ತಮ್ಮ ಸರ್ಕಾರ ಸೇರಿದಂತೆ ಹಿಂದಿನ ಕಾಂಗ್ರೆಸ್ ಸರ್ಕಾರ, ಬಿಜೆಪಿ ನಿಯಂತ್ರಣದ ದೆಹಲಿ ಮಹಾನಗರ ಪಾಲಿಕೆ ಯಾವುದೇ ಆದರೂ ಭ್ರಷ್ಟರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ‘ತಮ್ಮ ಪಕ್ಷ ಅಥವಾ ಸರ್ಕಾರಕ್ಕೆ ಅಲ್ಲ; ಬದಲಾಗಿ ದೆಹಲಿ ಎದುರಿಸುತ್ತಿರುವ ಸಮಸ್ಯೆಗಳಿಗಾಗಿ ಬೆಂಬಲ ಕೋರುತ್ತಿರುವೆ’ ಎಂದು ನುಡಿದರು.