‘ಈ ಋತುವಿನ ಮೊದಲ ಎರಡು ಸ್ಪರ್ಧೆಗಳನ್ನು ಪಶ್ಚಿಮ ಕರಾವಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕೇರಳದಲ್ಲಿ ಯಶಸ್ಸು ಕಂಡ ನಂತರ ಮಂಗಳೂರಿಗೆ ಕಾಲಿಟ್ಟಿದ್ದು ಮೂರನೇ ಸ್ಪರ್ಧೆಗಾಗಿ ಪೂರ್ವ ಕರಾವಳಿಯತ್ತ ಸಾಗಲಿದ್ದೇವೆ’ ಎಂದು ಫೆಡರೇಷನ್ ಅಧ್ಯಕ್ಷ ಅರುಣ್ ವಾಸು ತಿಳಿಸಿದ್ದಾರೆ. ಪುರುಷರ ವಿಭಾಗದ ರಮೇಶ್ ಬೂದಿಹಾಳ, ಹರೀಶ್ ಎಂ, ಶ್ರೀಕಾಂತ್ ಡಿ, ಮಣಿಕಂಠನ್ ಎಂ, ಮಹಿಳೆಯರ ವಿಭಾಗದಲ್ಲಿ ಕೋಮಲಿ ಮೂರ್ತಿ, ಸೃಷ್ಟಿ ಸೆಲ್ವಂ ಮತ್ತು ಸಂಧ್ಯಾ ಅರುಣ್ ಗಮನ ಸೆಳೆಯಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.