<p><strong>ನವದೆಹಲಿ (ಪಿಟಿಐ):</strong> ರಾಜ್ಯದ 30ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಮಧ್ಯ ರೈಲ್ವೆ ವಲಯಕ್ಕೆ ಒಳಪಡುವ ಯಾದಗಿರಿಯಲ್ಲಿ ರೂ 7,500 ಕೋಟಿ ಮೊತ್ತದಲ್ಲಿ ರೈಲ್ವೆ ಬೋಗಿ ಘಟಕ ಆರಂಭಕ್ಕೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದೆ.<br /> <br /> ಮಾರ್ಗಗಳ ವಿದ್ಯುದೀಕರಣ, ಮೇಲ್ಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರೂ 70,759 ಕೋಟಿ ಮೊತ್ತದ ರೈಲ್ವೆ ಪೂರಕ ಬೇಡಿಕೆಗಳ ಅಂದಾಜು ಮಂಡಿಸಲಾಗಿದ್ದು, ಇದರಲ್ಲಿ ಯಾದಗಿರಿ ಯೋಜನೆಯ ಪ್ರಸ್ತಾಪವೂ ಸೇರಿದೆ.<br /> <br /> ತೆಲಂಗಾಣ ಮತ್ತಿತರ ವಿಷಯಗಳ ಕುರಿತು ವಿವಿಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ 2013–14ರ ಸಾಲಿನ ಸಾಲಿನ ಪೂರಕ ಬೇಡಿಕೆಗಳ ಅನುದಾನಕ್ಕೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ನೀಡಲಾಯಿತು.<br /> <br /> ಪಶ್ಚಿಮ ಬಂಗಾಳದ ಕಾಟ್ವಾ ಅಜಿಮ್ಗಂಜ್, ನಲ್ಹತಿ ಅಜಿಮ್ಗಂಜ್ ಹಾಗೂ ತಿಲ್ದಂಗ ನವ ಫರಕ್ಕ ಬೈಪಾಸ್ ಮಾರ್ಗಗಳ ವಿದ್ಯುದೀಕರಣಕ್ಕೆ ಪ್ರಸ್ತಾಪ ಮಾಡಲಾಗಿದೆ. ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಕೋಲಾರಕ್ಕೆ ರೈಲ್ವೆ ಬೋಗಿ ಘಟಕ ಮಂಜೂರು ಮಾಡಿದ್ದು, ಇದೀಗ ಯಾದಗಿರಿಗೂ ಈ ಅವಕಾಶ ಸಿಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ರಾಜ್ಯದ 30ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಮಧ್ಯ ರೈಲ್ವೆ ವಲಯಕ್ಕೆ ಒಳಪಡುವ ಯಾದಗಿರಿಯಲ್ಲಿ ರೂ 7,500 ಕೋಟಿ ಮೊತ್ತದಲ್ಲಿ ರೈಲ್ವೆ ಬೋಗಿ ಘಟಕ ಆರಂಭಕ್ಕೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದೆ.<br /> <br /> ಮಾರ್ಗಗಳ ವಿದ್ಯುದೀಕರಣ, ಮೇಲ್ಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರೂ 70,759 ಕೋಟಿ ಮೊತ್ತದ ರೈಲ್ವೆ ಪೂರಕ ಬೇಡಿಕೆಗಳ ಅಂದಾಜು ಮಂಡಿಸಲಾಗಿದ್ದು, ಇದರಲ್ಲಿ ಯಾದಗಿರಿ ಯೋಜನೆಯ ಪ್ರಸ್ತಾಪವೂ ಸೇರಿದೆ.<br /> <br /> ತೆಲಂಗಾಣ ಮತ್ತಿತರ ವಿಷಯಗಳ ಕುರಿತು ವಿವಿಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ 2013–14ರ ಸಾಲಿನ ಸಾಲಿನ ಪೂರಕ ಬೇಡಿಕೆಗಳ ಅನುದಾನಕ್ಕೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ನೀಡಲಾಯಿತು.<br /> <br /> ಪಶ್ಚಿಮ ಬಂಗಾಳದ ಕಾಟ್ವಾ ಅಜಿಮ್ಗಂಜ್, ನಲ್ಹತಿ ಅಜಿಮ್ಗಂಜ್ ಹಾಗೂ ತಿಲ್ದಂಗ ನವ ಫರಕ್ಕ ಬೈಪಾಸ್ ಮಾರ್ಗಗಳ ವಿದ್ಯುದೀಕರಣಕ್ಕೆ ಪ್ರಸ್ತಾಪ ಮಾಡಲಾಗಿದೆ. ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಕೋಲಾರಕ್ಕೆ ರೈಲ್ವೆ ಬೋಗಿ ಘಟಕ ಮಂಜೂರು ಮಾಡಿದ್ದು, ಇದೀಗ ಯಾದಗಿರಿಗೂ ಈ ಅವಕಾಶ ಸಿಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>