ರಾಷ್ಟ್ರಪತಿ ಭವನದಲ್ಲಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿದ ನಾಗಂ ಜನಾರ್ದನ ರೆಡ್ಡಿ ನೇತೃತ್ವದ ನಿಯೋಗವು ತೆಲಂಗಾಣ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿತು. ಗೃಹ ಸಚಿವ ಪಿ. ಚಿದಂಬರಂ ಅವರು ನೀಡಿದ ಹೇಳಿಕೆಯ ಪ್ರಕಾರ ಕೇಂದ್ರ ಸರ್ಕಾರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾಗಿ ನಿಯೋಗದ ನಾಯಕರು ಹೇಳಿದರು. 2 ವರ್ಷಗಳ ಹಿಂದೆ ರಾಷ್ಟ್ರಪತಿ ಅವರು ಮಾಡಿದ ಭಾಷಣದಲ್ಲೂ ಈ ವಿಷಯದ ಪ್ರಸ್ತಾವ ಇದೆ ಎಂಬುದನ್ನು ನಿಯೋಗವು ಗಮನಕ್ಕೆ ತಂದಿತು.