<p><strong>ನವದೆಹಲಿ: </strong>ಕಪ್ಪು ಹಣದ ವಿರುದ್ಧ `ರಣ ಕಹಳೆ~ ಮೊಳಗಿಸಿರುವ ಯೋಗ ಗುರು ಬಾಬಾ ರಾಂದೇವ್ ಸಹಸ್ರಾರು ಶಿಷ್ಯರ ಸಮ್ಮುಖದಲ್ಲಿ ಶನಿವಾರ ಬೆಳಗಿನ ಜಾವ ರಾಮಲೀಲಾ ಮೈದಾನದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಯೋಗ-ಭಜನೆ ನಡುವೆ ಶುರುವಾದ ಸತ್ಯಾಗ್ರಹದಲ್ಲಿ ಎಲ್ಲ ಧರ್ಮಗಳ ಮುಖಂಡರು ಕಾಣಿಸಿಕೊಳ್ಳುವುದರೊಂದಿಗೆ ಇದು ಯಾವುದೋ ಒಂದು ಧರ್ಮದ `ಅಜೆಂಡಾ~ ಅಲ್ಲ ಎಂಬ ಸಂದೇಶ ರವಾನಿಸಲಾಯಿತು.<br /> <br /> ಬೆಳಗಿನ ಜಾವ 4.30ಕ್ಕೆ ರಾಮಲೀಲಾ ಮೈದಾನಕ್ಕೆ ಆಗಮಿಸಿದ ಬಾಬಾ ಅವರಿಗೆ ಶಿಷ್ಯರು ಅದ್ದೂರಿ ಸ್ವಾಗತ ನೀಡಿದರು. ಕಪ್ಪು ಹಣದ ವಿರುದ್ಧದ ಸಮರಕ್ಕೆ ತುದಿಗಾಲಲ್ಲಿ ನಿಂತಿದ್ದ ಶಿಷ್ಯರನ್ನು ಉದ್ದೇಶಿಸಿ ಮಾತನಾಡಿದ ರಾಂದೇವ್, `ಜೀವನದಲ್ಲಿ ಯಾವುದೂ ಅಸಾಧ್ಯ ಅಲ್ಲ. ಎಲ್ಲವೂ ಸಾಧ್ಯ. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಯಾವ ಶಕ್ತಿಯೂ ನಮ್ಮನ್ನು ಸೋಲಿಸಲಾಗದು~ ಎಂದು ಗುಡುಗಿದರು.<br /> <br /> `ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತರಬೇಕು. ಕಪ್ಪು ಹಣ ಹೊಂದಿರುವವರನ್ನು ವಿಚಾರಣೆಗೆ ಗುರಿಪಡಿಸಬೇಕು. ಈ ಉದ್ದೇಶಕ್ಕಾಗಿ `ಫಾಸ್ಟ್ ಟ್ರ್ಯಾಕ್ ಕೋರ್ಟ್~ಗಳನ್ನು ತೆರೆಯಬೇಕು ಮೊದಲಾದ ಬೇಡಿಕೆಗಳು ಈಡೇರುವವರೆಗೆ ಚಳವಳಿ ನಿಲ್ಲದು~ ಎಂದು ಬಾಬಾ ಘೋಷಿಸಿದರು. ಕಾರಣವೇ ಇಲ್ಲದೆ ಅನಗತ್ಯವಾಗಿ ತಮ್ಮನ್ನು ಟೀಕಿಸುತ್ತಿರುವವರಿಗೆ ಬಾಬಾ ತಿರುಗೇಟು ಕೊಟ್ಟರು.<br /> <br /> ಹಿಂದು ಸನ್ಯಾಸಿಗಳಾದ ಸಾಧ್ವಿ ರಿತಂಬರಾ, ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಮುಸ್ಲಿಂ- ಕ್ರಿಶ್ಚಿಯನ್ ಧಾರ್ಮಿಕ ಮುಖಂಡರು ವೇದಿಕೆಯ ಮೇಲೆ ಬಾಬಾ ಅವರ ಜತೆ ಕಾಣಿಸಿಕೊಂಡರು.ಎಲ್ಲ ಧರ್ಮಗಳ ಮುಖ್ಯಸ್ಥರನ್ನು ಶಿಷ್ಯರಿಗೆ ಪರಿಚಯಿಸುವ ಮೂಲಕ ರಾಂದೇವ್ ತಮ್ಮ ಚಳವಳಿ ಹಿಂದೆ ಆರ್ಎಸ್ಎಸ್- ಸಂಘ ಪರಿವಾರ ಇಲ್ಲ ಎಂಬುದನ್ನು ನಿರೂಪಿಸಲು ಪ್ರಯತ್ನಿಸಿದರು.<br /> <br /> ಯೋಗ- ಭಜನೆ- ಪದಗಳ ನಡು ನಡುವೆ ತಮ್ಮ ಎಂದಿನ ಹಾಸ್ಯ ಬೆರೆಸಿದ ದಾಟಿಯಲ್ಲಿ ಮಾತನಾಡಿದ ಬಾಬಾ, `ಈ ಉಪವಾಸ ಸತ್ಯಾಗ್ರಹ ನಮ್ಮ ಸಹೋದರ- ಸಹೋದರಿಯರಿಗೆ ಆರೋಗ್ಯ ತಂದುಕೊಡುವ ಜತೆಗೆ ರಾಷ್ಟ್ರಕ್ಕೆ ಸಂಪತ್ತು ಬರಲಿದೆ ಎಂದರು.<br /> <br /> ಶಿಷ್ಯರೊಬ್ಬರಿಂದ 11 ಲಕ್ಷದ ಚೆಕ್ ಸ್ವೀಕರಿಸಿದ ಬಾಬಾ, `ಈ ಫೋಟೋ ತೆಗೆದುಕೊಳ್ಳಿ. ಇದು ಕಪ್ಪು ಹಣವಲ್ಲ~ ಎಂದು ಹಾಸ್ಯದ ಮೂಲಕ ಟೀಕಾಕಾರರಿಗೆ ಚುಚ್ಚಿದರು. ಚಳವಳಿಗೆ ರಾಜಕೀಯ ಮುಖಂಡರು ಬೆಂಬಲ ಸೂಚಿಸಬಹುದು. ಭಾಷಣ ಮಾಡಲು ಅವಕಾಶವಿಲ್ಲ. ಭಾಷಣಕ್ಕೆ ಅವಕಾಶ ಕೊಟ್ಟರೆ ವಿವಾದ ಸೃಷ್ಟಿಯಾಗುತ್ತದೆ ಎಂದು ಸಲಹೆ ಮಾಡಿದರು.<br /> <br /> `ಕಪ್ಪು ಹಣದ ವಿರುದ್ಧ ಸಮರ ಸಾರುವ ಮೂಲಕ ದೇಶವನ್ನು ಎಚ್ಚರಗೊಳಿಸಿದ್ದೇವೆ. ಈಗಾಗಲೇ 55 ಲಕ್ಷ ಕರೆಗಳು ಬಂದಿವೆ. ಇದು ಒಂದು ಕೋಟಿ ಮೀರಬಹುದು. ತಮ್ಮ ಹೋರಾಟಕ್ಕೆ ಜನ ಕೊಡುತ್ತಿರುವ ಬೆಂಬಲಕ್ಕೆ ಇದು ಸಾಕ್ಷಿ~ ಎಂದು ಸ್ಪಷ್ಟಪಡಿಸಿದರು.<br /> <br /> ಸತ್ಯಾಗ್ರಹ ಬೆಂಬಲಿಸಿದ ಸಾಧು- ಸಂತರು ಯೋಗ ಗುರುಗಳನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮೇಲೆ ಮುಗಿಬಿದ್ದರು. ಅತ್ಯಂತ ಕೆಟ್ಟ ರಾಜಕೀಯ ಭಾಷೆ ಬಳಸಿ ಸಿಂಗ್ ಅವರ ಮೇಲೆ `ವಾಗ್ದಾಳಿ~ ನಡೆಸಿದರು.<br /> <br /> ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ರಾಂದೇವ್ `ಯಾರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದು ಬೇಡ. ನಮ್ಮ ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಅಲ್ಲ~ ಎಂದು ಕಿವಿ ಮಾತು ಹೇಳಿದರು.<br /> <br /> ಗುರೂಜಿ ಮಾತು ಕೇಳಲು ರಾಜಧಾನಿಯ ಜನ ಬೆಳಗಿನ ಜಾವದಿಂದಲೇ ರಾಮಲೀಲಾಕ್ಕೆ ಆಗಮಿಸುತ್ತಿದ್ದರು. ಭಾಷಣ ಕೇಳಿದ ಬಳಿಕ ಬಹಳಷ್ಟು ಮಂದಿ ಹಿಂತಿರುಗುತ್ತಿದ್ದರು. ಉತ್ತರದಿಂದ ದಕ್ಷಿಣದವರೆಗೆ ಎಲ್ಲ ರಾಜ್ಯಗಳ ಪ್ರತಿನಿಧಿಗಳು ರಾಮಲೀಲಾಕ್ಕೆ ಬಂದಿದ್ದಾರೆ, ಬಾಬಾ ಕರೆಗೆ ಸ್ಪಂದಿಸಿದವರಲ್ಲಿ ಮಹಿಳೆಯರೇ ಹೆಚ್ಚು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕಪ್ಪು ಹಣದ ವಿರುದ್ಧ `ರಣ ಕಹಳೆ~ ಮೊಳಗಿಸಿರುವ ಯೋಗ ಗುರು ಬಾಬಾ ರಾಂದೇವ್ ಸಹಸ್ರಾರು ಶಿಷ್ಯರ ಸಮ್ಮುಖದಲ್ಲಿ ಶನಿವಾರ ಬೆಳಗಿನ ಜಾವ ರಾಮಲೀಲಾ ಮೈದಾನದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಯೋಗ-ಭಜನೆ ನಡುವೆ ಶುರುವಾದ ಸತ್ಯಾಗ್ರಹದಲ್ಲಿ ಎಲ್ಲ ಧರ್ಮಗಳ ಮುಖಂಡರು ಕಾಣಿಸಿಕೊಳ್ಳುವುದರೊಂದಿಗೆ ಇದು ಯಾವುದೋ ಒಂದು ಧರ್ಮದ `ಅಜೆಂಡಾ~ ಅಲ್ಲ ಎಂಬ ಸಂದೇಶ ರವಾನಿಸಲಾಯಿತು.<br /> <br /> ಬೆಳಗಿನ ಜಾವ 4.30ಕ್ಕೆ ರಾಮಲೀಲಾ ಮೈದಾನಕ್ಕೆ ಆಗಮಿಸಿದ ಬಾಬಾ ಅವರಿಗೆ ಶಿಷ್ಯರು ಅದ್ದೂರಿ ಸ್ವಾಗತ ನೀಡಿದರು. ಕಪ್ಪು ಹಣದ ವಿರುದ್ಧದ ಸಮರಕ್ಕೆ ತುದಿಗಾಲಲ್ಲಿ ನಿಂತಿದ್ದ ಶಿಷ್ಯರನ್ನು ಉದ್ದೇಶಿಸಿ ಮಾತನಾಡಿದ ರಾಂದೇವ್, `ಜೀವನದಲ್ಲಿ ಯಾವುದೂ ಅಸಾಧ್ಯ ಅಲ್ಲ. ಎಲ್ಲವೂ ಸಾಧ್ಯ. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಯಾವ ಶಕ್ತಿಯೂ ನಮ್ಮನ್ನು ಸೋಲಿಸಲಾಗದು~ ಎಂದು ಗುಡುಗಿದರು.<br /> <br /> `ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತರಬೇಕು. ಕಪ್ಪು ಹಣ ಹೊಂದಿರುವವರನ್ನು ವಿಚಾರಣೆಗೆ ಗುರಿಪಡಿಸಬೇಕು. ಈ ಉದ್ದೇಶಕ್ಕಾಗಿ `ಫಾಸ್ಟ್ ಟ್ರ್ಯಾಕ್ ಕೋರ್ಟ್~ಗಳನ್ನು ತೆರೆಯಬೇಕು ಮೊದಲಾದ ಬೇಡಿಕೆಗಳು ಈಡೇರುವವರೆಗೆ ಚಳವಳಿ ನಿಲ್ಲದು~ ಎಂದು ಬಾಬಾ ಘೋಷಿಸಿದರು. ಕಾರಣವೇ ಇಲ್ಲದೆ ಅನಗತ್ಯವಾಗಿ ತಮ್ಮನ್ನು ಟೀಕಿಸುತ್ತಿರುವವರಿಗೆ ಬಾಬಾ ತಿರುಗೇಟು ಕೊಟ್ಟರು.<br /> <br /> ಹಿಂದು ಸನ್ಯಾಸಿಗಳಾದ ಸಾಧ್ವಿ ರಿತಂಬರಾ, ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಮುಸ್ಲಿಂ- ಕ್ರಿಶ್ಚಿಯನ್ ಧಾರ್ಮಿಕ ಮುಖಂಡರು ವೇದಿಕೆಯ ಮೇಲೆ ಬಾಬಾ ಅವರ ಜತೆ ಕಾಣಿಸಿಕೊಂಡರು.ಎಲ್ಲ ಧರ್ಮಗಳ ಮುಖ್ಯಸ್ಥರನ್ನು ಶಿಷ್ಯರಿಗೆ ಪರಿಚಯಿಸುವ ಮೂಲಕ ರಾಂದೇವ್ ತಮ್ಮ ಚಳವಳಿ ಹಿಂದೆ ಆರ್ಎಸ್ಎಸ್- ಸಂಘ ಪರಿವಾರ ಇಲ್ಲ ಎಂಬುದನ್ನು ನಿರೂಪಿಸಲು ಪ್ರಯತ್ನಿಸಿದರು.<br /> <br /> ಯೋಗ- ಭಜನೆ- ಪದಗಳ ನಡು ನಡುವೆ ತಮ್ಮ ಎಂದಿನ ಹಾಸ್ಯ ಬೆರೆಸಿದ ದಾಟಿಯಲ್ಲಿ ಮಾತನಾಡಿದ ಬಾಬಾ, `ಈ ಉಪವಾಸ ಸತ್ಯಾಗ್ರಹ ನಮ್ಮ ಸಹೋದರ- ಸಹೋದರಿಯರಿಗೆ ಆರೋಗ್ಯ ತಂದುಕೊಡುವ ಜತೆಗೆ ರಾಷ್ಟ್ರಕ್ಕೆ ಸಂಪತ್ತು ಬರಲಿದೆ ಎಂದರು.<br /> <br /> ಶಿಷ್ಯರೊಬ್ಬರಿಂದ 11 ಲಕ್ಷದ ಚೆಕ್ ಸ್ವೀಕರಿಸಿದ ಬಾಬಾ, `ಈ ಫೋಟೋ ತೆಗೆದುಕೊಳ್ಳಿ. ಇದು ಕಪ್ಪು ಹಣವಲ್ಲ~ ಎಂದು ಹಾಸ್ಯದ ಮೂಲಕ ಟೀಕಾಕಾರರಿಗೆ ಚುಚ್ಚಿದರು. ಚಳವಳಿಗೆ ರಾಜಕೀಯ ಮುಖಂಡರು ಬೆಂಬಲ ಸೂಚಿಸಬಹುದು. ಭಾಷಣ ಮಾಡಲು ಅವಕಾಶವಿಲ್ಲ. ಭಾಷಣಕ್ಕೆ ಅವಕಾಶ ಕೊಟ್ಟರೆ ವಿವಾದ ಸೃಷ್ಟಿಯಾಗುತ್ತದೆ ಎಂದು ಸಲಹೆ ಮಾಡಿದರು.<br /> <br /> `ಕಪ್ಪು ಹಣದ ವಿರುದ್ಧ ಸಮರ ಸಾರುವ ಮೂಲಕ ದೇಶವನ್ನು ಎಚ್ಚರಗೊಳಿಸಿದ್ದೇವೆ. ಈಗಾಗಲೇ 55 ಲಕ್ಷ ಕರೆಗಳು ಬಂದಿವೆ. ಇದು ಒಂದು ಕೋಟಿ ಮೀರಬಹುದು. ತಮ್ಮ ಹೋರಾಟಕ್ಕೆ ಜನ ಕೊಡುತ್ತಿರುವ ಬೆಂಬಲಕ್ಕೆ ಇದು ಸಾಕ್ಷಿ~ ಎಂದು ಸ್ಪಷ್ಟಪಡಿಸಿದರು.<br /> <br /> ಸತ್ಯಾಗ್ರಹ ಬೆಂಬಲಿಸಿದ ಸಾಧು- ಸಂತರು ಯೋಗ ಗುರುಗಳನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮೇಲೆ ಮುಗಿಬಿದ್ದರು. ಅತ್ಯಂತ ಕೆಟ್ಟ ರಾಜಕೀಯ ಭಾಷೆ ಬಳಸಿ ಸಿಂಗ್ ಅವರ ಮೇಲೆ `ವಾಗ್ದಾಳಿ~ ನಡೆಸಿದರು.<br /> <br /> ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ರಾಂದೇವ್ `ಯಾರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದು ಬೇಡ. ನಮ್ಮ ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಅಲ್ಲ~ ಎಂದು ಕಿವಿ ಮಾತು ಹೇಳಿದರು.<br /> <br /> ಗುರೂಜಿ ಮಾತು ಕೇಳಲು ರಾಜಧಾನಿಯ ಜನ ಬೆಳಗಿನ ಜಾವದಿಂದಲೇ ರಾಮಲೀಲಾಕ್ಕೆ ಆಗಮಿಸುತ್ತಿದ್ದರು. ಭಾಷಣ ಕೇಳಿದ ಬಳಿಕ ಬಹಳಷ್ಟು ಮಂದಿ ಹಿಂತಿರುಗುತ್ತಿದ್ದರು. ಉತ್ತರದಿಂದ ದಕ್ಷಿಣದವರೆಗೆ ಎಲ್ಲ ರಾಜ್ಯಗಳ ಪ್ರತಿನಿಧಿಗಳು ರಾಮಲೀಲಾಕ್ಕೆ ಬಂದಿದ್ದಾರೆ, ಬಾಬಾ ಕರೆಗೆ ಸ್ಪಂದಿಸಿದವರಲ್ಲಿ ಮಹಿಳೆಯರೇ ಹೆಚ್ಚು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>