<p><strong>ಫರೂಕಾಬಾದ (ಉತ್ತರ ಪ್ರದೇಶ) (ಪಿಟಿಐ): </strong>ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಕೆಳ ನ್ಯಾಯಾಲಯವು `ಕ್ಲೀನ್ ಚಿಟ್' ನೀಡಿರುವುದನ್ನು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಪ್ರಶ್ನಿಸುವ ಮೂಲಕ ಹೊಸ ವಿವಾದದ ತಿದಿಯೊತ್ತಿದ್ದಾರೆ.<br /> <br /> ಮಂಗಳವಾರ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಖುರ್ಷಿದ್ ಅವರು `ಮ್ಯಾಜಿಸ್ಟ್ರೆಟ್ ನ್ಯಾಯಾಲಯವು ಅವರಿಗೆ ಸಮನ್ಸ್ ಕಳುಹಿಸಿಲ್ಲ... ಇದು ಸತ್ಯ... ಇದೊಂದು ರೀತಿ ನರ್ಸರಿ ವಿದ್ಯಾರ್ಥಿ ಉತ್ತಮ ಶ್ರೇಣಿ ಪಡೆದಂತಿದೆ. ನಾನೊಬ್ಬ ಡಾಕ್ಟರ್ ಎಂದು ಭಾವಿಸಿಕೊಂಡು ಆತ ಹೋದಲೆಲ್ಲಾ ಪಿಎಚ್ಡಿ ಪಡೆದಿರುವೆ ಎಂದು ಹೇಳಿಕೊಂಡಂತಿದೆ. ಇದು ಹೇಗೆ ಜರಗಿತು?' ಎಂದು ಪ್ರಶ್ನಿಸಿದರು.<br /> <br /> `ಗುಜರಾತ್ನಲ್ಲಿ ಗಲಭೆ ಸಂಭವಿಸಿದಾಗ ಅವರು (ಮೋದಿ) ಮುಖ್ಯಮಂತ್ರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 170 ಜನರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಮಾಯಾ ಕೊಡ್ನಾನಿ ಆ ಸಮಯದಲ್ಲಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು' ಎಂದು ಖುರ್ಷಿದ್ ಹೇಳಿದರು.<br /> <br /> ಕಳೆದ ತಿಂಗಳವಷ್ಟೇ ಮೋದಿ ಅವರನ್ನು `ಷಂಡ' ಎಂದು ಕರೆಯುವ ಮೂಲಕ ಖುರ್ಷಿದ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೆಂಗಣ್ಣಿಗೆ ಗುರಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫರೂಕಾಬಾದ (ಉತ್ತರ ಪ್ರದೇಶ) (ಪಿಟಿಐ): </strong>ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಕೆಳ ನ್ಯಾಯಾಲಯವು `ಕ್ಲೀನ್ ಚಿಟ್' ನೀಡಿರುವುದನ್ನು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಪ್ರಶ್ನಿಸುವ ಮೂಲಕ ಹೊಸ ವಿವಾದದ ತಿದಿಯೊತ್ತಿದ್ದಾರೆ.<br /> <br /> ಮಂಗಳವಾರ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಖುರ್ಷಿದ್ ಅವರು `ಮ್ಯಾಜಿಸ್ಟ್ರೆಟ್ ನ್ಯಾಯಾಲಯವು ಅವರಿಗೆ ಸಮನ್ಸ್ ಕಳುಹಿಸಿಲ್ಲ... ಇದು ಸತ್ಯ... ಇದೊಂದು ರೀತಿ ನರ್ಸರಿ ವಿದ್ಯಾರ್ಥಿ ಉತ್ತಮ ಶ್ರೇಣಿ ಪಡೆದಂತಿದೆ. ನಾನೊಬ್ಬ ಡಾಕ್ಟರ್ ಎಂದು ಭಾವಿಸಿಕೊಂಡು ಆತ ಹೋದಲೆಲ್ಲಾ ಪಿಎಚ್ಡಿ ಪಡೆದಿರುವೆ ಎಂದು ಹೇಳಿಕೊಂಡಂತಿದೆ. ಇದು ಹೇಗೆ ಜರಗಿತು?' ಎಂದು ಪ್ರಶ್ನಿಸಿದರು.<br /> <br /> `ಗುಜರಾತ್ನಲ್ಲಿ ಗಲಭೆ ಸಂಭವಿಸಿದಾಗ ಅವರು (ಮೋದಿ) ಮುಖ್ಯಮಂತ್ರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 170 ಜನರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಮಾಯಾ ಕೊಡ್ನಾನಿ ಆ ಸಮಯದಲ್ಲಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು' ಎಂದು ಖುರ್ಷಿದ್ ಹೇಳಿದರು.<br /> <br /> ಕಳೆದ ತಿಂಗಳವಷ್ಟೇ ಮೋದಿ ಅವರನ್ನು `ಷಂಡ' ಎಂದು ಕರೆಯುವ ಮೂಲಕ ಖುರ್ಷಿದ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೆಂಗಣ್ಣಿಗೆ ಗುರಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>