‘ಕಾಂಗ್ರೆಸ್ ಪಕ್ಷದ 125 ವರ್ಷಗಳ ಅರ್ಪಣೆ ಮತ್ತು ಸೇವೆ’ ಎಂಬ ಆಶಯದೊಂದಿಗೆ ಈ ಸಭೆ ನಡೆಯಲಿದ್ದರೂ, ಇಷ್ಟು ವರ್ಷದಲ್ಲಿ ಕಂಡರಿಯದಂತಹ ವಿವಾದಕ್ಕೆ ಪಕ್ಷ ಇಂದು ಸಿಕ್ಕಿರುವುದರಿಂದ ಈ ವಿವಾದಗಳಿಂದ ಪಾರಾಗುವ ಬಗೆಯನ್ನು ಚಿಂತಿಸುವುದೇ ಈ ಮಹಾ ಅಧಿವೇಶನದ ಪ್ರಮುಖ ಉದ್ದೇಶವಾಗಲಿದೆ. ಟೆಲಿಕಾಂ ಹಗರಣ, ಕಾಮನ್ವೆಲ್ತ್ ಅಕ್ರಮ, ರಾಡಿಯಾ ದೂರವಾಣಿ ಸಂಭಾಷಣೆ, ರಾಹುಲ್ ಗಾಂಧಿ ಹಿಂದೂ ಸಂಘಟನೆಗಳ ಬಗ್ಗೆ ಅಮೆರಿಕದ ರಾಯಭಾರಿ ಜತೆಗೆ ಆಡಿದ ಮಾತುಗಳು ಸಹಿತ ಇತರ ವಿವಾದಗಳು, ಹಗರಣಗಳಿಂದ ಪಕ್ಷದ ಮಾನ ಕಾಪಾಡುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುವ ಸಾಧ್ಯತೆ ಇದೆ.