ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡ್ಸೆಗಿಂತ ಮೊದಲೇ ಹುಟ್ಟಿದ್ದರೇ‌ ಗಾಂಧಿ ಕೊಲ್ಲುತ್ತಿದ್ದೆ: ಪೂಜಾ ಶಕುನ್‌ ಪಾಂಡೆ

Last Updated 25 ಆಗಸ್ಟ್ 2018, 15:30 IST
ಅಕ್ಷರ ಗಾತ್ರ

ಆಲಿಘಡ: ನಾಥುರಾಮ್‌ಗೋಡ್ಸೆಗಿಂತ ನಾನು ಮೊದಲು ಹುಟ್ಟಿದ್ದರೇ ಮಹಾತ್ಮ ಗಾಂಧಿಯನ್ನು ನನ್ನ ಕೈಯಾರ ನಾನೇ ಹತ್ಯೆ ಮಾಡುತ್ತಿದ್ದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ (ಎಬಿಎಚ್‌ಎಂ) ರಾಷ್ಟ್ರೀಯ ಕಾರ್ಯದರ್ಶಿ ಡಾ. ಪೂಜಾ ಶಕುನ್‌ ಪಾಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ದೇಶದ ಮೊದಲ ‘ಹಿಂದೂ ನ್ಯಾಯಾಲಯ ಸ್ಥಾಪಿಸಿ, ಸ್ವಯಂ ಘೋಷಿತ ನ್ಯಾಯಧೀಶೆ ಆಗಿರುವಪೂಜಾ ಶಕುನ್‌ ಪಾಂಡೆ, ಮಹಾತ್ಮ ಗಾಂಧಿ ದೇಶವನ್ನು ವಿಭಜನೆ ಮಾಡಿ ಲಕ್ಷಾಂತರ ಹಿಂದೂಗಳ ಹತ್ಯೆಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.

ಸ್ವತಂತ್ರ ಭಾರತದಲ್ಲಿ ಮತ್ತೆಯಾರಾದರೂ ಮಹಾತ್ಮರಾಗಲೂ ಯತ್ನಿಸಿದರೆ ಅವರನ್ನು ಕೊಲ್ಲುವುದಾಗಿ ಗಾಂಧಿ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಗಣಿತಶಾಸ್ತ್ರದ ಅಧ್ಯಾಪಕಿಯಾಗಿರುವ ಪಾಂಡೆ, ಗಾಂಧಿಯನ್ನು ರಾಷ್ಟ್ರಪಿತಎಂದು ಕರೆಯಬಾರದು, ಅವರು ಈ ಬಿರುದನ್ನು ಹೇಗೆ ಪಡೆದರು ಎಂಬುದೇ ನನಗೆ ಗೊತ್ತಿಲ್ಲ, ಒಬ್ಬ ತಂದೆ ಇಬ್ಬರು ಮಕ್ಕಳನ್ನು ಬೇರೆ ಮಾಡುವುದಿಲ್ಲ, ದೇಶ ವಿಭಜನೆ ಮಾಡಿ ಹಿಂದೂಗಳ ಹತ್ಯೆಗೆ ಕಾರಣರಾದ ಗಾಂಧಿಯ ರಾಷ್ಟ್ರಪಿತ ಬಿರುದನ್ನು ವಾಪಾಸು ಪಡೆಯಬೇಕು ಎಂದು ಪಾಂಡೆ ಹೇಳಿದರು.

ನಾಥುರಾಮ್‌ಗೋಡ್ಸೆಯನ್ನು ಮಹಾನ್‌ ದೇಶಭಕ್ತ ಎಂದು ಕರೆದ ಪಾಂಡೆ, ಗಾಂಧಿಯನ್ನು ಶ್ಲಾಘಿಸಿ, ಗೋಡ್ಸೆಯನ್ನು ರಾಕ್ಷಸನಂತೆ ಬಿಂಬಿಸುವ ಇತಿಹಾಸವನ್ನು ಇಂದಿನ ಪೀಳಿಗೆಗೆ ಹೇಳಿಕೊಡಲಾಗುತ್ತಿದೆ. ಬಿಜೆಪಿ ಸರ್ಕಾರ ಈ ಇತಿಹಾಸವನ್ನು ಬದಲಾವಣೆ ಮಾಡಿ ಗಾಂಧಿ ಜೀವನದರ್ಶನವನ್ನು ನಿಷೇದಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT