ಗಣಿತಶಾಸ್ತ್ರದ ಅಧ್ಯಾಪಕಿಯಾಗಿರುವ ಪಾಂಡೆ, ಗಾಂಧಿಯನ್ನು ರಾಷ್ಟ್ರಪಿತಎಂದು ಕರೆಯಬಾರದು, ಅವರು ಈ ಬಿರುದನ್ನು ಹೇಗೆ ಪಡೆದರು ಎಂಬುದೇ ನನಗೆ ಗೊತ್ತಿಲ್ಲ, ಒಬ್ಬ ತಂದೆ ಇಬ್ಬರು ಮಕ್ಕಳನ್ನು ಬೇರೆ ಮಾಡುವುದಿಲ್ಲ, ದೇಶ ವಿಭಜನೆ ಮಾಡಿ ಹಿಂದೂಗಳ ಹತ್ಯೆಗೆ ಕಾರಣರಾದ ಗಾಂಧಿಯ ರಾಷ್ಟ್ರಪಿತ ಬಿರುದನ್ನು ವಾಪಾಸು ಪಡೆಯಬೇಕು ಎಂದು ಪಾಂಡೆ ಹೇಳಿದರು.