ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಪ್ರಸ್ತಾಪಿಸಲಾಗಿರುವ ಭಾರತೀಯ ಭಾಷೆಯ ಶ್ರೇಷ್ಠ ಸಾಹಿತ್ಯ ಕೃತಿಗೆ ವಾರ್ಷಿಕವಾಗಿ ಸರಸ್ವತಿ ಸಮ್ಮಾನ್ ಪುರಸ್ಕಾರ ನೀಡಲಾಗುತ್ತಿದ್ದು, ಈ ಸಲ ‘ರಾಮಾಯಣ ಮಹಾನ್ವೇಷಣಂ’ ಕೃತಿಗೆ ದೊರೆತಿದೆ.
ಕೃತಿಗಳು: ಮೊಯಿಲಿ ಅವರು ನಾಲ್ಕು ಕಾದಂಬರಿಗಳು, ಮೂರು ಕವನ ಸಂಕಲನಗಳು, ಹಲವು ನಾಟಕಗಳು ಹಾಗೂ ಪ್ರಬಂಧಗಳನ್ನು ಬರೆದಿದ್ದಾರೆ.
ಅವರ ಕನ್ನಡ ಕಾದಂಬರಿ ‘ಕೊಟ್ಟ’ ಹಾಗೂ ತುಳು ಕಾದಂಬರಿ ‘ತೆಂಬರೆ’ ಹಿಂದಿ, ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಗಳಿಗೆ ಅನುವಾದಗೊಂಡಿವೆ.