<p><br /> ನವದೆಹಲಿ (ಪಿಟಿಐ): ಅಶಾಂತಿ ಪೀಡಿತ ಲಿಬಿಯಾದಿಂದ ಮತ್ತೆ 557 ಭಾರತೀಯರು ಎರಡು ಏರ್ ಇಂಡಿಯಾ ವಿಶೇಷ ವಿಮಾನಗಳಲ್ಲಿ ಮಂಗಳವಾರ ಮುಂಜಾನೆ ಸ್ವದೇಶಕ್ಕೆ ಮರಳಿದ್ದಾರೆ. ಲಿಬಿಯಾದಿಂದ ಮರಳಿದ ಭಾರತೀಯರ ಒಟ್ಟು ಸಂಖ್ಯೆ 1,083ಕ್ಕೆ ಏರಿದೆ. <br /> <br /> 331 ಭಾರತೀಯರಿದ್ದ ಏರ್ ಇಂಡಿಯಾದ ನಾಲ್ಕನೇ ವಿಮಾನ ಮಂಗಳವಾರ ಮುಂಜಾನೆ 4.30ಕ್ಕೆ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.<br /> <br /> ‘ಏರ್ ಇಂಡಿಯಾದ ಮೂರನೇ ವಿಮಾನ ಸೋಮವಾರ ತಡರಾತ್ರಿ ಆಗಮಿಸಿತ್ತು. ಅದರಲ್ಲಿ 226 ಭಾರತೀಯರಿದ್ದರು’ ಎಂದು ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ಹೇಳಿದ್ದಾರೆ. <br /> <br /> ಭಾರತೀಯರನ್ನು ಸ್ವದೇಶಕ್ಕೆ ಕರೆತರುವುದಕ್ಕಾಗಿ ಸೋಮವಾರ ಮತ್ತೆ 3 ವಿಮಾನಗಳು ಟ್ರಿಪೊಲಿಗೆ ತೆರಳಿವೆ.<br /> ‘ಲಿಬಿಯಾದಲ್ಲಿರುವ ಒಟ್ಟು 18,000 ಭಾರತೀಯರಲ್ಲಿ 10,000 ಜನರು ಇನ್ನೂ ಅಲ್ಲೇ ಇದ್ದಾರೆ’ ಎಂದು ರವಿ ಹೇಳಿದ್ದಾರೆ. ಮೊದಲ ಎರಡು ಏರ್ ಇಂಡಿಯಾ ವಿಮಾನಗಳು 526 ಭಾರತೀಯರನ್ನು ಕರೆ ತಂದಿದ್ದವು.<br /> <br /> <strong>‘ಸ್ಥಳಾಂತರ ಕಾರ್ಯ ಸರಾಗ’</strong><br /> ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಲಿಬಿಯಾದಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯ ಸರಾಗವಾಗಿ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಮಂಗಳವಾರ ಹೇಳಿದ್ದಾರೆ.<br /> <br /> ‘ಲಿಬಿಯಾದಲ್ಲಿರುವ ಭಾರತೀಯರ ಸ್ಥಳಾಂತರ ಕಾರ್ಯ ಯಾವುದೇ ಅಡ್ಡಿಗಳಿಲ್ಲದೆ ನಡೆಯುತ್ತಿದ್ದು, ಬುಧವಾರದ ವೇಳೆಗೆ ಸುಮಾರು 3,500 ಭಾರತೀಯರು ಲಿಬಿಯಾದಿಂದ ಸ್ವದೇಶಕ್ಕೆ ಮರಳಲಿದ್ದಾರೆ’ ಎಂದು ಎಸ್.ಎಂ.ಕೃಷ್ಣ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ನವದೆಹಲಿ (ಪಿಟಿಐ): ಅಶಾಂತಿ ಪೀಡಿತ ಲಿಬಿಯಾದಿಂದ ಮತ್ತೆ 557 ಭಾರತೀಯರು ಎರಡು ಏರ್ ಇಂಡಿಯಾ ವಿಶೇಷ ವಿಮಾನಗಳಲ್ಲಿ ಮಂಗಳವಾರ ಮುಂಜಾನೆ ಸ್ವದೇಶಕ್ಕೆ ಮರಳಿದ್ದಾರೆ. ಲಿಬಿಯಾದಿಂದ ಮರಳಿದ ಭಾರತೀಯರ ಒಟ್ಟು ಸಂಖ್ಯೆ 1,083ಕ್ಕೆ ಏರಿದೆ. <br /> <br /> 331 ಭಾರತೀಯರಿದ್ದ ಏರ್ ಇಂಡಿಯಾದ ನಾಲ್ಕನೇ ವಿಮಾನ ಮಂಗಳವಾರ ಮುಂಜಾನೆ 4.30ಕ್ಕೆ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.<br /> <br /> ‘ಏರ್ ಇಂಡಿಯಾದ ಮೂರನೇ ವಿಮಾನ ಸೋಮವಾರ ತಡರಾತ್ರಿ ಆಗಮಿಸಿತ್ತು. ಅದರಲ್ಲಿ 226 ಭಾರತೀಯರಿದ್ದರು’ ಎಂದು ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ಹೇಳಿದ್ದಾರೆ. <br /> <br /> ಭಾರತೀಯರನ್ನು ಸ್ವದೇಶಕ್ಕೆ ಕರೆತರುವುದಕ್ಕಾಗಿ ಸೋಮವಾರ ಮತ್ತೆ 3 ವಿಮಾನಗಳು ಟ್ರಿಪೊಲಿಗೆ ತೆರಳಿವೆ.<br /> ‘ಲಿಬಿಯಾದಲ್ಲಿರುವ ಒಟ್ಟು 18,000 ಭಾರತೀಯರಲ್ಲಿ 10,000 ಜನರು ಇನ್ನೂ ಅಲ್ಲೇ ಇದ್ದಾರೆ’ ಎಂದು ರವಿ ಹೇಳಿದ್ದಾರೆ. ಮೊದಲ ಎರಡು ಏರ್ ಇಂಡಿಯಾ ವಿಮಾನಗಳು 526 ಭಾರತೀಯರನ್ನು ಕರೆ ತಂದಿದ್ದವು.<br /> <br /> <strong>‘ಸ್ಥಳಾಂತರ ಕಾರ್ಯ ಸರಾಗ’</strong><br /> ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಲಿಬಿಯಾದಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯ ಸರಾಗವಾಗಿ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಮಂಗಳವಾರ ಹೇಳಿದ್ದಾರೆ.<br /> <br /> ‘ಲಿಬಿಯಾದಲ್ಲಿರುವ ಭಾರತೀಯರ ಸ್ಥಳಾಂತರ ಕಾರ್ಯ ಯಾವುದೇ ಅಡ್ಡಿಗಳಿಲ್ಲದೆ ನಡೆಯುತ್ತಿದ್ದು, ಬುಧವಾರದ ವೇಳೆಗೆ ಸುಮಾರು 3,500 ಭಾರತೀಯರು ಲಿಬಿಯಾದಿಂದ ಸ್ವದೇಶಕ್ಕೆ ಮರಳಲಿದ್ದಾರೆ’ ಎಂದು ಎಸ್.ಎಂ.ಕೃಷ್ಣ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>