<p><strong>ಮುಂಬೈ (ಪಿಟಿಐ, ಐಎಎನ್ಎಸ್):</strong> ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಅಂತ್ಯಕ್ರಿಯೆ ಭಾನುವಾರ ನಡೆದ ಬಳಿಕ ಮುಂಬೈ ನಗರವು ಸೋಮವಾರ ಸಹಜ ಜನಜೀವನದತ್ತ ನಿಧಾನವಾಗಿ ಮರಳಿತು.<br /> <br /> ಈ ಮಧ್ಯೆ<strong> </strong>ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ಭಾನುವಾರ ನಡೆದ ಬಾಳಾ ಸಾಹೇಬ್ ಠಾಕ್ರೆ ಅವರ ಅಂತ್ಯಕ್ರಿಯೆ ಸ್ಥಳದಲ್ಲಿ, ಸೋಮವಾರ ಠಾಕ್ರೆ ಅವರ ಮಗ ಶಿವಸೇನೆ ಪಕ್ಷದ ಕಾರ್ಯಾಧ್ಯಕ್ಷ ಉದ್ದವ್ ಠಾಕ್ರೆ ತಂದೆಯ ಚಿತಾಭಸ್ಮವನ್ನು ಸಂಗ್ರಹಿಸಿಕೊಂಡರು. <br /> <br /> ಭಾನುವಾರ ನಡೆದ ಠಾಕ್ರೆ ಅವರ ಅಂತ್ಯಕ್ರಿಯೆ ಸಮಯದಲ್ಲಿ ಇಡೀ ಮುಂಬೈ ನಗರವು ಅಕ್ಷರಶಃ ಸ್ಥಬ್ಧಗೊಂಡಿತ್ತು. ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಠಾಕ್ರೆ ಅವರಿಗೆ ಗೌರವ ಸಲ್ಲಿಸಿದ್ದರು. <br /> <br /> ಸೋಮವಾರ ಎಂದಿನಂತೆ ಮುಂಬೈ ನಗರವು ತನ್ನ ಸಹಜಸ್ಥಿತಿಗೆ ಮರಳಿದ್ದು, ಸ್ಥಳೀಯ ಸಾರಿಗೆ ವ್ಯವಸ್ಥೆ ಸೇರಿದಂತೆ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳು ರಸ್ತೆಗಿಳಿದು ಸಂಚಾರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿವೆ. ಮಾರುಕಟ್ಟೆ ವ್ಯವಸ್ಥೆ ಕೂಡ ನಿಧಾನವಾಗಿ ಚುರುಕುಗೊಂಡಿದೆ.<br /> <br /> ದೀಪಾವಳಿ ಹಬ್ಬದಿಂದಾಗಿ ರಜೆ ಘೋಷಣೆಯಾಗಿದ್ದ ಶಾಲಾ - ಕಾಲೇಜುಗಳು ಮಂಗಳವಾರ ಎಂದಿನಂತೆ ಆರಂಭವಾಗಲಿವೆ. <br /> <br /> ಶಿವಸೇನೆ ನಗರದಲ್ಲಿ ಬಂದ್ಗೆ ಕರೆ ನೀಡಿಲ್ಲವಾದರೂ, ಸೋಮವಾರ ಠಾಕ್ರೆ ಗೌರವಾರ್ಥ ಬಂದ್ ಆಚರಿಸುವಂತೆ ಮಹಾರಾಷ್ಟ್ರ ಸಂಘಗಳ ಒಕ್ಕೂಟವು (ಫ್ಯಾಮ್) ತನ್ನ ಅಂಗ ಸಂಸ್ಥೆಗಳಿಗೆ ಸೂಚಿಸಿದೆ.<br /> <br /> ದೇಶದ ಹಣಕಾಸಿನ ಕೇಂದ್ರವಾಗಿರುವ ಮುಂಬೈ ನಗರದಲ್ಲಿ ಶನಿವಾರ ಮಧ್ಯಾಹ್ನ ಠಾಕ್ರೆ ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ ಎಲ್ಲ ವಾಣಿಜ್ಯ ಚಟುವಟಕೆಗಳು ಶನಿವಾರ ಮತ್ತು ಭಾನುವಾರ ಸ್ಥಗಿತಗೊಂಡಿದ್ದವು. ಎರಡು ದಿನ ಮುಂಬೈ ನಗರ ಮೌನಕ್ಕೆ ಜಾರಿತ್ತು. <br /> <br /> </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ, ಐಎಎನ್ಎಸ್):</strong> ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಅಂತ್ಯಕ್ರಿಯೆ ಭಾನುವಾರ ನಡೆದ ಬಳಿಕ ಮುಂಬೈ ನಗರವು ಸೋಮವಾರ ಸಹಜ ಜನಜೀವನದತ್ತ ನಿಧಾನವಾಗಿ ಮರಳಿತು.<br /> <br /> ಈ ಮಧ್ಯೆ<strong> </strong>ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ಭಾನುವಾರ ನಡೆದ ಬಾಳಾ ಸಾಹೇಬ್ ಠಾಕ್ರೆ ಅವರ ಅಂತ್ಯಕ್ರಿಯೆ ಸ್ಥಳದಲ್ಲಿ, ಸೋಮವಾರ ಠಾಕ್ರೆ ಅವರ ಮಗ ಶಿವಸೇನೆ ಪಕ್ಷದ ಕಾರ್ಯಾಧ್ಯಕ್ಷ ಉದ್ದವ್ ಠಾಕ್ರೆ ತಂದೆಯ ಚಿತಾಭಸ್ಮವನ್ನು ಸಂಗ್ರಹಿಸಿಕೊಂಡರು. <br /> <br /> ಭಾನುವಾರ ನಡೆದ ಠಾಕ್ರೆ ಅವರ ಅಂತ್ಯಕ್ರಿಯೆ ಸಮಯದಲ್ಲಿ ಇಡೀ ಮುಂಬೈ ನಗರವು ಅಕ್ಷರಶಃ ಸ್ಥಬ್ಧಗೊಂಡಿತ್ತು. ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಠಾಕ್ರೆ ಅವರಿಗೆ ಗೌರವ ಸಲ್ಲಿಸಿದ್ದರು. <br /> <br /> ಸೋಮವಾರ ಎಂದಿನಂತೆ ಮುಂಬೈ ನಗರವು ತನ್ನ ಸಹಜಸ್ಥಿತಿಗೆ ಮರಳಿದ್ದು, ಸ್ಥಳೀಯ ಸಾರಿಗೆ ವ್ಯವಸ್ಥೆ ಸೇರಿದಂತೆ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳು ರಸ್ತೆಗಿಳಿದು ಸಂಚಾರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿವೆ. ಮಾರುಕಟ್ಟೆ ವ್ಯವಸ್ಥೆ ಕೂಡ ನಿಧಾನವಾಗಿ ಚುರುಕುಗೊಂಡಿದೆ.<br /> <br /> ದೀಪಾವಳಿ ಹಬ್ಬದಿಂದಾಗಿ ರಜೆ ಘೋಷಣೆಯಾಗಿದ್ದ ಶಾಲಾ - ಕಾಲೇಜುಗಳು ಮಂಗಳವಾರ ಎಂದಿನಂತೆ ಆರಂಭವಾಗಲಿವೆ. <br /> <br /> ಶಿವಸೇನೆ ನಗರದಲ್ಲಿ ಬಂದ್ಗೆ ಕರೆ ನೀಡಿಲ್ಲವಾದರೂ, ಸೋಮವಾರ ಠಾಕ್ರೆ ಗೌರವಾರ್ಥ ಬಂದ್ ಆಚರಿಸುವಂತೆ ಮಹಾರಾಷ್ಟ್ರ ಸಂಘಗಳ ಒಕ್ಕೂಟವು (ಫ್ಯಾಮ್) ತನ್ನ ಅಂಗ ಸಂಸ್ಥೆಗಳಿಗೆ ಸೂಚಿಸಿದೆ.<br /> <br /> ದೇಶದ ಹಣಕಾಸಿನ ಕೇಂದ್ರವಾಗಿರುವ ಮುಂಬೈ ನಗರದಲ್ಲಿ ಶನಿವಾರ ಮಧ್ಯಾಹ್ನ ಠಾಕ್ರೆ ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ ಎಲ್ಲ ವಾಣಿಜ್ಯ ಚಟುವಟಕೆಗಳು ಶನಿವಾರ ಮತ್ತು ಭಾನುವಾರ ಸ್ಥಗಿತಗೊಂಡಿದ್ದವು. ಎರಡು ದಿನ ಮುಂಬೈ ನಗರ ಮೌನಕ್ಕೆ ಜಾರಿತ್ತು. <br /> <br /> </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>