<p><strong>ಇಸ್ಲಾಮಾಬಾದ್ (ಪಿಟಿಐ):</strong> ಭಯೋತ್ಪಾದನೆಗೆ ಕಮ್ಮಕ್ಕು ನೀಡುವ ಮೂಲಕ ಪಾಕಿಸ್ತಾನ ನಿರಂತರವಾಗಿ ಭಾರತಕ್ಕೆ ಉಪದ್ರವ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರವಾಸದ ವೇಳೆ ಮಾಡಿದ್ದ ಟೀಕೆ ‘ದುರದೃಷ್ಟಕರ’ ಎಂದು ಪಾಕಿಸ್ತಾನವು ಮಂಗಳವಾರ ಜರೆದಿದೆ.</p>.<p>‘ಭಾರತದ ಪ್ರಧಾನಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ‘ಕಿರುಕುಳ’ ಎಂದಿರುವುದು ದುರದೃಷ್ಟಕರ’ ಎಂದು ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಕ್ವಾಜಿ ಖಲಿಲ್ಉಲ್ಲಾ ತಿಳಿಸಿದ್ದಾರೆ.</p>.<p>ಪಾಕಿಸ್ತಾನವು ಭಾರತದ ಜತೆಗೆ ಶಾಂತಿಯುತ ಬಾಂಧವ್ಯ ಹಾಗೂ ಸೌಹಾರ್ದ ಸಂಬಂಧಗಳಲ್ಲಿ ಭರವಸೆ ಇಡುತ್ತದೆ ಎಂದು ಅವರು ತಿಳಿಸಿದ್ದಾರೆ.</p>.<p>‘ನೆರೆಯ ಸಾರ್ವಭೌಮ ರಾಷ್ಟ್ರದ ವಿರುದ್ಧ ಭಾರತ ನಕಾರಾತ್ಮಕ ಧೋರಣೆ ಹೊಂದಿದೆ ಎಂಬ ಪಾಕಿಸ್ತಾನ ನಿಲುವನ್ನು ಮೋದಿ ಅವರ ಹೇಳಿಕೆಗಳು ಸಮರ್ಥಿಸುತ್ತವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.</p>.<p>‘ಭಾರತದ ರಾಜಕಾರಣಿಗಳು ವಿಶ್ವಸಂಸ್ಥೆಯ ಸನ್ನದನ್ನು ಉಲ್ಲಂಘಿಸುವ ಜತೆಗೆ ಇತರ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಮಾಡಿದ ಹಸ್ತಕ್ಷೇಪವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದಾರೆ’ ಎಂದೂ ಅವರು ಜರೆದಿದ್ದಾರೆ.</p>.<p>ಅಲ್ಲದೇ, ‘ಎರಡು ಸೋದರ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ವೈಷಮ್ಯದ ಬೀಜಗಳನ್ನು ಬಿತ್ತುವ ಭಾರತದ ಯತ್ನಗಳು ಫಲಪ್ರದವಾಗುವುದಿಲ್ಲ’ ಎಂದು ಅವರು ಒತ್ತಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ):</strong> ಭಯೋತ್ಪಾದನೆಗೆ ಕಮ್ಮಕ್ಕು ನೀಡುವ ಮೂಲಕ ಪಾಕಿಸ್ತಾನ ನಿರಂತರವಾಗಿ ಭಾರತಕ್ಕೆ ಉಪದ್ರವ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರವಾಸದ ವೇಳೆ ಮಾಡಿದ್ದ ಟೀಕೆ ‘ದುರದೃಷ್ಟಕರ’ ಎಂದು ಪಾಕಿಸ್ತಾನವು ಮಂಗಳವಾರ ಜರೆದಿದೆ.</p>.<p>‘ಭಾರತದ ಪ್ರಧಾನಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ‘ಕಿರುಕುಳ’ ಎಂದಿರುವುದು ದುರದೃಷ್ಟಕರ’ ಎಂದು ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಕ್ವಾಜಿ ಖಲಿಲ್ಉಲ್ಲಾ ತಿಳಿಸಿದ್ದಾರೆ.</p>.<p>ಪಾಕಿಸ್ತಾನವು ಭಾರತದ ಜತೆಗೆ ಶಾಂತಿಯುತ ಬಾಂಧವ್ಯ ಹಾಗೂ ಸೌಹಾರ್ದ ಸಂಬಂಧಗಳಲ್ಲಿ ಭರವಸೆ ಇಡುತ್ತದೆ ಎಂದು ಅವರು ತಿಳಿಸಿದ್ದಾರೆ.</p>.<p>‘ನೆರೆಯ ಸಾರ್ವಭೌಮ ರಾಷ್ಟ್ರದ ವಿರುದ್ಧ ಭಾರತ ನಕಾರಾತ್ಮಕ ಧೋರಣೆ ಹೊಂದಿದೆ ಎಂಬ ಪಾಕಿಸ್ತಾನ ನಿಲುವನ್ನು ಮೋದಿ ಅವರ ಹೇಳಿಕೆಗಳು ಸಮರ್ಥಿಸುತ್ತವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.</p>.<p>‘ಭಾರತದ ರಾಜಕಾರಣಿಗಳು ವಿಶ್ವಸಂಸ್ಥೆಯ ಸನ್ನದನ್ನು ಉಲ್ಲಂಘಿಸುವ ಜತೆಗೆ ಇತರ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಮಾಡಿದ ಹಸ್ತಕ್ಷೇಪವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದಾರೆ’ ಎಂದೂ ಅವರು ಜರೆದಿದ್ದಾರೆ.</p>.<p>ಅಲ್ಲದೇ, ‘ಎರಡು ಸೋದರ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ವೈಷಮ್ಯದ ಬೀಜಗಳನ್ನು ಬಿತ್ತುವ ಭಾರತದ ಯತ್ನಗಳು ಫಲಪ್ರದವಾಗುವುದಿಲ್ಲ’ ಎಂದು ಅವರು ಒತ್ತಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>