರ್ಶಿಗಳ ಮಾತುಕತೆ ವೇಳೆ ಭಾರತ ಮತ್ತು ಪಾಕಿಸ್ತಾನಗಳು ಮುಕ್ತ ವೀಸಾ ಒಪ್ಪಂದಕ್ಕೆ ಸಹಿ ಹಾಕಲಿವೆ.</p>.<p>ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಏ.8ರಂದು ಇಲ್ಲಿಗೆ ಭೇಟಿ ನೀಡಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರ ಕುರಿತು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿ ಮೇಲಿನ ವಿಷಯ ತಿಳಿಸಿದರು.</p>.<p>ಅಂದು ನಡೆದ ಮಾತುಕತೆಯಲ್ಲಿ, ಇಬ್ಬರೂ ನಾಯಕರು ಪರಸ್ಪರ ರಾಷ್ಟ್ರಗಳ ಜನಸಾಮಾನ್ಯರ ಸಂಪರ್ಕ ವೃದ್ಧಿಗೆ ಆದ್ಯತೆ ನೀಡಲು ತೀರ್ಮಾನಿಸಿದ್ದಾರೆ. ಅದಕ್ಕೆ ಪೂರಕವಾಗಿ ಮುಕ್ತ ವೀಸಾ ಒಪ್ಪಂದ ಏರ್ಪಡಲಿದೆ ಎಂದೂ ಕೃಷ್ಣ ಹೇಳಿದರು.</p>.<p>ಗೃಹ ಕಾರ್ಯದರ್ಶಿಗಳ ಮಾತುಕತೆಗೆ ಹೊಸದಾಗಿ ದಿನಾಂಕ ಸೂಚಿಸುವಂತೆ ಪಾಕಿಸ್ತಾನವನ್ನು ಕೋರಲಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನ ಮೇ 22ರಂದು ಮುಗಿಯಲಿದ್ದು, ನಂತರ ದಿನಾಂಕ ನಿಗದಿ ಮಾಡಲು ಕೋರಲಾಗಿದೆ ಎಂದರು.</p>.<p><strong>ಕಠಿಣ ನಿಲುವು:</strong> `ನಮ್ಮ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಮುಂದುವರಿಯಬೇಕಾದರೆ ಭಾರತದ ವಿರುದ್ಧ ಪಾಕಿಸ್ತಾನದ ನೆಲದಿಂದ ಪ್ರಚೋದಿಸಲಾಗುತ್ತಿರುವ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಪ್ರಧಾನಿ ಮನಮೋಹನ್ಸಿಂಗ್ ನೆರೆ ರಾಷ್ಟ್ರದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ನೇರವಾಗಿ ಹೇಳಿದ್ದಾರೆ. </p>.<p>ಏಪ್ರಿಲ್ 8ರ ಜರ್ದಾರಿ ಅವರ ಭಾರತ ಭೇಟಿ ಹಾಗೂ ಪ್ರಧಾನಿ ಜತೆ ನಡೆಸಿದ ಮಾತುಕತೆ ಕುರಿತು ಸ್ವಯಂಪ್ರೇರಿತ ಹೇಳಿಕೆ ನೀಡಿದ ಎಸ್. ಎಂ. ಕೃಷ್ಣ, `ನಮ್ಮ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಜನ ಬೆಂಬಲ ದೊರೆಯಬೇಕಾದರೆ ಭಾರತದ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ ಕೊಡುತ್ತಿರುವ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯ. ಈ ವಿಷಯದಲ್ಲಿ ಭಾರತದ ಆತಂಕಗಳನ್ನು ನಿವಾರಣೆ ಮಾಡಬೇಕು~ ಎಂದು ಪಾಕಿಸ್ತಾನಕ್ಕೆ ಹೇಳಲಾಗಿದೆ~ ಎಂದರು.</p>.<p>ಮುಂಬೈ ಮೇಲಿನ ದಾಳಿಗೆ ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭಾರತವನ್ನು ಗುರಿಯಾಗಿಟ್ಟುಕೊಂಡು ಪಾಕ್ ನೆಲದಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಈ ಆರೋಪಗಳಿಗೆ ಪೂರಕವಾಗಿ ಲಷ್ಕರ್-ಇ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಬಹಿರಂಗವಾಗಿ ನಡೆಸಿರುವ ಚಟುವಟಿಕೆಗಳ ಬಗ್ಗೆ ಪ್ರಧಾನಿ, ಜರ್ದಾರಿ ಗಮನ ಸೆಳೆದರು ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದರು.</p>.<p>ಉಭಯ ಮುಖಂಡರ ನಡುವೆ ನಡೆದ ಸುಮಾರು 40ನಿಮಿಷಗಳ ಮಾತುಕತೆ ವೇಳೆ ಹಫೀಜ್ ವಿರುದ್ಧದ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವಿಷಯದಲ್ಲಿ ಎರಡೂ ಸರ್ಕಾರದ ಮಧ್ಯೆ ಚರ್ಚೆ ಮುಂದುವರಿಯುವ ಅಗತ್ಯವಿದೆ ಎಂಬುದಾಗಿ ಜರ್ದಾರಿ ತಿಳಿಸಿದರು ಎಂದು ಕೃಷ್ಣ ವಿವರಿಸಿದರು.</p>.<p>ಕಾಶ್ಮೀರ, ಸಿಯಾಚಿನ್ ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಎಲ್ಲ ವಿವಾದಗಳನ್ನು ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಜರ್ದಾರಿ ಸಭೆಯಲ್ಲಿ ಅಭಿಪ್ರಾಯ ಪಟ್ಟರು. ಈ ಎಲ್ಲ ವಿವಾದಗಳಿಗೆ ಸಂಬಂಧಿಸಿದಂತೆ ಹಂತಹಂತವಾಗಿ ಮುನ್ನಡೆದು ಉಭಯತ್ರರಿಗೆ ಒಪ್ಪಿಗೆಯಾಗುವ ಪರಿಹಾರಗಳನ್ನು ಹುಡುಕಬೇಕಾದ ಅಗತ್ಯವಿದೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆಂದು ಕೃಷ್ಣ ತಿಳಿಸಿದರು.</p>.<p>ಮಾತುಕತೆ ವೇಳೆ ಜರ್ದಾರಿ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಸಿಂಗ್ ಅವರಿಗೆ ಆಹ್ವಾನ ನೀಡಿದರು. ಈ ಆಹ್ವಾನ ಸ್ವೀಕರಿಸಿದ ಪ್ರಧಾನಿ ಸೂಕ್ತ ಸಮಯದಲ್ಲಿ ಭೇಟಿ ಕೊಡುವುದಾಗಿ ಭರವಸೆ ನೀಡಿದರು. <br /> ಪ್ರಧಾನಿ ಭೇಟಿ ದಿನಾಂಕ ಹಾಗೂ ಮಾಡಬೇಕಾದ ಸಿದ್ಧತೆ ಕುರಿತು ರಾಜತಾಂತ್ರಿಕ ಅಧಿಕಾರಿಗಳು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮುಂದಿನ ತಿಂಗಳು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಉಭಯ ರಾಷ್ಟ್ರಗಳ ಗೃಹ ಕಾರ್ಯದರ್ಶಿಗಳ ಮಾತುಕತೆ ವೇಳೆ ಭಾರತ ಮತ್ತು ಪಾಕಿಸ್ತಾನಗಳು ಮುಕ್ತ ವೀಸಾ ಒಪ್ಪಂದಕ್ಕೆ ಸಹಿ ಹಾಕಲಿವೆ.</p>.<p>ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಏ.8ರಂದು ಇಲ್ಲಿಗೆ ಭೇಟಿ ನೀಡಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರ ಕುರಿತು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿ ಮೇಲಿನ ವಿಷಯ ತಿಳಿಸಿದರು.</p>.<p>ಅಂದು ನಡೆದ ಮಾತುಕತೆಯಲ್ಲಿ, ಇಬ್ಬರೂ ನಾಯಕರು ಪರಸ್ಪರ ರಾಷ್ಟ್ರಗಳ ಜನಸಾಮಾನ್ಯರ ಸಂಪರ್ಕ ವೃದ್ಧಿಗೆ ಆದ್ಯತೆ ನೀಡಲು ತೀರ್ಮಾನಿಸಿದ್ದಾರೆ. ಅದಕ್ಕೆ ಪೂರಕವಾಗಿ ಮುಕ್ತ ವೀಸಾ ಒಪ್ಪಂದ ಏರ್ಪಡಲಿದೆ ಎಂದೂ ಕೃಷ್ಣ ಹೇಳಿದರು.</p>.<p>ಗೃಹ ಕಾರ್ಯದರ್ಶಿಗಳ ಮಾತುಕತೆಗೆ ಹೊಸದಾಗಿ ದಿನಾಂಕ ಸೂಚಿಸುವಂತೆ ಪಾಕಿಸ್ತಾನವನ್ನು ಕೋರಲಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನ ಮೇ 22ರಂದು ಮುಗಿಯಲಿದ್ದು, ನಂತರ ದಿನಾಂಕ ನಿಗದಿ ಮಾಡಲು ಕೋರಲಾಗಿದೆ ಎಂದರು.</p>.<p><strong>ಕಠಿಣ ನಿಲುವು:</strong> `ನಮ್ಮ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಮುಂದುವರಿಯಬೇಕಾದರೆ ಭಾರತದ ವಿರುದ್ಧ ಪಾಕಿಸ್ತಾನದ ನೆಲದಿಂದ ಪ್ರಚೋದಿಸಲಾಗುತ್ತಿರುವ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಪ್ರಧಾನಿ ಮನಮೋಹನ್ಸಿಂಗ್ ನೆರೆ ರಾಷ್ಟ್ರದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ನೇರವಾಗಿ ಹೇಳಿದ್ದಾರೆ. </p>.<p>ಏಪ್ರಿಲ್ 8ರ ಜರ್ದಾರಿ ಅವರ ಭಾರತ ಭೇಟಿ ಹಾಗೂ ಪ್ರಧಾನಿ ಜತೆ ನಡೆಸಿದ ಮಾತುಕತೆ ಕುರಿತು ಸ್ವಯಂಪ್ರೇರಿತ ಹೇಳಿಕೆ ನೀಡಿದ ಎಸ್. ಎಂ. ಕೃಷ್ಣ, `ನಮ್ಮ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಜನ ಬೆಂಬಲ ದೊರೆಯಬೇಕಾದರೆ ಭಾರತದ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ ಕೊಡುತ್ತಿರುವ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯ. ಈ ವಿಷಯದಲ್ಲಿ ಭಾರತದ ಆತಂಕಗಳನ್ನು ನಿವಾರಣೆ ಮಾಡಬೇಕು~ ಎಂದು ಪಾಕಿಸ್ತಾನಕ್ಕೆ ಹೇಳಲಾಗಿದೆ~ ಎಂದರು.</p>.<p>ಮುಂಬೈ ಮೇಲಿನ ದಾಳಿಗೆ ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭಾರತವನ್ನು ಗುರಿಯಾಗಿಟ್ಟುಕೊಂಡು ಪಾಕ್ ನೆಲದಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಈ ಆರೋಪಗಳಿಗೆ ಪೂರಕವಾಗಿ ಲಷ್ಕರ್-ಇ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಬಹಿರಂಗವಾಗಿ ನಡೆಸಿರುವ ಚಟುವಟಿಕೆಗಳ ಬಗ್ಗೆ ಪ್ರಧಾನಿ, ಜರ್ದಾರಿ ಗಮನ ಸೆಳೆದರು ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದರು.</p>.<p>ಉಭಯ ಮುಖಂಡರ ನಡುವೆ ನಡೆದ ಸುಮಾರು 40ನಿಮಿಷಗಳ ಮಾತುಕತೆ ವೇಳೆ ಹಫೀಜ್ ವಿರುದ್ಧದ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವಿಷಯದಲ್ಲಿ ಎರಡೂ ಸರ್ಕಾರದ ಮಧ್ಯೆ ಚರ್ಚೆ ಮುಂದುವರಿಯುವ ಅಗತ್ಯವಿದೆ ಎಂಬುದಾಗಿ ಜರ್ದಾರಿ ತಿಳಿಸಿದರು ಎಂದು ಕೃಷ್ಣ ವಿವರಿಸಿದರು.</p>.<p>ಕಾಶ್ಮೀರ, ಸಿಯಾಚಿನ್ ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಎಲ್ಲ ವಿವಾದಗಳನ್ನು ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಜರ್ದಾರಿ ಸಭೆಯಲ್ಲಿ ಅಭಿಪ್ರಾಯ ಪಟ್ಟರು. ಈ ಎಲ್ಲ ವಿವಾದಗಳಿಗೆ ಸಂಬಂಧಿಸಿದಂತೆ ಹಂತಹಂತವಾಗಿ ಮುನ್ನಡೆದು ಉಭಯತ್ರರಿಗೆ ಒಪ್ಪಿಗೆಯಾಗುವ ಪರಿಹಾರಗಳನ್ನು ಹುಡುಕಬೇಕಾದ ಅಗತ್ಯವಿದೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆಂದು ಕೃಷ್ಣ ತಿಳಿಸಿದರು.</p>.<p>ಮಾತುಕತೆ ವೇಳೆ ಜರ್ದಾರಿ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಸಿಂಗ್ ಅವರಿಗೆ ಆಹ್ವಾನ ನೀಡಿದರು. ಈ ಆಹ್ವಾನ ಸ್ವೀಕರಿಸಿದ ಪ್ರಧಾನಿ ಸೂಕ್ತ ಸಮಯದಲ್ಲಿ ಭೇಟಿ ಕೊಡುವುದಾಗಿ ಭರವಸೆ ನೀಡಿದರು. <br /> ಪ್ರಧಾನಿ ಭೇಟಿ ದಿನಾಂಕ ಹಾಗೂ ಮಾಡಬೇಕಾದ ಸಿದ್ಧತೆ ಕುರಿತು ರಾಜತಾಂತ್ರಿಕ ಅಧಿಕಾರಿಗಳು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>