<p><strong>ನವದೆಹಲಿ, (ಪಿಟಿಐ): </strong>ಆರ್ಥಿಕ ಮುಗ್ಗಟಿನ ನೆಪದಲ್ಲಿ ಸುರಕ್ಷಾ ಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ವಿಮಾನಯಾನ ಸಂಸ್ಥೆಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಸುಲಭ ಮಾರ್ಗಗಳನ್ನು ಅನುಸರಿಸುವ ಮೂಲಕ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.<br /> <br /> ಕಿಂಗ್ಫಿಷರ್ ಏರ್ಲೈನ್ಸ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಇದನ್ನು ತಿಳಿಸಿದ ನಿರ್ದೇಶನಾಲಯ, ನಿಗದಿತ ಸಮಯದೊಳಗೆ ಸುರಕ್ಷಾ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಂಸ್ಥೆಗಳಿಗೆ ಸೂಚಿಸಿತು. ಅಲ್ಲದೆ ಈ ಕುರಿತು ಯೋಜನಾ ವರದಿಯನ್ನು ಸೋಮವಾರದೊಳಗೆ ತಮಗೆ ಸಲ್ಲಿಸಬೇಕೆಂದೂ ಕಿಂಗ್ಫಿಶರ್ ಮತ್ತು ಏರ್ ಇಂಡಿಯಾಗೆ ತಿಳಿಸಿತು.<br /> <br /> ಇದಕ್ಕೆ ತಪ್ಪಿದಲ್ಲಿ ಕಿಂಗ್ಫಿಶರ್ನ ಪರವಾನಗಿ ರದ್ದತಿ ಮತ್ತು ಏರ್ ಇಂಡಿಯಾ ವಿಮಾನಗಳ ಕಾರ್ಯಾಚರಣೆಗೆ ಕಡಿವಾಣದಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತು. <br /> <br /> `ಈ ಸಂಸ್ಥೆಗಳನ್ನು ಮುಚ್ಚುವ ಭೀತಿ ಇಲ್ಲ. ಮಾತ್ರವಲ್ಲ ವಿಮಾನಗಳ ಪರವಾನಗಿಯನ್ನು ರದ್ದುಪಡಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿಲ್ಲ~ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ.ಭರತ್ ಭೂಷಣ್ ಇದೇ ವೇಳೆ ಸ್ಪಷ್ಟಪಡಿಸಿದರು.<br /> <br /> `ಎಲ್ಲ ವಿಮಾನಯಾನ ಸಂಸ್ಥೆಗಳೂ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ ಈ ಬಿಕ್ಕಟ್ಟು ಸುರಕ್ಷೆಗೆ ಅಡ್ಡಿ ಉಂಟುಮಾಡದಂತೆ ಮುನ್ನಡೆಸಿಕೊಂಡು ಹೋಗುವ ಸವಾಲನ್ನು ಸಂಸ್ಥೆಗಳು ಸ್ವೀಕರಿಸಬೇಕಾಗಿದೆ. ಅಲ್ಲದೆ ಈ ವಿಷಯದಲ್ಲಿ ಸುಲಭದ ಮಾರ್ಗಗಳನ್ನು ಯಾರೂ ಅನುಸರಿಸದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ~ ಎಂದು ಅವರು ಒತ್ತಿ ಹೇಳಿದರು.<br /> <br /> <strong>ವರದಿ ಸಲಹೆ: </strong>ವಿಮಾನಯಾನ ಕ್ಷೇತ್ರದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿದೆ ಎಂದು ಡಿಜಿಸಿಎ ಹಣಕಾಸು ನಿಗಾ ವಿಭಾಗದ ವರದಿ ತಿಳಿಸಿದ್ದು, ಇದರಿಂದ ಹೊರಬರಲು ಎಲ್ಲ ಸಂಸ್ಥೆಗಳೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದೆ. <br /> <br /> ನಾಗರಿಕ ವಿಮಾನಯಾನ ಸಚಿವಾಲಯದ ಸುರಕ್ಷಾ ಸಲಹಾ ಮಂಡಳಿಯ ಶಿಫಾರಸಿನ ಮೇರೆಗೆ, ಡಿಜಿಸಿಎ ಇದೇ ಮೊದಲ ಬಾರಿಗೆ ಇಂಥ ಹಣಕಾಸು ಪರಿಶೋಧನೆಗೆ ಮುಂದಾಗಿತ್ತು. ಕಿಂಗ್ಫಿಶರ್ ಮತ್ತು ಏರ್ಇಂಡಿಯಾವನ್ನು ಗಮನದಲ್ಲಿಟ್ಟುಕೊಂಡು ಡಿಜಿಸಿಎ ಈ ಎಚ್ಚರಿಕೆ ನೀಡಿದ್ದರೂ ಉಳಿದ ವಿಮಾನಯಾನ ಸಂಸ್ಥೆಗಳಿಗೂ ಇದು ಅನ್ವಯವಾಗಲಿದೆ ಎಂದು ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, (ಪಿಟಿಐ): </strong>ಆರ್ಥಿಕ ಮುಗ್ಗಟಿನ ನೆಪದಲ್ಲಿ ಸುರಕ್ಷಾ ಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ವಿಮಾನಯಾನ ಸಂಸ್ಥೆಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಸುಲಭ ಮಾರ್ಗಗಳನ್ನು ಅನುಸರಿಸುವ ಮೂಲಕ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.<br /> <br /> ಕಿಂಗ್ಫಿಷರ್ ಏರ್ಲೈನ್ಸ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಇದನ್ನು ತಿಳಿಸಿದ ನಿರ್ದೇಶನಾಲಯ, ನಿಗದಿತ ಸಮಯದೊಳಗೆ ಸುರಕ್ಷಾ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಂಸ್ಥೆಗಳಿಗೆ ಸೂಚಿಸಿತು. ಅಲ್ಲದೆ ಈ ಕುರಿತು ಯೋಜನಾ ವರದಿಯನ್ನು ಸೋಮವಾರದೊಳಗೆ ತಮಗೆ ಸಲ್ಲಿಸಬೇಕೆಂದೂ ಕಿಂಗ್ಫಿಶರ್ ಮತ್ತು ಏರ್ ಇಂಡಿಯಾಗೆ ತಿಳಿಸಿತು.<br /> <br /> ಇದಕ್ಕೆ ತಪ್ಪಿದಲ್ಲಿ ಕಿಂಗ್ಫಿಶರ್ನ ಪರವಾನಗಿ ರದ್ದತಿ ಮತ್ತು ಏರ್ ಇಂಡಿಯಾ ವಿಮಾನಗಳ ಕಾರ್ಯಾಚರಣೆಗೆ ಕಡಿವಾಣದಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತು. <br /> <br /> `ಈ ಸಂಸ್ಥೆಗಳನ್ನು ಮುಚ್ಚುವ ಭೀತಿ ಇಲ್ಲ. ಮಾತ್ರವಲ್ಲ ವಿಮಾನಗಳ ಪರವಾನಗಿಯನ್ನು ರದ್ದುಪಡಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿಲ್ಲ~ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ.ಭರತ್ ಭೂಷಣ್ ಇದೇ ವೇಳೆ ಸ್ಪಷ್ಟಪಡಿಸಿದರು.<br /> <br /> `ಎಲ್ಲ ವಿಮಾನಯಾನ ಸಂಸ್ಥೆಗಳೂ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ ಈ ಬಿಕ್ಕಟ್ಟು ಸುರಕ್ಷೆಗೆ ಅಡ್ಡಿ ಉಂಟುಮಾಡದಂತೆ ಮುನ್ನಡೆಸಿಕೊಂಡು ಹೋಗುವ ಸವಾಲನ್ನು ಸಂಸ್ಥೆಗಳು ಸ್ವೀಕರಿಸಬೇಕಾಗಿದೆ. ಅಲ್ಲದೆ ಈ ವಿಷಯದಲ್ಲಿ ಸುಲಭದ ಮಾರ್ಗಗಳನ್ನು ಯಾರೂ ಅನುಸರಿಸದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ~ ಎಂದು ಅವರು ಒತ್ತಿ ಹೇಳಿದರು.<br /> <br /> <strong>ವರದಿ ಸಲಹೆ: </strong>ವಿಮಾನಯಾನ ಕ್ಷೇತ್ರದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿದೆ ಎಂದು ಡಿಜಿಸಿಎ ಹಣಕಾಸು ನಿಗಾ ವಿಭಾಗದ ವರದಿ ತಿಳಿಸಿದ್ದು, ಇದರಿಂದ ಹೊರಬರಲು ಎಲ್ಲ ಸಂಸ್ಥೆಗಳೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದೆ. <br /> <br /> ನಾಗರಿಕ ವಿಮಾನಯಾನ ಸಚಿವಾಲಯದ ಸುರಕ್ಷಾ ಸಲಹಾ ಮಂಡಳಿಯ ಶಿಫಾರಸಿನ ಮೇರೆಗೆ, ಡಿಜಿಸಿಎ ಇದೇ ಮೊದಲ ಬಾರಿಗೆ ಇಂಥ ಹಣಕಾಸು ಪರಿಶೋಧನೆಗೆ ಮುಂದಾಗಿತ್ತು. ಕಿಂಗ್ಫಿಶರ್ ಮತ್ತು ಏರ್ಇಂಡಿಯಾವನ್ನು ಗಮನದಲ್ಲಿಟ್ಟುಕೊಂಡು ಡಿಜಿಸಿಎ ಈ ಎಚ್ಚರಿಕೆ ನೀಡಿದ್ದರೂ ಉಳಿದ ವಿಮಾನಯಾನ ಸಂಸ್ಥೆಗಳಿಗೂ ಇದು ಅನ್ವಯವಾಗಲಿದೆ ಎಂದು ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>