<p><strong>ನವದೆಹಲಿ: </strong>`ಶುದ್ಧ ಮತ್ತು ಸಮಾನ ಮನಸ್ಕರು ಒಗ್ಗೂಡಿ ಪಕ್ಷವೊಂದನ್ನು ರಚಿಸಬೇಕು~ ಎಂದಿರುವ ಅಣ್ಣಾ ಹಜಾರೆ ಸಲಹೆಗೆ ಅಣ್ಣಾ ಬಳಗ ತನ್ನ ಪೂರ್ಣ ಬೆಂಬಲ ನೀಡಿದ್ದರೂ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಅನೇಕ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದಾರೆ.<br /> <br /> ಅಲ್ಲದೆ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಗಿದೆ.<br /> ಜನಲೋಕಪಾಲ ಮಸೂದೆಯ ಮುಂದಿನ ಹಂತದ ಕುರಿತು ಹಜಾರೆ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಕೆಲವು ಚಾನೆಲ್ಗಳು ಸೋಮವಾರ ಪ್ರಸಾರ ಮಾಡಿದ್ದವು. <br /> <br /> ಈ ಸಂದರ್ಭದಲ್ಲಿ `ಎಲ್ಲಾ ಪಕ್ಷಗಳ ಶುದ್ಧ ಮತ್ತು ಸಮಾನ ಮನಸ್ಕ ವ್ಯಕ್ತಿಗಳಿಂದ~ ಕೂಡಿದ ಹೊಸ ಪಕ್ಷದ ಆಲೋಚನೆ ಬಗ್ಗೆ ಹೇಳಿ ಹಜಾರೆ ತಮ್ಮ ಬೆಂಬಲಿಗರನ್ನು ಅಚ್ಚರಿಗೊಳಿಸಿದರು.<br /> <br /> ಈ ಪಕ್ಷದ ನೇತೃತ್ವವನ್ನು ತಾವು ವಹಿಸುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರೂ ಇಂತಹ ಪಕ್ಷಕ್ಕೆ ತಮ್ಮ ಬೆಂಬಲ ನೀಡುವುದಾಗಿ ಘೋಷಿಸಿದರು.<br /> <br /> `ಅಣ್ಣಾ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ. ಮಾಧ್ಯಮಗಳ ವಿವಿಧ ಅರ್ಥ ವಿವರಣೆಯನ್ನು ಗಮನಿಸಬೇಡಿ, ಹಜಾರೆ ಹೇಳಿದ್ದರತ್ತ ಗಮನ ಹರಿಸಿ. ಯಾವುದೇ ಪಕ್ಷ ಅಥವಾ ರಂಗ ಸ್ಥಾಪಿಸುವ ಬಗ್ಗೆ ಅವರು ಹೇಳುತ್ತಿಲ್ಲ. ನಾವು ಹಾಗೆ ಮಾಡುತ್ತಿಲ್ಲ~ ಎಂದು ಅಣ್ಣಾ ಬಳಗದ ಹಿರಿಯ ಸದಸ್ಯ ಮನೀಶ್ ಸಿಸೋಡಿಯ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕಾಂಗ್ರೆಸ್ಸೇತರ, ಬಿಜೆಪಿಯೇತರ ರಂಗದ ಬಗ್ಗೆ ಅವರು ಹೇಳುತ್ತಿದ್ದಾರೆ ಎಂಬ ವಿವರಣೆಯನ್ನು ಅವರು ನಿರಾಕರಿಸಿ, ಇಂತಹ ರಂಗವನ್ನು ರೂಪಿಸುವಲ್ಲಿ ಭ್ರಷ್ಟಾಚಾರ ವಿರೋಧಿ ಭಾರತ ಯಾವುದೇ ಪಾತ್ರ ವಹಿಸುವುದಿಲ್ಲ ಎಂದರು.<br /> <br /> ಆದರೆ ಹಜಾರೆ ಅವರ ಹೇಳಿಕೆ ಬಗ್ಗೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ. ಕಳೆದ ವಾರ ರಾಳೇಗಣ ಸಿದ್ದಿಯಲ್ಲಿ ನಡೆದ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆ ಆಗಿರಲಿಲ್ಲ. ಜನಲೋಕಪಾಲ ಮಸೂದೆ ಮತ್ತು ಚುನಾವಣಾ ಸುಧಾರಣೆಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.<br /> <br /> `ಯಾವುದೇ ರಾಜಕೀಯ ಪಕ್ಷ ರಚಿಸುವ ಬಗ್ಗೆ ಸಭೆ ಚರ್ಚಿಸಿರಲಿಲ್ಲ~ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.<br /> <br /> ಅಣ್ಣಾ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಡಪಕ್ಷಗಳು ಈ ಕ್ರಮವನ್ನು ಬೆಂಬಲಿಸಿವೆ. `ಭ್ರಷ್ಟಾಚಾರ ವಿರುದ್ಧದ ಇಂತಹ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಚುನಾವಣೆಗಳಿಗೆ ಹಣ ಸಂಗ್ರಹಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಭ್ರಷ್ಟಾಚಾರ ನಡೆಸುತ್ತವೆ~ ಎಂದು ಆರೋಪಿಸಿದರು.<br /> <br /> ಆದರೆ ಕಾಂಗ್ರೆಸ್ ಅಣ್ಣಾ ರಾಜಕೀಯೇತರ ವ್ಯಕ್ತಿಯಾಗಿ ಉಳಿಯಬೇಕು ಎಂದು ಸಲಹೆ ನೀಡಿದೆ.<br /> <br /> ಈವರೆಗೆ ಅವರ ಹೋರಾಟ ರಾಜಕೀಯೇತರ ಆಗಿದೆ ಎಂದು ಪಕ್ಷದ ಹಿರಿಯ ನಾಯಕಿ ಉತ್ತರ ಪ್ರದೇಶದ ರೀಟಾ ಬಹುಗುಣ ಪ್ರತಿಕ್ರಿಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>`ಶುದ್ಧ ಮತ್ತು ಸಮಾನ ಮನಸ್ಕರು ಒಗ್ಗೂಡಿ ಪಕ್ಷವೊಂದನ್ನು ರಚಿಸಬೇಕು~ ಎಂದಿರುವ ಅಣ್ಣಾ ಹಜಾರೆ ಸಲಹೆಗೆ ಅಣ್ಣಾ ಬಳಗ ತನ್ನ ಪೂರ್ಣ ಬೆಂಬಲ ನೀಡಿದ್ದರೂ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಅನೇಕ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದಾರೆ.<br /> <br /> ಅಲ್ಲದೆ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಗಿದೆ.<br /> ಜನಲೋಕಪಾಲ ಮಸೂದೆಯ ಮುಂದಿನ ಹಂತದ ಕುರಿತು ಹಜಾರೆ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಕೆಲವು ಚಾನೆಲ್ಗಳು ಸೋಮವಾರ ಪ್ರಸಾರ ಮಾಡಿದ್ದವು. <br /> <br /> ಈ ಸಂದರ್ಭದಲ್ಲಿ `ಎಲ್ಲಾ ಪಕ್ಷಗಳ ಶುದ್ಧ ಮತ್ತು ಸಮಾನ ಮನಸ್ಕ ವ್ಯಕ್ತಿಗಳಿಂದ~ ಕೂಡಿದ ಹೊಸ ಪಕ್ಷದ ಆಲೋಚನೆ ಬಗ್ಗೆ ಹೇಳಿ ಹಜಾರೆ ತಮ್ಮ ಬೆಂಬಲಿಗರನ್ನು ಅಚ್ಚರಿಗೊಳಿಸಿದರು.<br /> <br /> ಈ ಪಕ್ಷದ ನೇತೃತ್ವವನ್ನು ತಾವು ವಹಿಸುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರೂ ಇಂತಹ ಪಕ್ಷಕ್ಕೆ ತಮ್ಮ ಬೆಂಬಲ ನೀಡುವುದಾಗಿ ಘೋಷಿಸಿದರು.<br /> <br /> `ಅಣ್ಣಾ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ. ಮಾಧ್ಯಮಗಳ ವಿವಿಧ ಅರ್ಥ ವಿವರಣೆಯನ್ನು ಗಮನಿಸಬೇಡಿ, ಹಜಾರೆ ಹೇಳಿದ್ದರತ್ತ ಗಮನ ಹರಿಸಿ. ಯಾವುದೇ ಪಕ್ಷ ಅಥವಾ ರಂಗ ಸ್ಥಾಪಿಸುವ ಬಗ್ಗೆ ಅವರು ಹೇಳುತ್ತಿಲ್ಲ. ನಾವು ಹಾಗೆ ಮಾಡುತ್ತಿಲ್ಲ~ ಎಂದು ಅಣ್ಣಾ ಬಳಗದ ಹಿರಿಯ ಸದಸ್ಯ ಮನೀಶ್ ಸಿಸೋಡಿಯ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕಾಂಗ್ರೆಸ್ಸೇತರ, ಬಿಜೆಪಿಯೇತರ ರಂಗದ ಬಗ್ಗೆ ಅವರು ಹೇಳುತ್ತಿದ್ದಾರೆ ಎಂಬ ವಿವರಣೆಯನ್ನು ಅವರು ನಿರಾಕರಿಸಿ, ಇಂತಹ ರಂಗವನ್ನು ರೂಪಿಸುವಲ್ಲಿ ಭ್ರಷ್ಟಾಚಾರ ವಿರೋಧಿ ಭಾರತ ಯಾವುದೇ ಪಾತ್ರ ವಹಿಸುವುದಿಲ್ಲ ಎಂದರು.<br /> <br /> ಆದರೆ ಹಜಾರೆ ಅವರ ಹೇಳಿಕೆ ಬಗ್ಗೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ. ಕಳೆದ ವಾರ ರಾಳೇಗಣ ಸಿದ್ದಿಯಲ್ಲಿ ನಡೆದ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆ ಆಗಿರಲಿಲ್ಲ. ಜನಲೋಕಪಾಲ ಮಸೂದೆ ಮತ್ತು ಚುನಾವಣಾ ಸುಧಾರಣೆಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.<br /> <br /> `ಯಾವುದೇ ರಾಜಕೀಯ ಪಕ್ಷ ರಚಿಸುವ ಬಗ್ಗೆ ಸಭೆ ಚರ್ಚಿಸಿರಲಿಲ್ಲ~ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.<br /> <br /> ಅಣ್ಣಾ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಡಪಕ್ಷಗಳು ಈ ಕ್ರಮವನ್ನು ಬೆಂಬಲಿಸಿವೆ. `ಭ್ರಷ್ಟಾಚಾರ ವಿರುದ್ಧದ ಇಂತಹ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಚುನಾವಣೆಗಳಿಗೆ ಹಣ ಸಂಗ್ರಹಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಭ್ರಷ್ಟಾಚಾರ ನಡೆಸುತ್ತವೆ~ ಎಂದು ಆರೋಪಿಸಿದರು.<br /> <br /> ಆದರೆ ಕಾಂಗ್ರೆಸ್ ಅಣ್ಣಾ ರಾಜಕೀಯೇತರ ವ್ಯಕ್ತಿಯಾಗಿ ಉಳಿಯಬೇಕು ಎಂದು ಸಲಹೆ ನೀಡಿದೆ.<br /> <br /> ಈವರೆಗೆ ಅವರ ಹೋರಾಟ ರಾಜಕೀಯೇತರ ಆಗಿದೆ ಎಂದು ಪಕ್ಷದ ಹಿರಿಯ ನಾಯಕಿ ಉತ್ತರ ಪ್ರದೇಶದ ರೀಟಾ ಬಹುಗುಣ ಪ್ರತಿಕ್ರಿಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>